Breaking News

ಕಾಂಗ್ರೆಸ್ ಆಯ್ತು ಈಗ ಬಿಜೆಪಿ ಸರದಿ; ಕೇಸರಿ ನಾಯಕರ ಗುಸು ಗುಸು ವಿಡಿಯೋ ವೈರಲ್

Spread the love

ಬೆಂಗಳೂರು: ಉಪಚುನಾವಣೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ತವರು ಕ್ಷೇತ್ರ ಹಾನಗಲ್ ನಲ್ಲಿ ಸೋಲನಭವಿಸಿದ ನೋವಿನಲ್ಲಿರುವಾಗಲೇ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಆಡಳಿತ ಪಕ್ಷದ ನಾಯಕರೇ ಅಸಮಾಧಾನ ವ್ಯಕ್ತಪಡಿಸಿರುವ ಗುಸು ಗುಸು ವಿಡಿಯೋ ವೈರಲ್ ಆಗಿದೆ.

 

ಹಾನಗಲ್ ಕ್ಷೇತ್ರ ನಮಗೆ ಕೊಟ್ಟಿದ್ದರೆ ಉಪಚುನಾವಣೆಯಲ್ಲಿ ಗೆಲ್ಲಿಸಬಹುದಿತ್ತು ಎಂದು ವಸತಿ ಸಚಿವ ವಿ.ಸೋಮಣ್ಣ ಹಾಗೂ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಇಬ್ಬರು ಮಾತನಾಡಿಕೊಳ್ಳುತ್ತಿರುವ ಸಂಭಾಷಣೆ ಜಗಜ್ಜಾಹೀರಾಗಿದೆ.

ಸಚಿವ ಸೋಮಣ್ಣ, ನಿನಗೆ ಎಷ್ಟು ಶಕ್ತಿ ಇದೆ ಎಂದು ಹೇಳು 135 ಸೀಟು ತರ್ತೀವಿ ಅಂತಾ ಹೋಗಿ ಹೇಳು ಎಂದು ಯತ್ನಾಳ್ ಬಳಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಯತ್ನಾಳ್ ಹಾನಗಲ್ ನಲ್ಲಿ ನಿಮಗೆ ಹಾಕಿದ್ದರೆ ಸಾಕಿತ್ತು ಎಂದಿದ್ದಾರೆ. ಇದಕ್ಕೆ ಉತ್ತರಿಸಿರುವ ಸೋಮಣ್ಣ ನಾವಿಬ್ಬರೇ ಸಾಕಿತ್ತು. ಇದನ್ನೆಲ್ಲ ನಾವು ಯಾರಿಗೆ ಹೇಳೋದು? ಎಂದಿದ್ದಾರೆ.

ಒಟ್ಟಾರೆ ಕಾಂಗ್ರೆಸ್ ನಾಯಕರ ಗುಸು ಗುಸು ಆಡಿಯೋ ವೈರಲ್ ಬೆನ್ನಲ್ಲೇ ಇದೀಗ ಬಿಜೆಪಿ ನಾಯಕರ ಆಡಿಯೋ-ವಿಡಿಯೋ ಬಹಿರಂಗವಾಗಿದ್ದು, ಉಪಚುನಾವಣೆ ಉಸ್ತುವಾರಿ ಕುರಿತಾಗಿ ಇಬ್ಬರು ನಾಯಕರು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ