ಬೆಂಗಳೂರು: ಕಾಂಗ್ರೆಸ್ಸಿನವರು ಮುಂಬರುವ ಗ್ರಾಮ ಪಂಚಾಯ್ತಿ ಚುನಾವಣೆ ಪ್ರಣಾಳಿಕೆಯಲ್ಲಿ ನಾವು ಗೋಹತ್ಯೆ ನಿಷೇಧ ಮಾಡಲ್ಲ ಅಂತ ಹೇಳಲಿ. ಗೋ ಕಡಿಯೋಕೆ ಅವಕಾಶ ಕೊಡ್ತೀವಿ ಅಂತ ತಾಕತ್ ಇದ್ದರೆ ಘೋಷಣೆ ಮಾಡಲಿ ಎಂದು ಸಚಿವ ಈಶ್ವರಪ್ಪ ಸವಾಲೆಸೆದಿದ್ದಾರೆ.
ವಿಧಾನಸೌಧದಲ್ಲಿ ಲವ್ ಜಿಹಾದ್ ಮತ್ತು ಗೋಹತ್ಯೆ ನಿಷೇಧ ಕಾಯ್ದೆಗೆ ಕಾಂಗ್ರೆಸ್ ವಿರೋಧ ವಿಚಾರಕ್ಕೆ ಪ್ರತಿಕ್ರಿಯಿಸಿ, ಗೋವನ್ನ ನಾವು ತಾಯಿ ಅಂತೀವಿ. ಗೋವನ್ನ ತಾಯಿ ಸ್ವರೂಪ ಅಂತ ನಾವು ಕಾಣ್ತೀವಿ. ನಮ್ಮ ತಾಯಿಗೆ ವಯಸ್ಸಾಯ್ತು ಅಂತ ನಾವು ಎಲ್ಲಾದ್ರು ಬಿಡ್ತೀವಾ?, ಇದನ್ನ ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಲಿ. ನಾವು ಗೋಹತ್ಯೆ ನಿಷೇಧ ಕಾಯ್ದೆ ತಂದೇ ತರುತ್ತೇವೆ ಎಂದು ಸಚಿವರು ಖಡಕ್ಕಾಗಿ ನುಡಿದಿದ್ದಾರೆ.