ಬೆಂಗಳೂರು: ಕೆಪಿಎಸ್ಸಿ ಪರೀಕ್ಷೆಯಲ್ಲಿ ಅಕ್ರಮ ಅರೋಪ ಕೇಳಿದ ಬಂದ ಹಿನ್ನೆಲೆ ಸಂದರ್ಶನ ದಿನಾಂಕವನ್ನ ಕರ್ನಾಟಕ ಲೋಕಸೇವಾ ಆಯೋಗ ಮುಂದೂಡಿಕೆ ಮಾಡಿದೆ.
ಗೆಜೆಟೆಡ್ ಪ್ರೊಬೇಷನರಿ ಹುದ್ದೆ ನೇಮಕಾತಿ ಸಂಬಂಧ 1:3 ಸಂದರ್ಶನಕ್ಕೆ KPSC ಪಟ್ಟಿ ಬಿಡುಗಡೆ ಮಾಡಿತ್ತು. ಮಾ.23ರಿಂದ ಸಂದರ್ಶನಕ್ಕೆ ದಿನಾಂಕ ನಿಗದಿ ಮಾಡಲಾಗಿತ್ತು. ಅಕ್ರಮದ ಆರೋಪ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸಂದರ್ಶನವನ್ನ ಮುಂದೂಡಿಕೆ ಮಾಡಲಾಗಿದೆ.
ಮುಂದಿನ ಆದೇಶದವರೆಗೂ ಸಂದರ್ಶನ ಮುಂದೂಡಿಕೆ ಮಾಡಿದ್ದು, ಸಂದರ್ಶನದ ದಿನಾಂಕ KPSCಯಿಂದ ಮುಂದೆ ತಿಳಿಸಲಾಗುವುದು ಅಂತ ಮಾಹಿತಿ ನೀಡಲಾಗಿದೆ.
Laxmi News 24×7