Breaking News

ಮದ್ವೆ ಆಗ್ತೀನಿ ಅಂತ ಮಗು ಕೊಟ್ಟು ಕೈ ಕೊಟ್ಟಿದ್ದಾರೆ.! ಬಿಜೆಪಿ MLA ವಿರುದ್ಧ ಸ್ಫೋಟಕ ಆರೋಪ..!

Spread the love

ಬೆಂಗಳೂರು: ಬಿಜೆಪಿ MLA ರಾಜ್​ಕುಮಾರ್ ಪಾಟೀಲ್ ವಿರುದ್ಧ ಸ್ಫೋಟಕ ಆರೋಪ ಕೇಳಿ ಬರುತ್ತಿದ್ದು, ನನ್ನ ಮಗನಿಗೆ ಲೀಗಲ್​ ಉತ್ತರದಾಯಿತ್ವ ಕೊಡಿ, ಮದ್ವೆ ಆಗ್ತೀನಿ ಅಂತ ಮಗು ಕೊಟ್ಟು ಕೈ ಕೊಟ್ಟಿದ್ದಾರೆ. ನನ್ನ ಮಗನಿಗೆ ನ್ಯಾಯ ಬೇಕು ಅಂತ ಮಹಿಳೆ ವಕೀಲ ಜಗದೀಶ್​ ಸಂಪರ್ಕ ಮಾಡಿದ್ದು, ಘಟನೆಯ ಮಾಹಿತಿ ನೀಡಿದ್ದಾರೆ.

 

 

 

ಈ ಬಗ್ಗೆ ​ ಫೇಸ್​ಬುಕ್​ ಲೈವ್​ನಲ್ಲಿ ಮಾತನಾಡಿರುವ ಮಹಿಳೆ, ರಾತ್ರೋರಾತ್ರಿ 10ಕ್ಕೂ ಹೆಚ್ಚು ಜನ ಮನೆಗೆ ನುಗ್ಗಿದ್ರು, ಯಾಕೆ ಏನು ಎತ್ತ ಹೇಳದೆ ಠಾಣೆಯಲ್ಲಿ ಕೂಡಿ ಹಾಕಿದ್ದರೂ, ನನ್ನ ಮೇಲೆ ಕಂಪ್ಲೆಂಟ್​ ಇಲ್ಲ, ಕೇಸ್ ಇಲ್ಲ, ಫೋನ್ ಕಿತ್ಕೊಂಡಿದ್ದಾರೆ. ಸ್ಟೇಷನ್​ನಲ್ಲಿ ಫೈವ್ ಸ್ಟಾರ್​ ಟ್ರೀಟ್​ಮೆಂಟ್ ಎಲ್ಲಾ ಕೊಟ್ಟಿದ್ದಾರೆ, ಅವರು ಹೇಳಿದಂತೆ ಬರೆದುಕೊಟ್ಟರೆ ಸೆಟ್ಲ್​ ಮೆಂಟ್ ಮಾಡ್ತಾರಂತೆ.

 

 

ಪೊಲೀಸರಿಂದ ನನಗೆ ತೊಂದರೆ ಆಗಿಲ್ಲ, ದೊಡ್ಡವರಿಂದ ತೊಂದರೆ ಆಗಿದೆ, ಇಷ್ಟು ಕೊಡ್ತಾರೆ ನೀವು ಒಪ್ಪಿಕೊಳ್ಳಿ ಅಂತ ಸೆಟ್ಲ್​ಮೆಂಟ್​​ಗೆ ಕೂತಿದ್ದರು, ಅವರೇ ಮುಂದೆ ಬರ್ಲಿ, ಪಿಕ್ಚರ್​ಗೆ ಬರಲಿ ಅಂತ ನಾನು ಕೇಳ್ತಾ ಇದ್ದೇನೆ, ಅನ್ಯಾಯ ಮಾಡಿದವರಿಗೆ ಪನಿಷ್​ಮೆಂಟ್ ಆಗಬೇಕು, ದುಡ್ಡು ಬೇಡ. ಕಾಂಗ್ರೆಸ್​ನವರು ಹೇಳಿ ಮಾಡ್ಸಿದ್ದಾರೆ ಅಂತ ಬರೆದುಕೊಡಬೇಕಂತೆ, ನನಗೂ ಕಾಂಗ್ರೆಸ್​ಗೂ ಯಾವ ಸಂಬಂಧವೂ ಇಲ್ಲ, ಯಾರೂ ಗೊತ್ತಿಲ್ಲ. 8 ವರ್ಷದಿಂದಲೂ ನ್ಯಾಯ ಕೇಳ್ತಿದ್ದೇನೆ, ಸಿಎಂಗೆ ದೂರು ಕೊಟ್ಮೇಲೆ ಇಷ್ಟೆಲ್ಲಾ ಆಗಿದೆ.

 

 

ಅವ್ನು ನನ್ನ ಮಗನಿಗೆ ಒಂದು ಜೀವನ ಕೊಟ್ಟರೆ ಸಾಕು, ಬೇರೆ ಏನೂ ಬೇಕಿಲ್ಲ, ನನ್ನ ಜೀವನ ಕಷ್ಟ ಪಟ್ಟುಕೊಂಡು ನೋಡಿಕೊಂಡು ಬಂದಿದ್ದೇನೆ, ಈಗ ನೋಡಿದ್ರೆ ನನ್ನ ಮೇಲೆನೇ ದೌರ್ಜನ್ಯ ನಡೀತಿದೆ ಎಂದು ಮಹಿಳೆ ಆರೋಪ ಮಾಡುತ್ತಿದ್ದು, 14 ವರ್ಷದ ಮಗನಿಗೆ ಅವರೇ ಅಪ್ಪ ಅಂತ ಒಪ್ಪಿಕೊಳ್ಳಲಿ, ನನಗೆ ಸ್ಟೇಷನ್ ಸೆಟ್ಲ್​ಮೆಂಟ್ ಬೇಡ, ಲೀಗಲ್ ಆಗಿ ತಗೋತೀನಿ, ಸೋಷಿಯಲ್ ಮೀಡಿಯಾದಲ್ಲಿ ಮಹಿಳೆ ನ್ಯಾಯ ಕೇಳಿದ್ದಾರೆ.


Spread the love

About Laxminews 24x7

Check Also

ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಮೃತಪಟ್ಟ ಕುಟುಂಬಗಳಿಗೆ ₹5 ಲಕ್ಷ ಪರಿಹಾರ

Spread the love ಬೆಂಗಳೂರು: ಮೈಕ್ರೋ ಫೈನಾನ್ಸಿಯರ್​ಗಳ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಜನರ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರ ನೀಡಲಾಗುವುದು ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ