ನವದೆಹಲಿ/ಬೆಂಗಳೂರು: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಹೈಕಮಾಂಡ್ ನಾಯಕರನ್ನು ಭೇಟಿ ಆಗಲಿದ್ದಾರೆ. ಇಂದು ಸಿಎಂ ಅವರು ಅಮಿತ್ ಶಾ ಹಾಗೂ ನಡ್ಡಾ ಭೇಟಿಯಾಗಿ ಕೆಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಭೇಟಿ ವೇಳೆ ಹೈಕಮಾಂಡ್ನಿಂದ ಸ್ಪಷ್ಟ ಸಂದೇಶ ರವಾನಿಸುವ ಸಾಧ್ಯತೆ ಇದೆ. ಹೈಕಮಾಂಡ್ ಸೂಚನೆ ಬಗ್ಗೆ ರಾಜ್ಯ ಬಿಜೆಪಿ ನಾಯಕರಿಗೆ ಕುತೂಹಲ ಹುಟ್ಟಿಕೊಂಡಿದ್ದು, ಆ ಸಂದೇಶದಿಂದ ಯಾವ ಬದಲಾವಣೆ..? ಯಾರಿಗೆ ಶಾಕ್.. ಯಾರಿಗೆ ಲಕ್ ಎಂಬುದು ತಿಳಿದುಬರಲಿದೆ.
ಸದ್ಯ ದೆಹಲಿಯಲ್ಲಿ ಸಿಎಂ ಇದ್ದರೆ, ಇತ್ತ ಸಂಪುಟ ಸಭೆ ಸಂಕಷ್ಟ ಎದುರಾಗಿದೆ. ಸತತ 3ನೇ ಬಾರಿಗೆ ಸಂಪುಟ ಸಭೆ ಮುಂದೂಡಿಕೆಯಾಗಿದೆ. ಈ ಹಿಂದೆ ಮೇ 5ರಿಂದ ಮೇ 11ಕ್ಕೆ ಮುಂದೂಅಡಲಾಯ್ತು. ಆದರೆ ಇಂದು ಬೆಳಗ್ಗೆ 11ಕ್ಕೆ ಇದ್ದ ಸಭೆ ಸಂಜೆಗೆ ಮುಂದೂಡಲಾಯ್ತು. ಇದೀಗ ಇಂದು ಸಂಜೆ ನಿಗದಿ ಆಗಿದ್ದ ಕ್ಯಾಬಿನೆಟ್ ನಾಳೆಗೆ ಮುಂದೂಡಿಕೆಯಾಗಿದೆ.
Laxmi News 24×7