Breaking News

ಸಚಿವ ಸ್ಥಾನ ಸಿಗದ ಬಗ್ಗೆ ಮಾತನಾಡಲ್ಲ: ಯೂಟರ್ನ್ ಹೊಡೆದ ಜಿಗಜಿಣಗಿ

Spread the love

ವಿಜಯಪುರ: ಸನ್ಮಾನ ಸ್ವೀಕರಿಸಿದ ವೇದಿಕೆಯಲ್ಲಿ ಪಕ್ಷದ ನಾಯಕರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದ ಸಂಸದ ರಮೇಶ್ ಜಿಗಜಿಣಗಿ, ವೇದಿಕೆ ಇಳಿಯುತ್ತಲೇ ಯೂಟರ್ನ್ ಹೊಡೆದಿದ್ದಾರೆ.

ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ಸಿಗಿದ ಬಗ್ಗೆ ಏನನ್ನೂ ಹೇಳಲ್ಲ, ಈಗ ಅದನ್ನು ಬಿಟ್ಟು ಬೇರೆ ಏನನ್ನಾದರೂ ಕೇಳಿ ಎಂದಿದ್ದಾರೆ.

 

ತಮಗೆ ಪಕ್ಷ ನೀಡಿದ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಾ, ಕೇಂದ್ರದಲ್ಲಿ ಸಂಪುಟ ರಚನೆ ಸಂದರ್ಭದಲ್ಲಿ ಸತತ 7 ಬಾರಿ ಗೆದ್ದಿರುವ ನನ್ನ ಹೆಸರನ್ನು ಹೇಳಲಿಲ್ಲ. ತಮ್ಮ ಹಿರಿತನ ಹಾಗೂ ಅನುಭವ ಪಕ್ಷ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಇದರಿಂದ ನನಗೆ ನಷ್ಟವಿಲ್ಲ, ಪಕ್ಷಕ್ಕೆ ನಷ್ಟವಿದೆ ಎಂದಿದ್ದರು.


Spread the love

About Laxminews 24x7

Check Also

ಪತ್ನಿ ಮೃತಪಟ್ಟ 3 ಗಂಟೆಯ ಬಳಿಕ ಪತಿ ಸಾವು; ಒಟ್ಟಿಗೆ ಅಂತ್ಯಕ್ರಿಯೆ

Spread the loveಬೀದರ್: ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಮುಧೋಳ (ಬಿ) ಗ್ರಾಮದಲ್ಲಿ ದಂಪತಿಗಳು ಒಂದೇ ದಿನ ಸಾವಿಗೀಡಾದ ಘಟನೆ ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ