Breaking News

ಅಪ್ಪ ಏಕೋ ಹಿಂದೆಯೇ ಉಳಿದು ಬಿಟ್ಟ!!!. ಇಂದು ವಿಶ್ವ ಅಪ್ಪಂದಿರ ದಿನ. ??

Spread the love

ಇಂದು ವಿಶ್ವ ಅಪ್ಪಂದಿರ ದಿನ. ??

ಅಪ್ಪನ ಕುರಿತ ಈ ಕವಿತೆ ಕೇಳಿ, ಕಣ್ಣಂಚಿನಲ್ಲಿ ಕಂಬನಿ ಬರದೇ ಇರದು… #ಅಪ್ಪ

ಅಪ್ಪ ಏಕೋ ಹಿಂದೆಯೇ ಉಳಿದು ಬಿಟ್ಟ!!!

ಹೆರುವ ವರೆಗೂ ಹೊರುವ ಅಮ್ಮ
ಹರೆಯದ ವರೆಗೂ ಹೊರುವ ಅಪ್ಪ
ಇಬ್ಬರ ಪ್ರೀತಿ ಸಮಾನಾದರೂ
ಅಪ್ಪ ಏಕೋ ಹಿಂದೆಯೇ ಉಳಿದು ಬಿಟ್ಟ!!!

ಕುಟುಂಬಕ್ಕಾಗಿ ಸಂಬಳವಿಲ್ಲದೇ
ದುಡಿಯುವ ಅಮ್ಮ
ದುಡಿದ ಸಂಬಳವೆಲ್ಲ ಕುಟುಂಬಕ್ಕೆ
ನೀಡುವ ಅಪ್ಪ
ಇಬ್ಬರ ಶ್ರಮ ಸಮಾನಾದರೂ
ಅಪ್ಪ ಏಕೋ ಹಿಂದೆಯೇ ಉಳಿದು ಬಿಟ್ಟ!!!

ಕೇಳಿದ್ದನ್ನು ಮಾಡಿ ಉಣಿಸುವ ಅಮ್ಮ
ಕೇಳಿದ್ದನ್ನು ಇಲ್ಲ ಅನ್ನದೆ ಕೊಡಿಸುವ ಅಪ್ಪ
ಇಬ್ಬರ ಪ್ರೀತಿ ಒಂದೇ
ಆದರೂ
ಅಪ್ಪ ಏಕೋ ತುಂಬಾ ಹಿಂದೆಯೇ ಉಳಿದು ಬಿಟ್ಟ!!!

ಎಡವಿ ಬಿದ್ದಾಗ ಬರುವ ಕೂಗು ಅಮ್ಮ.
ಅವಶ್ಯಕತೆ ಇದ್ದಾಗ ಮಾತ್ರ ನೆನಪಾಗುವ ಅಪ್ಪ,
ಇಬ್ಬರ ಪ್ರೀತಿ ಒಂದೇ
ಆದರೂ
ಮಕ್ಕಳ ಪ್ರೀತಿ ಪಡೆಯಲು
ಹಿಂದಿನಿಂದಲೂ
ಅಪ್ಪ ತುಂಬಾ ಹಿಂದೆಯೇ ಉಳಿದು ಬಿಟ್ಟ!!!

ಕಪಾಟಿನ ತುಂಬಾ ಅಮ್ಮ, ಮಕ್ಕಳ ಬಣ್ಣದ ಬಟ್ಟೆಗಳು, ಅಪ್ಪನ ನಾಲ್ಕಾರು ಬಟ್ಟೆಗಳಿಗೆ ಮೂಲೆಯಲ್ಲಿ ಒಂದಿಷ್ಟು ಜಾಗ,
ತನ್ನ ಬಗ್ಗೆ ತಾನೆಂದೂ ಯೋಚಿಸದ ಅಪ್ಪ,
ನಮ್ಮ ಯೋಚನೆಗೆ ಸಿಗದಷ್ಟು ಹಿಂದೆಯೇ ಉಳಿದು ಬಿಟ್ಟ!!!

ಅಮ್ಮನ ನೋವು ಕಣ್ಣೀರಾಗಿ ಹರಿಯಿತು,
ಅಪ್ಪನ ನೋವು ಮನದಲ್ಲೇ ಹುದುಗಿತು.
ಅಮ್ಮನ ನೋವು ಕಂಡ ನಮಗೆ ಅಪ್ಪನ ನೋವು ಕಾಣಲೇ ಇಲ್ಲ. ಇಬ್ಬರ ನೋವು ಒಂದೇ
ಆದರೂ ಅಪ್ಪ ದುಃಖ ನುಂಗಿ ತುಂಬಾ ಹಿಂದೆಯೇ ಉಳಿದು ಬಿಟ್ಟ!!!

ಅಮ್ಮನಿಗೆ ಒಂದಿಷ್ಟು ಬಂಗಾರದ ಒಡವೆ.
ಅಪ್ಪನಿಗೆ ಒಂದು ಬಂಗಾರದಂಚಿನ ಪಂಚೆ. ಕುಟುಂಬಕ್ಕೆ ಎಷ್ಟೇ ಮಾಡಿದರೂ
ಅವರ ಮೆಚ್ಚುಗೆ ಪಡೆಯುವಲ್ಲಿ ಅಪ್ಪ ತುಂಬಾ ಹಿಂದೆಯೇ ಉಳಿದು ಬಿಟ್ಟ!!!

ಮುಪ್ಪಿನಲ್ಲಿ ಮನೆ ಕೆಲಸಗಳಿಗೆ ನೆರವಾಗುವ ಅಮ್ಮ, ಮಾತುಗಳಿಗೆ ಬೆಲೆಯೇ ಇಲ್ಲದಿದ್ದರೂ ಬೆಲೆಯುಳ್ಳ ಮಾತು ಹೇಳುವ ಅಪ್ಪ, ಇಬ್ಬರೂ ಕಾಳಜಿ ಮಾಡಿದರೂ, ಪ್ರೀತಿ ಪಡೆಯುವಲ್ಲಿ
ಅಪ್ಪ ತುಂಬಾ ಹಿಂದೆಯೇ ಉಳಿದು ಬಿಟ್ಟ!!!

ಅಪ್ಪ ಹೀಗೆ ಹಿಂದೆ ಉಳಿಯಲು ಕಾರಣ ಅವರೇ ನಮ್ಮೆಲ್ಲರ ಬೆನ್ನೆಲುಬು. ಬೆನ್ನೆಲುಬು ಹಿಂದಿರುವುದರಿಂದಲೇ ನಾವೆಲ್ಲರೂ ಬೆಟ್ಟದ ಹಾಗೆ ನಿಂತಿರುವುದು.
ಅದರಿಂದಲೇ ಏನೋ ಅಪ್ಪ ಹಿಂದೆಯೇ ಉಳಿದುಬಿಟ್ಟ!!!

 


Spread the love

About Laxminews 24x7

Check Also

ಬೆಂಗಳೂರಲ್ಲಿ ಮುಂಬೈ ಮಾದರಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಿ: ಡಿಸಿಎಂ ಸೂಚನೆ

Spread the love ಬೆಂಗಳೂರು: ಮುಂಬೈ ಮಾದರಿಯಲ್ಲಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜಿಬಿಎ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ