Breaking News

ಬಿಜೆಪಿ, ಹಿಂದುತ್ವ ಗೆಲ್ಲಲಿದೆ: ಚರಂತಿಮಠ

Spread the love

ಬಾಗಲಕೋಟೆ: ಬಾಗಲಕೋಟೆಯಲ್ಲಿ ನನ್ನ ಗೆಲುವಲ್ಲ. ಬಿಜೆಪಿ, ಹಿಂದುತ್ವದ ಗೆಲುವಾಗಬೇಕು ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ಬಿಜೆಪಿ ಟಿಕೆಟ್‌ ಘೋಷಣೆಯಾದ ನಂತರ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಬಾಗಲಕೋಟೆಯಲ್ಲಿ ನಡೆದ ಘಟನೆ ಭಯದ ವಾತಾವರಣಕ್ಕೆ ಉಂಟು ಮಾಡಿತ್ತು ಎಂದರು.

ಗ್ಯಾರಂಟಿ ಯೋಜನೆ, ಒಳ ಮೀಸಲಾತಿ ಗೊಂದಲ, ಕೆಲ ಮುಖಂಡರಿಗೆ ರಾಜ್ಯದಲ್ಲಿ ಟಿಕೆಟ್‌ ನೀಡದಿರುವ ಕಾರಣ ಸ್ವಲ್ಪ ಅಂತರದಲ್ಲಿ 2023ರ ವಿಧಾನಸಭೆ ಚುನಾವಣೆಯಲ್ಲಿ ಸೋಲಾಗಿತ್ತು ಎಂದು ಹೇಳಿದರು.

ಪರಿಶಿಷ್ಟ ಜಾತಿ, ಪಂಗಡದವರಿಗೆ ಕಾಂಗ್ರೆಸ್‌ ಮೂಗಿಗೆ ತುಪ್ಪ ಸವರುತ್ತಿರುವುದರ ಬಗ್ಗೆ ಅರಿವಾಗಿದೆ. ಮೂರು ವರ್ಷಗಳಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಬಿಜೆಪಿ ಈ ಕ್ಷೇತ್ರವನ್ನು ಮತ್ತೇ ವಶಪಡಿಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಬಿಜೆಪಿ ಅವಧಿಯ ಅಭಿವೃದ್ಧಿ ಕೆಲಸಗಳೆ ಗೆಲುವಿಗೆ ಶ್ರೀರಕ್ಷೆ : ಪಿ. ರಾಜೀವ

Spread the loveಬಿಜೆಪಿಯಿಂದ ಉಪ ಚುನಾವಣಾ ಪೂರ್ವ ಭಾವಿ ಸಭೆ ಬಾಗಲಕೋಟೆ : ಕಳೆದ ಮೂರು ವರ್ಷಗಳ ಅಭಿವೃದ್ಧಿ ಶೂನ್ಯ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ