ಅಥಣಿ(ಬೆಳಗಾವಿ) : ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ವಿಶೇಷ ಕಾನೂನು ತರುವ ಅವಶ್ಯಕತೆಯಿದೆ. ಕೆಲವು ದುಷ್ಕ ಶಕ್ತಿಗಳನ್ನು ಮಟ್ಟಹಾಕಲು ಈಗಿರುವ ಕಾನೂನು ಸಾಲದು ಮುಂಬರುವ ಅಧಿವೇಶನದಲ್ಲಿ ವಿಶೇಷ ಕಾನೂನು ರಚನೆ ಮಾಡಿ ತಪ್ಪಿತಸ್ಥರಿಗೆ ತಕ್ಷಣ ಶಿಕ್ಷೆ ನೀಡುವಂತ ಕಾನೂನು ರಚನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚರ್ಚೆ ಮಾಡುತ್ತಿದ್ದಾರೆಂದು ವಿಧಾನಪರಿಷತ್ ಸದಸ್ಯ ಲಕ್ಷ್ಮಣ್ ಸವದಿ ಹೇಳಿದರು.
ಅಥಣಿ ಪಟ್ಟಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ ಕದಡುವ, ದೇಶ ವಿರೋಧಿ ಚಟುವಟಿಕೆ ಮಾಡುತ್ತಿರುವ ಮತ್ತು ಸಮಾಜದಲ್ಲಿ ಅಶಾಂತಿ ಮೂಡಿಸುವಂತವರಿಗೆ ತಕ್ಷಣವೇ ಶಿಕ್ಷೆ ಕೊಡುವಂತ ಕಾನೂನು ರಚನೆ ಆಗಬೇಕಾಗಿದೆ. ಕೆಲವರು ಉತ್ತರ ಪ್ರದೇಶ ಸರ್ಕಾರದಂತೆ ಉಗ್ರ ಕಾನೂನು ರೂಪಿಸುವಂತೆ ಕೇಳುತ್ತಿದ್ದಾರೆ. ಯುಪಿಗಿಂತಲೂ ಉಗ್ರ ಕಾನೂನು ರೂಪಿಸಲು ಸದ್ಯ ಚರ್ಚೆ ನಡೆಯುತ್ತಿದೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯ ಉಪಾಧ್ಯಕ್ಷ ಸವದಿ ಮಾಹಿತಿ ನೀಡಿದ್ದಾರೆ.