ಬೆಳಗಾವಿ : ಜಿಲ್ಲೆಯ ಟಿಳಕವಾಡಿ ಭಾಗದಲ್ಲಿ ಹಲವು ದಿನಗಳಿಂದ ನಿಗೂಢ ಸೋಂಕು ಕಾಣಿಸಿಕೊಂಡ ಪರಿಣಾಮ 10ಕ್ಕೂ ಜಾರುವಾರು ಬಲಿಯಾಗಿವೆ.
ಜಾನುವಾರುಗಳಿಗೆ ಜ್ವರ, ಉಸಿರಾಟದ ಸಮಸ್ಯೆಯಿಂದ ಬಳಲಿ ಸಾವನ್ನಪ್ಪುತ್ತಿವೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೊಸ ಸೋಂಕಿನ ಭೀತಿ ಆರಂಭವಾಗಿದೆ.
ಪಶು ವೈದ್ಯರು ಮೃತ ಜಾನುವಾರುಗಳ ಮರಣೋತ್ತರ ಪರೀಕ್ಷೆಗೆ ಮುಂದಾಗಿದ್ದಾರೆ. ಜೀವನೋಪಾಯಕ್ಕೆ ಸಾಕಿದ್ದ ಜಾನುವಾರಗಳು ಸಾವನ್ನಪ್ಪಿರೋದು ಕಂಡು ಮಾಲೀಕರು ಕಣ್ಣೀರು ಹಾಕುತ್ತಿದ್ದರೆ, ಸಾರ್ವಜನಿಕರು ಭೀತಿಯಲ್ಲಿ ಇದ್ದಾರೆ.