Breaking News

ನಾನು ಐದಾರು ಜನರ ತಲೆ ತೆಗಿಯಬೇಕಿದೆ. ಇದಕ್ಕೆ ಅನುಮತಿ ಕೊಡ್ಸಿ: ರಮೇಶ್‌ ಕುಮಾರ್‌

Spread the love

ಬೆಂಗಳೂರು: ನಾನು ಐದಾರು ಜನರ ತಲೆ ತೆಗಿಯಬೇಕಿದೆ. ಇದಕ್ಕೆ ಅನುಮತಿ ಕೊಡ್ಸಿ ಎಂದು ಸ್ಪೀಕರ್‌ಗೆ ಶ್ರಿನಿವಾಸಪುರ ಶಾಸಕ ರಮೇಶ್‌ ಕುಮಾರ್‌ ಮನವಿ ಮಾಡಿದರು.

ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ಹಂಪ್ಸ್​ ಹಾಕಿರುವ ಬಗ್ಗೆ ಸೋಮವಾರ ವಿಧಾನಸಭೆ ಕಲಾಪದಲ್ಲಿ ಪ್ರಸ್ತಾಪಿಸಿದ ರಮೇಶ್​ ಕುಮಾರ್​, ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ 52 ಕಿಲೋ ಮೀಟರ್‌ಗೆ 47 ಸ್ಪೀಡ್‌ ಹಂಪ್ಸ್‌ ಹಾಕಲಾಗಿದೆ. ಈ ಬಗ್ಗೆ ಒಂದೇ ವರ್ಷದಲ್ಲಿ 2ನೇ ಬಾರಿ ಪ್ರಶ್ನೆ ಮಾಡುತ್ತಿದ್ದೇನೆ. ಈ ರೋಡ್‌ಗೆ ವಾರಸುದಾರರು ಯಾರು? ನಿಮ್ಮ ಜೆಇಗಳು ಇರೋದಿಲ್ವಾ, ಎಡಬ್ಲ್ಯು ಇಲ್ವಾ? ಎಕ್ಸಿಕ್ಯೂಟಿವ್‌ ಇಂಜಿನಿಯರ್ಸ್​ ಇಲ್ವಾ? ಅವರ ಆಸ್ತಿ ಅಲ್ವಾ ಅದು? ಪ್ರತಿ ಕಿಲೋ ಮೀಟರ್‌, ಅರ್ಧ ಕಿಲೋ ಮೀಟರ್‌ಗೆ ಸ್ಪೀಡ್‌ ಹಂಪ್ಸ್​ ಹಾಕಿಸುತ್ತಾರೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರಸ್ತೆಯನ್ನು ಏಕೆ ನಿರ್ಮಿಸಬೇಕು? ಎಂದರು. ಈ ಸದನದಲ್ಲಿನ ಪ್ರಶ್ನೋತ್ತರಕ್ಕೆ ಗೌರವ ಬರಬೇಕಾದರೆ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ನಿಂದ ಹಿಡಿದು ಎಲ್ಲರನ್ನೂ ಅಮಾನತು ಮಾಡಿ ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್‌, ಬೇರೆ ಬೇರೆ ಸಂದರ್ಭದಲ್ಲಿ ನಾನು ಪ್ರವಾಸ ಮಾಡಿದಾಗ ಸ್ಥಳೀಯರ ಆಗ್ರಹ, ಬೇಡಿಕೆಗಳ ಮೇರೆಗೆ ಅವರೇ ರಸ್ತೆಗೆ ಸ್ಪೀಡ್‌ ಹಂಪ್ಸ್​ ಹಾಕಲಾಗುತ್ತಿದೆ. ಶಾಸಕರು, ಸಂಸದರೂ ಈ ಬಗ್ಗೆ ಒತ್ತಡ ಹಾಕುತ್ತಾರೆ. ಹಾಗಾಗಿ ನಮಗೆ ಬಹಳ ಇಕ್ಕಟ್ಟಾಗಿದೆ ಎಂದು ಅಧಿಕಾರಿಗಳೇ ಹೇಳಿದ್ದಾರೆ ಎನ್ನುತ್ತಿದ್ದಂತೆ ಗರಂ ಆದ ರಮೇಶ್​ಕುಮಾರ್​, ಶಾಸಕರು-ಸಂಸದರು ಹೇಳೋದೆಲ್ಲಾ ಮಾಡೋದಾದ್ರೆ ನಾನೊಂದು ಐದಾರು ಜನರ ತಲೆ ತೆಗಿಬೇಕಿದೆ ಪರ್ಮೀಷನ್‌ ಕೊಡ್ಸಿ ಎಂದರು.

ಒಂದು ಗ್ರಾಮದಲ್ಲಿ ಅಪಘಾತ ಆಗುತ್ತೆ. ಅಲ್ಲಿ ರೌಡಿಗಳು ಗಲಾಟೆ ಮಾಡಿದ್ರೆ ಅವರಿಗೆ ಹೆದರಿ ಅಲ್ಲೊಂದು ಸ್ಪೀಡ್‌ ಹಂಪ್ಸ್​ ಹಾಕಿಸೋದು. ಯಾರ ಕೈಗೆ ಕೊಟ್ಟಿದ್ದೀರಿ ನೀವು ರಾಜ್ಯವನ್ನ? ರಸ್ತೆಗಳನ್ನೆಲ್ಲ ಅವರಿಗೇ ಕೊಟ್ಬಿಡಿ. ಎಲ್ಲಿ ಬೇಕಾದ್ರೂ ಉಳುಮೆ ಮಾಡಿಕೊಳ್ಳಲ್ಲಿ, ಎಲ್ಲಿ ಬೇಕಾದ್ರೂ ಸ್ಪೀಡ್‌ ಹಂಪ್ಸ್​ ಹಾಕ್ಸಿಕೊಳ್ಳಲಿ ಎನ್ನತ್ತಾ ಅವೈಜ್ಞಾನಿಕ ಹಂಪ್ಸ್​ಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ಪ್ರತಿಕ್ರಿಯಿಸಿದ ಸ್ಪೀಕರ್‌, ಹೊಸ ಸಚಿವರು ಈ ಸಮಸ್ಯೆ ಪರಿಹಾರಕ್ಕೆ ಏನಾದ್ರೂ ಮಾಡಿ ಎಂದರು. ಇದಕ್ಕೆ ಓಕೆ ಅಂದ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌, ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಎಸ್​ಪಿಗಳಿಗೆ ರಸ್ತೆ ಹಂಪ್ಸ್​ ಸಮಸ್ಯೆ ಸರಿಪಡಿಸಲು ಸೂಚಿಸಲಾಗಿದೆ ಎಂದರು.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ