Breaking News

ಕರೆನ್ಸಿ ಬದಾವಣೆಗೆ ಹೋಗಿದ್ದಾಗ ಫೈರಿಂಗ್​ ಆಗಿದೆ: ಮೃತ ನವೀನ್ ಜತೆಗಿದ್ದ ವಿದ್ಯಾರ್ಥಿಗಳ ಮಾತು

Spread the love

ಗ್ರೋಸರಿ ತರುವ ಸಲುವಾಗಿ ಹೊರಹೋಗಿದ್ದ ಹಾವೇರಿ ಮೂಲದ ನವೀನ್ ಬೆಳಗ್ಗೆ 7 ಗಂಟೆಗೆ ನಡೆದ ರಾಕೆಟ್‌ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ. ಸದ್ಯ ಖಾರ್ಕಿವ್‌ನ ಶವಾಗಾರದಲ್ಲಿ ನವೀನ್‌ ಮೃತದೇಹ ಇರಿಸಲಾಗಿದೆ. ಉಕ್ರೇನ್‌ನ ಖಾರ್ಕಿವ್‌ನಲ್ಲಿ ನವೀನ್‌ ವ್ಯಾಸಂಗ ಮಾಡುತ್ತಿದ್ದ.

ಖಾರ್ಕಿವ್‌ನಲ್ಲಿ ಐವರು ಸ್ನೇಹಿತರ ಜೊತೆ ನವೀನ್‌ ವಾಸವಾಗಿದ್ದ.

ಖಾರ್ಕಿವ್‌ನಲ್ಲಿ ಕರ್ನಾಟಕದ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ರಷ್ಯಾ ಸೇನೆಯ ರಾಕೆಟ್‌ ದಾಳಿಗೆ ನವೀನ್‌ ಬಲಿಯಾಗಿದ್ದಾನೆ(Death). ಮೃತ ನವೀನ್​ ಶೇಖರಪ್ಪ ಗ್ಯಾನಗೌಡರ್ (21) ಕರ್ನಾಟಕದ ಹಾವೇರಿ ಮೂಲದವರು. ಗ್ರೋಸರಿ ತರುವ ಸಲುವಾಗಿ ಹೊರಹೋಗಿದ್ದ ಹಾವೇರಿ ಮೂಲದ ನವೀನ್ ಬೆಳಗ್ಗೆ 7 ಗಂಟೆಗೆ ನಡೆದ ರಾಕೆಟ್‌(Rocket) ದಾಳಿಯಲ್ಲಿ ಸಾವನ್ನಪ್ಪಿದ್ದಾನೆ. ಸದ್ಯ ಖಾರ್ಕಿವ್‌ನ ಶವಾಗಾರದಲ್ಲಿ ನವೀನ್‌ ಮೃತದೇಹ ಇರಿಸಲಾಗಿದೆ. ಉಕ್ರೇನ್‌ನ(Ukraine) ಖಾರ್ಕಿವ್‌ನಲ್ಲಿ ನವೀನ್‌ ವ್ಯಾಸಂಗ ಮಾಡುತ್ತಿದ್ದ. ಖಾರ್ಕಿವ್‌ನಲ್ಲಿ ಐವರು ಸ್ನೇಹಿತರ ಜೊತೆ ನವೀನ್‌ ವಾಸವಾಗಿದ್ದ.

ಮೃತ ನವೀನ್ ಜತೆಗಿದ್ದ ವಿದ್ಯಾರ್ಥಿಗಳು ಬಿಚ್ಚಿಟ್ಟ ಸತ್ಯ ಏನು?

ನಾವು ಮೊನ್ನೆಯಿಂದಲೂ ಒಟ್ಟಿಗೆ ಇದ್ದೇವು. ನಿನ್ನೆ ರಾತ್ರಿ ತನಕ ಬಂಕರ್​ನಲ್ಲಿಯೇ ಇದ್ದರು. ನವೀನ್​ ಎಂಬಿಬಿಎಸ್ ನಾಲ್ಕನೇ ವರ್ಷ ವ್ಯಾಸಾಂಗ ಮಾಡುತ್ತಿದ್ದರು. ನಾವು ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು. ನವೀನ್ ಸೂಪರ್ ಮಾರ್ಕೆಟ್​​ನಲ್ಲಿ ಕರೆನ್ಸಿ ಬದಾವಣೆಗೆ ಹೋಗಿದ್ದರು. ಈ ವೇಳೆ ಸರಿ ಸಾಲಿನಲ್ಲಿ ನಿಂತಾಗ ಫೈಯರ್​ ಆಗಿದೆ. ಡೆಸ್​​ಬ್ರೋ ಅನ್ನುವ ರೋಡ್​​ನಲ್ಲಿ ಶಲ್​ ದಾಳಿ ಮಾಡಿದ್ದಾರೆ. ಮೃತ ನವೀನ್ ಪೊಲ್ಯಾಂಡ್​​ಗೆ ಹೋಗಲು ಸಿದ್ಧತೆ ಮಾಡಿಕೊಂಡಿದ್ದರು ಎಂದು ನವೀನ್​ ಜತೆಗಿದ್ದ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ.

ರಾಯಭಾರಿ ಅಧಿಕಾರಿ ಜೊತೆ ನವೀನ್ ಸಹೋದರ ಮಾತುಕತೆ

ನವೀನ್ ಇಲ್ಲಾ ಎಂಬುವ ಸುದ್ದಿ ಹರಿದಾಡುತ್ತಿರುವ ಬಗ್ಗೆ ರಾಯಭಾರಿ ಅಧಿಕಾರಿ ಜೊತೆ ನವೀನ್ ಸಹೋದರ ಮಾತುಕತೆ ನಡೆಸಿದ್ದಾರೆ. ಬೆಳಗ್ಗೆ ದಿನಬಳಕೆ ವಸ್ತು ತರಲು ಹೋಗಿದ್ದಾಗ ಅವಗಢವಾಗಿದೆ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

2026ರ ಮೊದಲ ಚಂದ್ರಗ್ರಹಣ: ಈ ರಾಶಿಯವರಿಗೆ ಒಲಿಯಲಿದೆ ರಾಜಯೋಗ ಹೋಳಿ ಹಬ್ಬದಂದೇ ಯಾರಿಗೆ ಅದೃಷ್ಟ? ಯಾರಿಗೆ ಎಚ್ಚರಿಕೆ?

Spread the love2026ರ ವರ್ಷವು ಆಧ್ಯಾತ್ಮಿಕವಾಗಿ ಸಂಚಲನ ಮೂಡಿಸಲು ಸಜ್ಜಾಗಿದೆ. ಈ ಬಾರಿ ಬಣ್ಣಗಳ ಹಬ್ಬ ಹೋಳಿಯ ಸಂಭ್ರಮದ ನಡುವೆಯೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ