Breaking News

ಈದ್ಗಾ ಮೈದಾನದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಬಿಡದ ಪಟ್ಟು

Spread the love

ಹುಬ್ಬಳ್ಳಿ; ನಗರದ ಈದ್ಗಾ ಮೈದಾನದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಬಿಡದ ಪಟ್ಟು: ಅವಕಾಶ ಕೋರಿ ಮೂರು ದಿನಗಳ ಗಡುವು ನೀಡಿದ ಹಿಂದು ಪರ ಸಂಘಟನೆಗಳು ಇಂದು ಮತ್ತೆ ಹೋರಾಟದ ಅಖಾಡಕ್ಕೆ ಇಳಿದಿದ್ದು, ಈದ್ಗಾ ಮೈದಾನದಲ್ಲಿ ಪ್ರಸ್ತುತ ವರ್ಷ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಮಹಾನಗರ ಪಾಲಿಕೆ ಒಪ್ಪಿಗೆ ನೀಡುವಂತೆ ವಿವಿಧ ರೀತಿಯಲ್ಲಿ ಒತ್ತಡ ಹೇರುವ ಹಾಗೂ ಪಾಲಿಕೆ ಆಯುಕ್ತರಿಗೆ ಮತ್ತೊಮ್ಮೆ ಮನವಿಯನ್ನು ವಿವಿಧ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಮುಖಂಡರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ನೀಡಿದರು.

ಯಾವುದೇ ಕಾರಣಕ್ಕೋ ಈ ನಿರ್ಧಾರದಿಂದ ಹಿಂದೆ ಸರಿಯಲು ಆಗದು ಎಂಬ ಸ್ಪಷ್ಟವಾದ ಸಂದೇಶ ರವಾನೆ ಮಾಡಿದರು. ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಒಮ್ಮತದ ಆಭಿಪ್ರಾಯಕ್ಕೆ ಬಂದಿದ್ದು ಇಂದಿನ ಮನವಿ ಪ್ರತಿಯನ್ನು ಸಹ ಮುಖ್ಯಮಂತ್ರಿ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಳುಹಿಸಿ ಮೂರು ದಿನ ಗಡುವು ನೀಡಿದರು ‌ ನಂತರ ಹೋರಾಟದ ಕುರಿತು ಅಂತಿಮ ರೂಪರೇಷೆ ಸಿದ್ಧಪಡಿಸುವುದು.

 

ಈ ಹಿಂದೆ ನಗರದ ಮೂರುಸಾವಿರಮಠದ ಸಭಾಭವನದಲ್ಲಿ ನಡೆದ ವಿವಿಧ ಹಿಂದೂಪರ ಸಂಘಟನೆ ಮತ್ತು ಗಣೇಶೋತ್ಸವ ಸಮಿತಿ ಸಭೆಯಲ್ಲಿ ತೆಗೆದುಕೊಂಡ ಒಮ್ಮತದ ನಿರ್ಣಯಗಳಿಗೆ ಬದ್ಧವಾಗುವಂತೆ ಸಹ ತೀರ್ಮಾನ ತೆಗೆದುಕೊಳ್ಳಲಾಗಿದೆ.

 

ಎಂದು ರಾಣಿ ಚನ್ನಮ್ಮ ಗಜಾನನೋತ್ಸವ ಸಮಿತಿಯ ಮುಖ್ಯಸ್ಥ ಹನುಮಂತ ನಿರಂಜನ ಹೇಳಿದರು.

ಗಜಾನನ ಉತ್ಸವ ಸಮಿತಿ ಮುಖಂಡರು, ಶ್ರೀರಾಮ ಸೇನೆ, ಹಿಂದೂ ಜಾಗರಣ ವೇದಿಕೆ, ರಾಣಿ ಚನ್ನಮ್ಮ ಗಜಾನನೋತ್ಸವ ಸಮಿತಿ ಸಂಘಟನೆಗಳ ಮುಖಂಡರ ಕಾರ್ಯಕರ್ತರು ಪಾಲ್ಗೊಂಡು ಸಂಘಟನೆಯನ್ನು ಬಲಿಷ್ಠಗೊಳಿಸಿ, ಒಗ್ಗಟ್ಟಾಗಿ ಹೋರಾಡಬೇಕು.

 

ಎಷ್ಟೇ ಕಷ್ಟ ಎದುರಾದರೂ ಇಟ್ಟ ಹೆಜ್ಜೆ ಹಿಂದೆ ಇಡಬಾರದು. ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವುದೇ ನಮ್ಮ ಅಂತಿಮ ಧ್ಯೇಯವಾಗಿರಬೇಕು ಎಂಬುವುದಾಗಿ ಸಹ ಒಮ್ಮತದ ಅಭಿಪ್ರಾಯಕ್ಕೆ ಬಂದರು. ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ನೀಡುವಂತೆ ಈಗಾಗಲೇ ಪಾಲಿಕೆ ಆಯುಕ್ತರಿಗೆ ಮನವಿ ನೀಡಿ ಬಿಡುವು ಪ್ರಶ್ನೆ ಇಲ್ಲ ಆಯುಕ್ತರಿಂದ ಯಾವುದೇ ಪ್ರತಿಕ್ರಿಯೆ ಬರದೇ ಇದ್ದಲ್ಲಿ ಹೋರಾಟ ಅನಿವಾರ್ಯ ಎಂಬ ರೀತಿಯಲ್ಲಿ ಇಂದು ಹೋರಾಟದ ರೂಪುರೇಷೆಗಳನ್ನು ಹಾಕಿದ್ದಾರೆ ಎಂದರು.

 

ವಾದ ಏ‌ನು ಮುಸ್ಲಿಂ ಸಮುದಾಯದವರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ ಎಂದಾದರೆ, ನಮಗೆ ಗಣೇಶಮೂರ್ತಿ ಪ್ರತಿಷ್ಠಾಪಿಸಲು ಯಾಕೆ ಅವಕಾಶವಿಲ್ಲ. ಪಾಲಿಕೆ ದ್ವಂದ್ವನೀತಿ ಅನುಸರಿಸುವುದು ಬಿಡಬೇಕು’. ಈದ್ಗಾ ಮೈದಾನದಲ್ಲಿಯೇ ‘ರಾಣಿ ಚನ್ನಮ್ಮ ಗಜಾನನೋತ್ಸವ ಸಮಿತಿ ರಚನೆಯಾಗಿದೆ ಎನ್ನುತ್ತಾರೆ. ಹೋರಾಟದ ಮನೋಭಾವದ ವ್ಯಕ್ತಿಗಳು ಸೇರಿಕೊಳ್ಳಬಹುದು.

 

ಸಮಾಜದಲ್ಲಿ ಶಾಂತಿ ಕದಡುವ ಕೆಲಸಕ್ಕೆ ನಾವು ಮುಂದಾಗುತ್ತಿಲ್ಲ. ವಿವಾದ ಬೇಡ ಎನ್ನುವುದಾದರೆ ಮುಸ್ಲಿಮರು ನಮ್ಮ ಜೊತೆ ಸೇರಿ, ಸೌಹಾರ್ದಕ್ಕೆ ನಾಂದಿಯಾಗಲಿ. ಗಣೇಶ ಉತ್ಸವ ಆಚರಿಸಲು ಅವಕಾಶ ನೀಡಿ ಎಂದು ಪಾಲಿಕೆ ಆಯುಕ್ತರಿಗೆ ಅವರಾಗಿಯೇ ಪ್ರಸ್ತಾವ ಸಲ್ಲಿಸಲಿ.

 

ಅವರ ಈ ನಡೆ ರಾಜ್ಯಕ್ಕೆ ಮಾದರಿಯಾಗಲಿ. ನಮ್ಮಿಂದ ಏನೂ ಸಾಧ್ಯವಿಲ್ಲ ಎಂದು ಭಾವಿಸಿದರೆ, ಮುಂದಿನ ಯಾವುದೇ ಹೋರಾಟಕ್ಕೂ ನಾವು ಸಿದ್ಧ’ ಎಂಬ ನಿಲುವು ಹೋರಾಟಗಾರರದು ಆಗಿದೆ‌‌. ‘ಹುಬ್ಬಳ್ಳಿ-ಧಾರವಾಡ ಜನತೆ ಸೇರಿಕೊಂಡು ಒಗ್ಗಟ್ಟು ಪ್ರದರ್ಶಿಸಬೇಕು. ಪಾಲಿಕೆ ಅಧಿಕಾರಿಗಳಿಗೆ, ಸ್ಥಳೀಯ ಜನಪ್ರತಿನಿಧೀಗಳಿಗೆ ಹಾಗೂ ಸಚಿವರುಗಳಿಗೆ ಒತ್ತಡ ಹೇರುವ ಕಾರ್ಯ ನಡೆಯಬೇಕು’ ಎಂದರು.

 

‘ನಾವ್ಯಾರು ಕಾನೂನು ಕೈಗೆತ್ತಿಕೊಳ್ಳುವುದಿಲ್ಲ. ಅದಕ್ಕೆ ಪಾಲಿಕೆ ಆಯುಕ್ತರು ಸಹ ಅವಕಾಶ ನೀಡದೆ ಗಣೇಶ ಉತಸ್ವ ಆಚರಿಸಲು ಅನುಮತಿ ನೀಡಬೇಕು’ ಎಂದು ಹಿಂದೂ ಕಾರ್ಯಕರ್ತ ಸಂತೋಷ ಕಟಾರೆ ಒತ್ತಾಯಿಸಿದರು. ಹಿಂದೂ ಕಾರ್ಯಕರ್ತರಾದ ವಿಶ್ವನಾಥ ಕುಲಕರ್ಣಿ, ಅಪ್ಪಸಾಹೇಬ್ ಕಟ್ಟಿ, ಅಭಿಷೇಕ, ಸಾಗರ ಪವಾರ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಂಡಿದ್ದರು.

 

‘ಈದ್ಗಾ ಮೈದಾನಕ್ಕೆ ಮುಸ್ಲಿಮರಿಗೆ ಇರುವಷ್ಟೇ ಅಧಿಕಾರ ಹಿಂದೂಗಳಿಗೂ ಇದೆ. ಕೆಲವರು ಈ ಮೈದಾನವನ್ನು ರಾಜಕೀಯ ಹೋರಾಟಕ್ಕೆ ಬಳಕೆ ಮಾಡಿಕೊಂಡರು. ಈಗ ನಮ್ಮ ಮನೆಯಲ್ಲಿ ನಾವೇ ಭಿಕ್ಷೆ ಬೇಡುವ ಪರಿಸ್ಥಿತಿ ಎದುರಾಗಿದೆ. ಪಕ್ಷಾತೀತವಾಗಿ ಹೋರಾಟ ನಡೆಸಬೇಕು.

 

ಗಣೇಶಮೂರ್ತಿ ಪ್ರತಿಷ್ಠಾಪಿಸುವವರೆಗೂ ನಾವು ಇಟ್ಟ ಹೆಜ್ಜೆ ಹಿಂದಿಡುವುದಿಲ್ಲ. ಹೋರಾಟದ ರೂಪರೇಷೆ ಸಿದ್ಧಪಡಿಸಬೇಕು. ಕಾರ್ಯಕರ್ತರ ಪಡೆ ಮತ್ತಷ್ಟು ದೊಡ್ಡದಾಗಬೇಕು. ಕಾನೂನಿನ ಚೌಕಟ್ಟಿನಲ್ಲಿ ಹೋರಾಡಿದರೆ ಭಯಪಡುವ ಅಗತ್ಯವಿಲ್ಲ’ ಎಂಬುದು ಇಂದಿನ ಹೋರಾಟಗಾರರ ಸಹ ಹೋರಾಟಗಾರರಿಗೆ ಸಂದೇಶ ಕಳಿಸಿದರು.

 

ಈ ನಡುವೆ ಹುಬ್ಬಳ್ಳಿ ಧಾರವಾಡ ಮಹಾನಗರ ಆಯುಕ್ತರಾದ ಗೋಪಾಲಕೃಷ್ಣ ಸಹ ಮಾತನಾಡಿ, ಈ ಕುರಿತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಏನೆಲ್ಲಾ ಈದ್ಗಾ ಮೈದಾನ. ವಿಚಾರದಲ್ಲಿ ನಡೆದ ಬೆಳೆವಣಿಗೆ ಕುರಿತು ಅಧ್ಯಯನ ಮಾಡಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.


Spread the love

About Laxminews 24x7

Check Also

ಟೆಸ್ಟ್ ಕ್ರಿಕೆಟ್‌ನಲ್ಲಿ ಅಬ್ಬರಿಸುವ ಸೂಚನೆ ಕೊಟ್ಟ ರಿಷಬ್ ಪಂತ್

Spread the love ಅಪಘಾತದ ಬಳಿಕ ಸುದೀರ್ಘ ವಿಶ್ರಾಂತಿ ಪಡೆದಿದ್ದ ರಿಷಬ್ ಪಂತ್ ಮತ್ತೆ ಕ್ರಿಕೆಟ್ ಗೆ ಮರಳಿದ್ದಾರೆ. ಐಪಿಎಲ್‌ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ