ಕೊಪ್ಪಳ: ಶಿವರಾತ್ರಿಯ ದಿನವಾದ ಇಂದು ಕೊಪ್ಪಳದ ಹೊರವಲಯದಲ್ಲಿರುವ ಮಳೆ ಮಲ್ಲೇಶ್ವರ ದೇವಾಲಯದಲ್ಲಿ ಅಚ್ಚರಿಯೊಂದು ನಡೆದಿದೆ.
ಶಿವರಾತ್ರಿಯ ಹಿನ್ನೆಲೆಯಲ್ಲಿ ಇಂದು ದೇವಾಲಯಕ್ಕೆ ಸಾಕಷ್ಟು ಭಕ್ತರು ಆಗಮಿಸಿದ್ದರು. ಶಿವನಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದೇವಾಲಯದ ಹೊರಗಿನಿಂದ ಬಂದ ನಾಗರ ಹಾವೊಂದು ಗರ್ಭಗುಡಿಯ ಒಳಗಡೆ ಪ್ರವೇಶಿಸಿದೆ. ಲಿಂಗದ ಕಡೆಗೆ ತೆರಳಿದ ಹಾವು ಅಲ್ಲಿಂದ ಕಾಣೆಯಾಗಿದೆ. ಹಾವನ್ನು ಕಂಡ ಭಕ್ತರು ಧನ್ಯತಾಭಾವದಿಂದ ಕೈಮುಗಿದಿದ್ದಾರೆ.