Breaking News

ಬೆಳಗಾವಿಯ ನಾಲ್ವರು ಪೊಲೀಸರ ಕರ್ತವ್ಯ ಪ್ರಜ್ಞೆ, ಕೆಲಸಕ್ಕೆ ಇಡೀ ಪೊಲೀಸ್ ಇಲಾಖೆ, ಕೋರ್ಟ್ ಅಪಾರ ಮೆಚ್ಚುಗೆ!

Spread the love

ಬೆಳಗಾವಿ ಪೊಲೀಸ್ ಆಯುಕ್ತರ ಸೂಚನೆಯಂತೆ ಅಂದು ಬೆಳಗ್ಗೆಯೇ ಅಖಾಡಕ್ಕಿಳಿದ ಪೊಲೀಸರು ಮನೆ ಮನೆಗೆ ಹೋಗಿ ಎಲ್ಲರ ಮೊಬೈಲ್ ಪರಿಶೀಲನೆ ಮಾಡ್ತಾರೆ. ಖುದ್ದು ಇವರೇ ಮೊಬೈಲ್ ನಲ್ಲಿನ ವಿಡಿಯೋ ಡಿಲಿಟ್ ಮಾಡುತ್ತಾರೆ, ಕೆಲ ಯುವಕರು ಊರು ಬಿಟ್ಟಿದ್ದು ಅವರನ್ನೂ ಕರೆಯಿಸಿ ಮೊಬೈಲ್ ನಲ್ಲಿ ವಿಡಿಯೋ ಡಿಲಿಟ್ ಮಾಡಿಸ್ತಾರೆ.
ಯಾರಾದ್ರೂ ವೈರಲ್ ಮಾಡಿದ್ರೇ ಅವರ ವಿರುದ್ದ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಇವರೇ ಊರ ತುಂಬ ಅನೌನ್ಸ್ ಕೂಡ ಮಾಡಿರುತ್ತಾರೆ.
ಬೆಳಗಾವಿಯ ನಾಲ್ವರು ಪೊಲೀಸರ ಕರ್ತವ್ಯ ಪ್ರಜ್ಞೆ, ಕೆಲಸಕ್ಕೆ ಇಡೀ ಪೊಲೀಸ್ ಇಲಾಖೆ, ಕೋರ್ಟ್ ಅಪಾರ ಮೆಚ್ಚುಗೆ! ಏನದು ಪ್ರಕರಣ?

ಅದು ಡಿಸೆಂಬರ್ 10ರ ಮಧ್ಯರಾತ್ರಿ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಅದೊಬ್ಬ ಮಹಿಳೆಯನ್ನ ವಿವಸ್ತ್ರಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ಮಾಡ್ತಿದ್ದರು. ಈ ವೇಳೆ ಕಾಕತಿ ಠಾಣೆ ಪೊಲೀಸರ 112ಗೆ ಗ್ರಾಮಸ್ಥರೊಬ್ಬರು ಕರೆ ಮಾಡಿ ಘಟನೆ ಕುರಿತು ಹೇಳಿದ್ದಾರೆ, ಹೀಗೆ ಕರೆ ಬಂದ ಹದಿನೈದು ನಿಮಿಷದಲ್ಲಿ 112 ವಾಹನ ಸಮೇತ ಇಬ್ಬರು ಪೊಲೀಸ್ ಕಾನ್ಸ್​​ಟೇಬಲ್​​ಗಳಾದ ಸುಭಾಷ ಬಿಲ್ ಮತ್ತು ವಿಠ್ಠಲ ಪಟ್ಟೇದ ಸ್ಥಳಕ್ಕೆ ಹೋಗಿದ್ದಾರೆ.

 

ಈ ವೇಳೆ ಮಹಿಳೆಯ ಸ್ಥಿತಿ ಕಂಡು ಶಾಕ್ ಆಗಿದ್ದಾರೆ, ಕೂಡಲೇ ಅಲ್ಲಿದ್ದ ಆರೋಪಿಗಳಿಗೆ ಅವಾಜ್ ಹಾಕಿ ತಡೆಯುವ ಕೆಲಸ ಮಾಡಿದ್ದಾರೆ. ಇದೇ ವೇಳೆ ಘಟನೆ ಕೈಮೀರಬಾರದು ಅನ್ನೋ ಕಾರಣಕ್ಕೆ ಕೂಡಲೇ ಪಿಎಸ್‌ಐ ಮಂಜುನಾಥ್ ಹುಲಕುಂದ ಗೆ ಕರೆ ಮಾಡಿದ ಸಿಬ್ಬಂದಿ ಘಟನೆ ಕುರಿತು ಹೇಳಿದ್ದಾರೆ. ಇದಾದ ಬಳಿಕ ಇಬ್ಬರೂ ಪೊಲೀಸ್ ಕಾನ್ಸ್​​ಟೇಬಲ್​​ಗಳು ಮೊಟ್ಟಮೊದಲ ಕೆಲಸವಾಗಿ ಮಹಿಳೆಯ ಮನೆಗೆ ಓಡಿ ಹೋಗಿ ಸೀರೆಯೊಂದನ್ನ ತಂದು ಆ ತಾಯಿಗೆ ನೀಡಿ ಮಾನ ಮುಚ್ಚುವ ಕೆಲಸ ಮಾಡಿದ್ದಾರೆ.


Spread the love

About Laxminews 24x7

Check Also

ಜ.19 ರಂದು ’12ನೇ ಸತೀಶ್ ಶುಗರ್ಸ್ ಕ್ಲಾಸಿಕ್-2026′ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಬೃಹತ್ ದೇಹದಾರ್ಢ್ಯ ಸ್ಪರ್ಧೆ; ಅಜೀತ್ ಸಿದ್ಧನ್ನವರ

Spread the love ಜ.19 ರಂದು ’12ನೇ ಸತೀಶ್ ಶುಗರ್ಸ್ ಕ್ಲಾಸಿಕ್-2026′ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಬೃಹತ್ ದೇಹದಾರ್ಢ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ