Breaking News

ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯ ಹಿಂಭಾಗದ ಆವರಣದಲ್ಲಿ ಸ್ವಚ್ಛತೆ ಮಂಗಮಾಯ

Spread the love

ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯ ಹಿಂಭಾಗದ ಆವರಣದಲ್ಲಿ ಸ್ವಚ್ಛತೆ ಮಂಗಮಾಯವಾಗಿದೆ. ಜಿಲ್ಲೆಗೆ ಮಾದರಿ ಪಾಠ ಹೇಳಬೇಕಿದ್ದ ಜಿಲ್ಲಾಧಿಕಾರಿಗಳ ಕಚೇರಿ ಆವರಣವೇ ಈಗ ಕಸ ತುಂಬಿಕೊಂಡು ರೋಗಗ್ರಸ್ತವಾಗಿದೆ.

ಜಿಲ್ಲಾಧಿಕಾರಿಗಳ ಕಚೇರಿಯ ಎಂದರೆ ಅದಕ್ಕೆ ಅದರದ್ದೇ ಆದ ಗೌರವವಿದೆ. ಅಲ್ಲಿ ಜಿಲ್ಲೆಯ ಅನೇಕ ಜನರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅಲ್ಲಿಗೆ ಬರುತ್ತಾರೆ. ಹಾಗಾಗಿ ಅದು ಜಿಲ್ಲೆಗೇ ಮಾದರಿಯಾಗಿರಬೇಕಾದದ್ದು ಸ್ವಾಭಾವಿಕ.

ಆದರೆ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯ ಹಿಂಭಾಗ ಅಕ್ಷರಶಃ ಅವ್ಯವಸ್ಥೆಯ ಗೂಡಾಗಿದೆ. ಎಲ್ಲಂದರಲ್ಲಿ ಕಸವನ್ನು ಹಾಕಲಾಗಿದ್ದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.

ಒಂದೆಡೆ ಒಡೆದ ಗಾಜನ್ನು ಹಾಕಲಾಗಿದ್ದು ಇನ್ನೊಂದೆಡೆ ನೀರನ್ನು ಕುಡಿದು ಬಾಟಲಿಗಳನ್ನು ಎಲ್ಲಂದರಲ್ಲಿ ಬಿಸಾಡಲಾಗಿದೆ. ಇನ್ನು ಕಚೇರಿಯಲ್ಲಿ ಕಸ ಹಾಕಲು ಇಟ್ಟಿದ್ದ ಡಸ್ಟ್‍ಬಿನ್‍ಗಳು ತುಂಬಿದ್ದು ಸೂಕ್ತ ವಿಲೇವಾರಿ ಇಲ್ಲದೇ ಗಬ್ಬೆದ್ದು ನಾರುತ್ತಿದೆ. ಏನೇ ಇರಲಿ ಜಿಲ್ಲೆಗೆ ಮಾದರಿಯಾಗಬೇಕಿದ್ದ ಡಿಸಿ ಕಚೇರಿ ಸಿಬ್ಬಂದಿ ಸ್ವಚ್ಛತೆಯನ್ನು ಮರೆತಿದ್ದು ವಿಪರ್ಯಾಸವೇ ಸರಿ.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ