ಘಟಪ್ರಭಾ: ಸಮೀಪದ ಹುಣಶ್ಯಾಳ ಪಿ.ಜಿ ಗ್ರಾಮದ ಶ್ರೀ ಸಿದ್ದಲಿಂಗ ಕೈವಲ್ಯಾಶ್ರಮದ ಶ್ರೀ ಸಿದ್ದಲಿಂಗ ಸಮುದಾಯ ಭವನದಲ್ಲಿ ದಿ.13 ರಂದು ಮುಂಜಾನೆ 12 ಗಂಟೆಗೆ 128 ನೇ ಮಾಸಿಕ ಸುವಿಚಾರ ಚಿಂತನ ಗೋಷ್ಠಿ ಕಾರ್ಯಕ್ರಮ ಜರುಗಲಿದೆ.
ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ಶ್ರೀ ಮಠದ ಪೀಠಾಧಿಕಾರಿ ಶ್ರೀ ನಿಜಗುಣ ದೇವರು, ಅಧ್ಯಕ್ಷತೆಯನ್ನು ಚಿಕ್ಕಹಂಚಿನಾಳ ಶಿವಾನಂದ ಮಠದ ಶಾಂತಾನಂದ ಸ್ವಾಮಿಗಳು ವಹಿಸುವರು. ಶ್ರೀಗಳ ಕಿರೀಟ ಮಹಾಪೂಜೆ ಜರಗುವುದು. ಅನ್ನ ದಾಸೋಹವನ್ನು ಗುರುಸಿದ್ದ ಕರಬನ್ನಿ ಹಾಗೂ ಚಿಂತನದಾಸೋಹ ಬಸವರಾಜ ಹೊಸೂರ ಇವರಿಂದ ಜರುಗಲಿದೆ. ಸಿದ್ದಲಿಂಗೇಶ್ವರ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಐಕ್ರಮ ಜರುಗಲಿದೆ. ಹಣಮಂತ ದಾಸರ.ಗಂಗಾಧರ ಕುಂಬಾರ ಇವರಿಂದ ಸಂಗೀತ ಸೇವೆ ನಡೆಯಲಿದೆ. ಭಕ್ತಾಧಿಗಳು ಪಾಲ್ಗೊಳ್ಳಲು ಕೋರಲಾಗಿದೆ.
