ಬೆಂಗಳೂರು : ವಿಶ್ವ ಹಾಲು ದಿನವಾಗಿ ಆಚರಿಸಲಾಗುತ್ತಿರುವ ಜೂನ್ 1 ರಂದು ಕರ್ನಾಟಕ ಹಾಲು ಮಹಾಮಂಡಳಿಯು ಕೊರೋನಾದಂತಹ ಸಂದರ್ಭದಲ್ಲಿ ಜನರಲ್ಲಿ ಆರೋಗ್ಯ ವೃದ್ಧಿಗಾಗಿ ಮತ್ತು ಅವರಲ್ಲಿ ಪೌಷ್ಠಿಕಾಂಶ ಹೆಚ್ಚಳಕ್ಕಾಗಿ ಅರಿಸಿನ ಮಿಶ್ರಿತ ನಂದಿನಿ ಹಾಲನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿದೆ ಎಂದು ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಈ ಕುರಿತು ಭಾನುವಾರದಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕೊರೋನಾ ದಾಳಿ ಮಾಡಿರುವ ಈ ಸಂದರ್ಭದಲ್ಲಿ ಜನರು ಹೆಚ್ಚು ರೋಗ ನಿರೋಧಕ …
Read More »ಭಾನುವಾರದ ಹೆಲ್ತ್ ಬುಲೆಟಿನ್ ನಲ್ಲಿ ಜಿಲ್ಲೆಯಲ್ಲಿ ಮತ್ತೆ 13ಜನರಲ್ಲಿ ಸೊಂಕು ಪತ್ತೆ
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮಳೆರಾಯನ ಅರ್ಭಟದ ಜೊತೆ ಜೊತೆಗೆ ಮಹಾಮಾರಿ ಕೊರೋನಾ ಅರ್ಭಟವೂ ಬೆಳಗಾವಿ ಜಿಲ್ಲೆಗೆ ವಕ್ಕರಿಸಿದೆ ಇಂದು ಭಾನುವಾರದ ಹೆಲ್ತ್ ಬುಲೆಟಿನ್ ನಲ್ಲಿ ಜಿಲ್ಲೆಯಲ್ಲಿ ಮತ್ತೆ 13ಜನರಲ್ಲಿ ಸೊಂಕು ಪತ್ತೆಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯ ಹೆಲ್ತ ಬುಲಿಟೀನ್ ಪ್ರಕಾರ ಸೊಂಕಿತರ ಸಂಖ್ಯೆ 160 ಕ್ಕೇರಿದೆ ಜಿಲ್ಲಾ ಹೆಲ್ತ್ ಬುಲಿಟೀನ್ ಪ್ರಕಾರ ಸೊಂಕಿತರ ಸಂಖ್ಯೆ 162ಕ್ಕೇರಿದಂತಾಗಿದೆ. ಇಂದು ಪತ್ತೆಯಾದ ಎಂಟು ಜನ ಸೊಂಕಿತರ ಪೈಕಿ ಇಬ್ಬರು ಬೆಳಗಾವಿ ತಾಲ್ಲೂಕಿನ ಅಗಸಗಿ …
Read More »ಆಹಾರ ಸಿಗದೇ ಪರದಾಡುತ್ತಿರುವ ಬೀದಿ ನಾಯಿಗಳು…………
ಬೆಳಗಾವಿ- ಲಾಕ್ ಡೌನ್ ಅವಧಿಯಲ್ಲಿ ಬೆಳಗಾವಿ ನಗರದ ನಾಯಿಗಳು ಈಗ ಡಾನ್ ಆಗಿವೆ.ಆಹಾರ ಸಿಗದೇ ಪರದಾಡುತ್ತಿರುವ ಬೀದಿ ನಾಯಿಗಳು ಈಗ ಕ್ರೂರಿಯಾಗಿವೆ. ಇಂದು ಮದ್ಯಾಹ್ನ ಹಸಿದ ನಾಯಿಗಳು ಗುಂಪಾಗಿ ಕುರಿಗಳ ಹಿಂಡಿನ ಮೇಲೆ ದಾಳಿ ಮಾಡಿ ಎರಡು ಕುರಿಗಳನ್ನು ಬೇಟೆಯಾಡಿದ ಘಟನೆ ಬೆಳಗಾವಿಯ ಕಣಬರ್ಗಿ ರಸ್ತೆಯ ಶಿವತೀರ್ಥ ಅಪಾರ್ಟಮಡಂಟ್ ಹಿಂದುಗಡೆ ನಡೆದಿದೆ. ಬೆಳಗಾವಿಯಲ್ಲಿ ಹಸಿದವರಿಗೆ ಉಳ್ಳವರು ಆಹಾರದ ಕಿಟ್ ಗಳನ್ನು ಕೊಡುತ್ತಿದ್ದಾರೆ. ಹೊಟೇಲ್ ಗಳ ನಾನ್ ವೇಜ್ ವೇಸ್ಟೇಜ್ ತಿಂದು …
Read More »ಮಗೂನ ಇವರೇ ಚೂಟಿ ತೊಟ್ಟಿಲು ತೂಗೂ ವಂತಹ ಕೆಲಸ ಮಾಡೋದುರಮೇಶ್ ಜಾರಕಿಹೊಳಿ : ಲಖನ್ ಜಾರಕಿಹೋಳಿ ಕಿಡಿ
ಗೋಕಾಕ :ಉತ್ತರ ಕರ್ನಾಟಕದ ಬಂಡಾಯ ಎದ್ದಿರೋ ಬಗ್ಗೆ ಇಂದು ಕಾಂಗ್ರೆಸ್ ಮುಖಂಡರು ಹಾಗೂ ಗೋಕಾಕ ನಗರದ ಉದ್ಯಮಿಗಳಾದ ಶ್ರೀಲಖನ್ ಜಾರಕಿಹೋಳಿ ಜಾರಕಿಹೋಳಿ ಇಂದು ಗೋಕಾಕ ನಗರದಲ್ಲಿ ನಮ್ಮ ವಾಹಿನಿ ಜೊತೆ ಮಾತಾಡಿದ ಅವರು ರಮೇಶ್ ಜಾರಕಿಹೊಳಿ ಜೊತೆ ಯಾರು ಇಲ್ಲ ಅವರ್ ಜೊತೆ ಮಹೇಶ್ ಕುಮತಳ್ಳಿ ಒಬ್ರೆ ಇದಾರೆ, ಅದು ಅನಿವಾರ್ಯವಾಗಿ ಇವರ ಜೊತೆ ಇದಾರೆ .ಈ ಬಂಡಾಯಕ್ಕೆ ಕಾರಣ ರಮೇಶ್ ಜಾರಕಿಹೋಳಿ, ಅವರು ಕಾಂಗ್ರೆಸ್ ನಲ್ಲಿ ಇದ್ದಾಗಲೂ ಹಿಂಗೆ …
Read More »ಬ್ಯಾಂಡ್ ಬಾಜಾ ಭಜಂತ್ರಿ ಕಲಾವಿದರುಗಳಿಗೆ ಜೀವನ ನಿರ್ವಹಣೆ ಕಷ್ಟದಲ್ಲಿರುತ್ತದೆ.ಸಹಾಯ ಮಾಡಿ ಎಂದು ಮನವಿ
ಗೋಕಾಕ:ದೇಶದ ಜನಜೀವನ ಕೋವಿಡ್ 19 ವೈರಸ್ ನಿಂದ ಜನಸಾಮಾನ್ಯರ ಬದುಕು ವಿಷಾದನೀಯ ಹಾಗೂ ಲಾಕ್ ಡೌನ್ ಬೆನ್ನಲ್ಲೇ ಸಭೆ ಸಭಾರಂಭಗಳು, ಮದುವೆಗಳು,ಜಾತ್ರೆಗಳು ಹಾಗೂ ಎಲ್ಲಾ ಸಾರ್ವಜನಿಕ ಮತ್ತು ವಯಕ್ತಿಕ ಮನರಂಜನೆ ಕಾರ್ಯಕ್ರಮಗಳಿಗೆ ಸಂಪೂರ್ಣ ನಿಷೇಧವಿದ್ದು ಎಲ್ಲಾ ಬ್ಯಾಂಡ್ ಬಾಜಾ ಭಜಂತ್ರಿ ಕಲಾವಿದರುಗಳಿಗೆ ಜೀವನ ನಿರ್ವಹಣೆ ಕಷ್ಟದಲ್ಲಿರುತ್ತದೆ. ಈ ಮೂಲಕ ಬೆಳಗಾವಿ ಜಿಲ್ಲೆಯ ಗೋಕಾಕ ಮತ್ತು ಮೂಡಲಗಿ ಸುಮಾರು 24 ರಿಂದ 25 ಬ್ಯಾಂಡ್ ಮಾಲೀಕರು ಮತ್ತು ಕಲಾವಿದರು ಸುಮಾರು 500ಕ್ಕೂ …
Read More »ಇದೊಂದು ವಿನೂತನ ಕಾರ್ಯಕ್ರಮ ,8000ಕಡೆ ಏಕಕಾಲಕ್ಕೆ ಈ ಒಂದು ಕಾರ್ಯಕ್ರಮ ಮಾಡ್ತಿದಿವಿ
ಗೋಕಾಕ: ಇಂದು ಗೋಕಾಕ ನಗರದಲ್ಲಿ ಪರ್ತ ಕರ್ತರ ಜೊತೆ ಮಾತಾಡಿದ ಕೆ ಪಿ ಸಿ ಸಿ ಕಾರ್ಯ ಧ್ಯಕ್ಷ ಸತೀಶ್ ಜಾರಕಿಹೋಳಿ ನಾವು3 ಜನ ಹಾಗೂ. ಕೆ ಪಿ ಸಿ ಸಿ ಅಧ್ಯ ಕ್ಷರು ಆದಂತಹ ಡಿ. ಕೆ . ಶಿವ್ ಕುಮಾರ್ ಹೊಸದಾಗಿ ಪದಗ್ರಹಣ ಮಾಡ್ತಿದೇವೆ , ಇದೊಂದು ವಿನೂತನ ಕಾರ್ಯಕ್ರಮ ,8000ಕಡೆ ಏಕಕಾಲಕ್ಕೆ ಈ ಒಂದು ಕಾರ್ಯಕ್ರಮ ಮಾಡ್ತಿದಿವಿ ಅಲ್ಲಿ ಪ್ರತಿಯೊಂದು ಕಡೆ ಸುಮಾರು 50ಜನ ಭಾಗವಹಿಸಲಿದ್ದಾರೆ …
Read More »ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ತರಲು ಕಾರ್ಯಕರ್ತರು ಸಕ್ರಿಯರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು
ಬೆಳಗಾವಿ: ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ತರಲು ಕಾರ್ಯಕರ್ತರು ಸಕ್ರಿಯರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು ಹೇಳಿದರು. ಇಲ್ಲಿನ ನೂತನ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭದ ಪೂರ್ವಭಾಗಿ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷ ಸಂಘಟನೆಗಾಗಿ ನೂತನ ಕಚೇರಿಯಲ್ಲಿ ಸದಾ ಸಮಾರಂಭಗಳನ್ನು ನಡೆಸುವಂತೆ ಈ ಹಿಂದೆಯೇ ಹೇಳಿರುವೆ, ಬೆಳಗಾವಿಯಲ್ಲಿ 20 ಘಟಕಗಳಿದ್ದು, ಹೊಸ ಹೊಸ ವಿಚಾರಗಳನ್ನು ಹಂಚಿಕೊಳ್ಳಬೇಕು. ಪಕ್ಷ …
Read More »ಶನಿವಾರದ ಹೆಲ್ತ್ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ ಮತ್ತೊಂದು ಪಾಸಿಟಿವ್ ಕೇಸ್ ಪತ್ತೆ
ಬೆಳಗಾವಿ- ಬೆಳಗಾವಿಯಲ್ಲಿ ಮುಂಬಯಿ ನಂಜು ಏರುತ್ತಲೇ ಇದೆ.ಬೆಳಗಾವಿ ಜಿಲ್ಲೆಯಲ್ಲಿ ಶನಿವಾರದ ಹೆಲ್ತ್ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ ಮತ್ತೊಂದು ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಬೆಳಗಾವಿ ತಾಲ್ಲೂಕಿನ ತುರಮರಿ ಗ್ರಾಮದ 30 ವರ್ಷದ ಮಹಿಳೆಗೆ ಕೊರೋನಾ ಸೊಂಕು ಇರುವದು ದೃಡವಾಗಿದೆ. ರಾಜ್ಯ ಹೆಲ್ತ್ ಬುಲಿಟೀನ್ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 147 ಕ್ಕೆ ಏರಿದರೆ ಬೆಳಗಾವಿ ಜಿಲ್ಲಾ ಹೆಲ್ತ್ ಬುಲಿಟೀನ್ ಪ್ರಕಾರ ಸೊಂಕಿತರ ಸಂಖ್ಯೆ 149 ಕ್ಕೆ ಏರಿದಂತಾಗಿದೆ. ಬೆಳಗಾವಿ …
Read More »ಬಿಜೆಪಿ ಸರ್ಕಾರ ಬರಿ ಜನರನ್ನ ಮರಳು ಮಾಡೋ ಕೆಲಸ ಮಾಡುತ್ತೆ ಅವರು ಬರಿ ಘೋಷಣೆ ಮಾತ್ರ ಮಾಡ್ತಾರೆ
ಬಿಜೆಪಿ ಸರ್ಕಾರ ಬರಿ ಜನರನ್ನ ಮರಳು ಮಾಡೋ ಕೆಲಸ ಮಾಡುತ್ತೆ ಅವರು ಬರಿ ಘೋಷಣೆ ಮಾತ್ರ ಮಾಡ್ತಾರೆ , ಕೇಂದ್ರ ಸರ್ಕಾರ ಆಗಿರಬಹುದು ಅಥವಾ ರಾಜ್ಯ ಸರ್ಕಾರ ಆಗಿರಬಹುದು ಬರಿ ಘೋಷಣೆ ಗಳನ್ನೆ ಮಾಡಿಕೊಂಡು ಇದೆ , ಹಾಗೆ ಬಿಜೆಪಿ ಸರ್ಕಾರ ಜನರ ಪರವಾಗಿ ಇರೋ ಅಂಥ ಸರ್ಕಾರ ಅಲ್ಲ ಅವರು ಬರ್ರಿ ತಮ್ಮ ಪಕ್ಷ ಸಂಘಟನೆ ಗಳನ್ನ ಮಾಡಿಕೊಂಡು ಇರೋರು ಜನರ ಸಮಸ್ಯೆ ಗಳ ಬಗ್ಗೆ ಅವರಿಗೆ ಕಾಳಜಿ …
Read More »ರಾಜ್ಯ ಪ್ರವೇಶಕ್ಕೆ ಇ-ಪಾಸ್ ನೀಡಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತ:ಗೃಹಸಚಿವ ಬಸವರಾಜ ಬೊಮ್ಮಾಯಿ
ಬೆಳಗಾವಿ, ಮೇ 30(ಕರ್ನಾಟಕ ವಾರ್ತೆ): ಮಹಾರಾಷ್ಟ್ರದಿಂದ ಆಗಮಿಸುತ್ತಿರುವ ಜನರಲ್ಲಿ ಅತೀ ಹೆಚ್ಚು ಸೋಂಕು ಕಂಡುಬಂದಿದೆ. ಇದು ಇನ್ನೂ ಹೆಚ್ಚಳವಾಗುತ್ತಿದೆ. ಆದ್ದರಿಂದ ರಾಜ್ಯ ಪ್ರವೇಶಕ್ಕೆ ಇ-ಪಾಸ್ ನೀಡಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಇ-ಪಾಸ್ ಇಲ್ಲದೇ ಬರುತ್ತಿರುವವರನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸರ್ಕಾರದ ಮಾರ್ಗಸೂಚಿ ಪ್ರಕರ ಎಲ್ಲರನ್ನೂ ತಪಾಸಣೆ ನಡೆಸಿ ಅಗತ್ಯವಿದ್ದರೆ ಕ್ವಾರಂಟೈನ್ ಮಾಡಬೇಕು ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಕುಗನೊಳ್ಳಿ …
Read More »