Breaking News

ತೆಲುಗು ಸಿನಿಮಾದಲ್ಲಿ ರಿಷಬ್​ ಶೆಟ್ಟಿ; ಸೆನ್ಸೇಷನ್​ ಸೃಷ್ಟಿಸಿದ ಟ್ರೇಲರ್​

Spread the love

ರಿಷಬ್​ ಶೆಟ್ಟಿ ಟ್ರೇಲರ್​ನ ಕೊನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕಲೀಲ್​ ಹೆಸರಿನ ಪಾತ್ರವನ್ನು ರಿಷಬ್​ ಮಾಡಿದ್ದಾರೆ. ಇಲ್ಲಿ ‘ಕೆಜಿಎಫ್​’ ಚಿತ್ರದ ಉಲ್ಲೇಖವನ್ನೂ ಮಾಡಲಾಗಿದೆ.ರಿಷಬ್​ ಶೆಟ್ಟಿ (Rishab Shetty) ನಟನೆ, ನಿರ್ಮಾಣ, ಹಾಗೂ ನಿರ್ದೇಶನದಲ್ಲಿ ಮಿಂಚಿದ್ದಾರೆ.

ಅವರಿಗೆ ಪರಭಾಷೆಯಲ್ಲೂ ಬೇಡಿಕೆ ಸೃಷ್ಟಿ ಆಗುತ್ತಿದೆ. ತೆಲುಗಿನಲ್ಲಿ ಸಿದ್ಧಗೊಂಡಿರುವ ‘ಮಿಷನ್​ ಇಂಪಾಸಿಬಲ್​’ ಚಿತ್ರದಲ್ಲಿ (Mishan Impossible Trailer) ಈಗ ರಿಷಬ್ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್​ ರಿಲೀಸ್​ ಆಗಿದ್ದು ಸಖತ್​ ಫನ್ನಿ ಆಗಿದೆ. ನಟಿ ತಾಪ್ಸಿ ಪನ್ನು (Taapsee Pannu) ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜತೆಗೆ ಮಕ್ಕಳ ಪಾತ್ರ ಕೂಡ ​ ಹೈಲೈಟ್ ಆಗಿದೆ. ಈ ಚಿತ್ರದ ಟ್ರೇಲರ್​ನಲ್ಲಿರಿಷಬ್​ ಶೆಟ್ಟಿ ಕೂಡ ಕಾಣಿಸಿಕೊಂಡಿದ್ದು, ಗಮನ ಸೆಳೆದಿದ್ದಾರೆ.

ಮೂರು ಬಾಲಕರು ಸಿನಿಮಾದಲ್ಲಿ ಹೈಲೈಟ್​ ಆಗಿದ್ದಾರೆ. ಸಿನಿಮಾದಲ್ಲಿ ಅವರ ಹೆಸರು ರಘುಪತಿ, ರಾಘವ, ರಾಜಾರಾಮ್. ಸಿನಿಮಾ ಎಂದರೆ ಇವರಿಗೆ ಪಂಚಪ್ರಾಣ. ದೇಶದ ಮೋಸ್ಟ್ ವಾಂಟೆಡ್​ ಕ್ರಿಮಿನಲ್​ ದಾವೂದ್​ ಇಬ್ರಾಹಿಂನನ್ನು ಅರೆಸ್ಟ್ ಮಾಡಿದ್ರೆ 3 ಲಕ್ಷ ರೂಪಾಯಿ ಬಹುಮಾನ ಸಿಗುತ್ತದೆ ಎನ್ನುವ ಜಾಹೀರಾತು ಕಾಣುತ್ತದೆ. ಅಲ್ಲಿಂದ ಇವರ ಪಯಣ ಶುರು. ದಾವೂದ್​ನನ್ನು ಹುಡುಕೋಕೆ ಹೋಗಿ ಈ ಮೂವರು ನಾನಾ ತೊಂದರೆಗೆ ಸಿಲುಕುತ್ತಾರೆ.

ರಿಷಬ್​ ಶೆಟ್ಟಿ ಟ್ರೇಲರ್​ನ ಕೊನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕಲೀಲ್​ ಹೆಸರಿನ ಪಾತ್ರವನ್ನು ರಿಷಬ್​ ಮಾಡಿದ್ದಾರೆ. ಇಲ್ಲಿ ‘ಕೆಜಿಎಫ್​’ ಚಿತ್ರದ ಉಲ್ಲೇಖವನ್ನೂ ಮಾಡಲಾಗಿದೆ. ಅದು ಹೇಗೆ ಎನ್ನುವುದನ್ನು ನೀವು ಟ್ರೇಲರ್​ನಲ್ಲಿ ಕಣ್ತುಂಬಿಕೊಳ್ಳಬೇಕು. ‘ಮಿಷನ್​ ಇಂಪಾಸಿಬಲ್​’ ಸಿನಿಮಾದಲ್ಲಿ ರಿಷಬ್​ ಪಾತ್ರ ಎಷ್ಟು ಹೊತ್ತು ಇರಲಿದೆ ಎನ್ನುವ ಕುತೂಹಲ ಸದ್ಯದ್ದು. ಈ ಸಿನಿಮಾದ ಕೆಲ ದೃಶ್ಯಗಳನ್ನು ಬೆಂಗಳೂರಿನಲ್ಲೂ ಶೂಟ್​ ಮಾಡಿರೋದು ವಿಶೇಷ.

‘ಮಿಷನ್​ ಇಂಪಾಸಿಬಲ್​’ ಅಲ್ಲದೆ, ಇನ್ನೂ ಹಲವು ಸಿನಿಮಾಗಳಲ್ಲಿ ರಿಷಬ್​ ಶೆಟ್ಟಿ ನಟಿಸುತ್ತಿದ್ದಾರೆ. ‘ಕಾಂತಾರ’, ‘ರುದ್ರಪ್ರಯಾಗ’, ಶಿವರಾಜ್​ಕುಮಾರ್​ ನಟನೆಯ 126ನೇ ಸಿನಿಮಾಗೆ ಆಯಕ್ಷನ್​ ಕಟ್​ ಹೇಳುತ್ತಿದ್ದಾರೆ.

ಎರಡನೇ ಬಾರಿಗೆ ತಂದೆಯಾದ ರಿಷಬ್​

2017ರಲ್ಲಿ ಪ್ರಗತಿ ಶೆಟ್ಟಿ ಜೊತೆ ರಿಷಬ್​ ಶೆಟ್ಟಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿಗೆ 2019ರಲ್ಲಿ ಮೊದಲ ಮಗು ಜನಿಸಿತು. ಪುತ್ರನಿಗೆ ರಣ್ವಿತ್​ ಶೆಟ್ಟಿ ಎಂದು ಹೆಸರು ಇಟ್ಟಿದ್ದಾರೆ. ಈಗ ಎರಡನೇ ಮಗುವಿಗೆ ಪ್ರಗತಿ ಶೆಟ್ಟಿ ಜನ್ಮ ನೀಡಿರುವುದು ಅವರ ಕುಟುಂಬದಲ್ಲಿ ಖುಷಿ ತಂದಿದೆ. ಮಗಳ ಆಗಮನದಿಂದ ಸಂಭ್ರಮಿಸುತ್ತಿರುವ ಈ ದಂಪತಿಗೆ ಚಿತ್ರರಂಗದ ಅನೇಕರು ಶುಭ ಕೋರಿದ್ದಾರೆ. ‘ಮುದ್ದಾದ ಮಗುವಿಗೆ ಜನ್ಮನೀಡಿದ ಪ್ರಗತಿ ಶೆಟ್ಟಿ ಮತ್ತು ರಿಷಬ್​ ಶೆಟ್ಟಿ ಅಣ್ಣನಿಗೆ ಅಭಿನಂದನೆಗಳು. ನಮ್ಮ ಪ್ರೀತಿ, ಪ್ರಾರ್ಥನೆ ಸದಾ ನಿಮ್ಮೊಂದಿಗೆ’ ಎಂದು ನಟ ಶೈನ್​ ಶೆಟ್ಟಿ ಬರೆದುಕೊಂಡಿದ್ದಾರೆ.


Spread the love

About Laxminews 24x7

Check Also

ಪತಿಯನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದ ಪತ್ನಿ ಹಾಗೂ ಕೊಲೆ ಮಾಡಲು ಯತ್ನಿಸಿದ್ದ ಆರೋಪಿಗೆ ತಲಾ ಹತ್ತು ವರ್ಷ ಜೈಲು ಶಿಕ್ಷೆ

Spread the loveಕಾರವಾರ: ದಾಂಡೇಲಿ ಸಮೀಪದ ಅಂಬೇವಾಡಿ ಗಾಂವಠಾಣ ನಿವಾಸಿ ಅಂಕುಶ್​ ಸುತಾರ ಅವರ ಕೊಲೆಗೆ ಸುಪಾರಿ ಕೊಟ್ಟಿದ್ದ ಪ್ರಕರಣದಲ್ಲಿ ಅಂಕುಶ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ