Breaking News

ಭೀಮ್ಸ್ ನಿರ್ದೇಶಕ ಡಾ. ವಿನಯ್ ದಾಸ್ತಿಕೊಪ್ಪ ವಿರುದ್ಧ ಡಿಸಿಎಂ ಲಕ್ಷ್ಮಣ ಸವದಿ ಕೆಂಡಾಮಂಡಲ

Spread the love

ಬೆಳಗಾವಿ-ಭೀಮ್ಸ್ ನಿರ್ದೇಶಕ ಡಾ. ವಿನಯ್ ದಾಸ್ತಿಕೊಪ್ಪ ವಿರುದ್ಧ ಡಿಸಿಎಂ ಲಕ್ಷ್ಮಣ ಸವದಿ ಕೆಂಡಾಮಂಡಲವಾಗಿದ್ದು,ಡಾ. ವಿನಯ್ ದಾಸ್ತಿಕೊಪ್ಪ ಎಲ್ಲಿದ್ದಾರೆ? ಕರೆಸಿ ಇಲ್ಲಾವಾದರೆಅರೆಸ್ಟ್ ಮಾಡಿ ತಂದು ಇಲ್ಲಿ ಕೂಡ್ರಿಸಿ ಎಂದು ಸಭೆಯಲ್ಲಿಯೇ ಡಿಸಿಎಂ ಲಕ್ಷ್ಮಣ ಸವದಿ ಗುಡುಗಿದ್ದಾರೆ.ಬೆಳಗಾವಿ ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ನಡೆದ ಕೋವೀಡ್ ನಿರ್ವಹಣೆ ಪ್ರಗತಿ ಪರಶೀಲನಾ ಸಭೆಯಲ್ಲಿ, ಎಸ್ಪಿಗೆ ಸೂಚನೆ ನೀಡಿದ ಡಿಸಿಎಂ ಲಕ್ಷ್ಮಣ ಸವದಿ. ಭೀಮ್ಸ್ ನಿರ್ದೇಶಕ ದಾಸ್ತಕೊಪ್ಪ ವಿರುದ್ಧ ಗರಂ ಆದ್ರು. ಡಿಸಿಎಂ ಲಕ್ಷ್ಮಣ ಸವದಿ ಭೀಮ್ಸ್ ನಿರ್ದೇಶಕ ವಿರುದ್ಧ ಆಕ್ರೋಶ ವ್ಯೆಕ್ತಪಡಿಸಿದರು

ಕರೋನಾ ಎರಡನೆ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲೆಯ ಸಚಿವರು ಪ್ರಮುಖ ಸಭೆಯನ್ನು ನಡೆಸಿದರು ಈ ವೇಳೆ ಬಿಮ್ಸ್ ನಿರ್ದೇಶಕ ಡಾ. ವಿನಯ ದಾಸ್ತಿಕೊಪ್ಪ ಸಭೆಗೆ ಗೈ ರಾಗಿದ್ದು, ಡಿಸಿಎಂ ಸವದಿ ಕೆರಳಿ ಕೆಂಡವಾಗಿದ್ದಾರೆ.

ಸಭೆಯಲ್ಲಿ ಡಾ. ವಿನಯ ದಾಸ್ತಿಕೊಪ್ಪ ಗೈರಾಗಿರುವ ವಿಷಯ ತಿಳಿದ ಸವದಿ ಅವರು, ಬಿಮ್ಸ್ ನಿರ್ದೇಶಕ ಬಂದಿಲ್ಲ ಎಂದರೆ ಅರೇಸ್ಟ್ ಮಾಡಿ ಕರೆದುಕೊಂಡು ತನ್ನಿ, ಅರೇಸ್ಟ್ ಮಾಡಲು ಫುರ್ಸ್ ಕಳುಹಿಸಿ, ಅವರೆನು ಇಲ್ಲಿ ಹುಡುಗಾಟಿಕೆ ನಡೆಸಿದ್ದಾರಾ. ??  ಬಿಮ್ಸ್ ನಿರ್ದೇಶಕ್ ಆದರೆ ಅವನ ಪುರ್ತಿಗೆ ಇರುತ್ತಾನೆ, ಮಹತ್ವದ ಸಭೆಗೆ ಬರಲ್ಲ ಎಂದರೆ ಎನೂ ಅರ್ಥ ಎಂದು ಡಿಸಿಎಂ ಸವದಿ ಗರಂ ಆಗಿದ್ದಾರೆ. 

ಈ ಸಭೆಯಲ್ಲ ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ, ಸಂಸದ ಅಣ್ಣಾ ಸಾಹೇಬ ಜೊಲ್ಲೆ, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಸೇರಿದಂತೆ ಜಿಲ್ಲೆಯ ವಿಧಾನ ಸಭಾ ಸದಸ್ಯರು ಉಪಸ್ಥಿತರಿದ್ದರು. 


Spread the love

About Laxminews 24x7

Check Also

ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ

Spread the love ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ