Breaking News

Daily Archives: ಏಪ್ರಿಲ್ 2, 2026

ಚಿಕ್ಕಮುನವಳ್ಳಿ ಹೊರವಲಯದಲ್ಲಿ ಕಳ್ಳಬಟ್ಟಿ ಅಡ್ಡೆ ಮೇಲೆ ನಂದಗಡ ಪೊಲೀಸರ ದಿಢೀರ್ ದಾಳಿ: ಆರೋಪಿ ವಶಕ್ಕೆ

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದ ಹೊರವಲಯದಲ್ಲಿ ಅಕ್ರಮವಾಗಿ ತಯಾರಿಸಿ ಮಾರಾಟ ಮಾಡಲಾಗುತ್ತಿದ್ದ ಕಳ್ಳಬಟ್ಟಿ ಅಡ್ಡೆಯ ಮೇಲೆ ನಂದಗಡ ಪೊಲೀಸರು ಯಶಸ್ವಿ ದಾಳಿ ನಡೆಸಿದ್ದಾರೆ. ಈ ಮೂಲಕ ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದ ಸುತ್ತಮುತ್ತಲಿನ ಹಳ್ಳಿಗಳ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದ ಭೀಮಪ್ಪ ಯಲ್ಲಪ್ಪ ದಳವಾಯಿ ಎಂಬಾತ ಕಲ್ಲಪ್ಪ ಮೀಟಗಾರ ಎಂಬುವವರ ಜಮೀನಿನ ಹತ್ತಿರದ ಹಳ್ಳದಲ್ಲಿ ಕಳ್ಳಬಟ್ಟಿ ಸಾರಾಯಿ ತಯಾರಿಸಿ ಮಾರಾಟ ಮಾಡುತ್ತಿದ್ದನು. ಇದರಿಂದಾಗಿ …

Read More »

ಮಹಿಳೆಯರ ಪರ ಚಿಂತಿಸುವ ಪಕ್ಷ ಕಾಂಗ್ರೆಸ್ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರ ಸಚಿವರ ಪ್ರಚಾರ ವಾರ್ಡ್ 11ರ ಬಸವರಾಜ್ ಪೇಟೆಯಲ್ಲಿ ಮತಯಾಚಿಸಿದ ಸಚಿವರು ಮಹಿಳೆಯರ ಪರ ಚಿಂತಿಸುವ ಪಕ್ಷ ಕಾಂಗ್ರೆಸ್ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿಕೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರ ಸಚಿವರ ಪ್ರಚಾರ ವಾರ್ಡ್ 11ರ ಬಸವರಾಜ್ ಪೇಟೆಯಲ್ಲಿ ಮತಯಾಚಿಸಿದ ಸಚಿವರು ದಾವಣಗೆರೆ: ಕರ್ನಾಟಕದಲ್ಲಿ ಆಗಲಿ, ಕೇಂದ್ರದಲ್ಲಿ ಆಗಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಮಹಿಳೆಯರ ಕೇಂದ್ರೀಕೃತ ಯೋಜನೆಗಳನ್ನು ಜಾರಿಗೆ ತಂದಿದೆ.‌ ಮಹಿಳೆಯರಿಗೆ …

Read More »

ವಿಚಾರಣಾಧೀನ ಕೈದಿ ಭೇಟಿ ನೆಪದಲ್ಲಿ ಡ್ರಗ್ಸ್ ಕೊಂಡೊಯ್ದಿದ್ದ ಯುವತಿ.

ಡ್ರಗ್ಸ್ ಜೊತೆಗೆ ಸಿಮ್ ಕಾರ್ಡ್ ಕೂಡ ಸಪ್ಲೈ. ಮೂರು ಸಿಮ್ ಕಾರ್ಡ್ ಪತ್ತೆ ಹಚ್ಚಿದ ಪೊಲೀಸರು. ರಿತಿಕಾ ರೈ(27) ಬಂಧಿಸಿದ ಪರಪ್ಪನ ಅಗ್ರಹಾರ ಪೊಲೀಸರು. ಮಾರ್ಚ್ 26 ರಂದು ವಿಚಾರಣಾಧೀನ ಕೈದಿ ಭೇಟಿಗೆ ತೆರಳಿದ್ದ ರಿತಿಕಾ ರೈ. ಸಂಜೆ 4.30ರ ವಿಸಿಟರ್ಸ್ ಟೈಂ ನಲ್ಲಿ ಪಾಸ್ ಜೈಲಿಗೆ ಎಂಟ್ರಿ. ಫರಾನ್ ಖಾನ್ ಎಂಬ ವಿಚಾರಣಾಧೀನ ಕೈದಿ ಭೇಟಿಗೆ ಯತ್ನ. ಜೈಲಿನ ಮೈನ್ ಗೇಟ್ ಬಳಿ ಅನುಮಾನಸ್ಪದವಾಗಿ ನಿಂತಿದ್ದ ರಿತಿಕಾ ರೈ. …

Read More »

ಹೆಚ್ಚಾದ ಬಿಸಿಲು: ಉ.ಕದ 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯ ಬದಲಾವಣೆ

ಬೆಳಗಾವಿ: ರಾಜ್ಯದಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪಮಾನವನ್ನು ಪರಿಗಣಿಸಿ, ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಹೌದು…ಬಿಸಿಲಿನ ತಾಪಮಾನದ ಹೆಚ್ಚಳ ಹಿನ್ನೆಲೆ ಕಿತ್ತೂರು ಕರ್ನಾಟಕದ ಎರಡು ಜಿಲ್ಲೆ, ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯವನ್ನು ಬದಲಾವಣೆ ಮಾಡಲಾಗಿದೆ. 2026ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪ್ರಸ್ತುತ ಇರುವ ಕಚೇರಿ ವೇಳಾಪಟ್ಟಿಯ ಬದಲಾಗಿ ಬೆಳಿಗ್ಗೆ 8.00 ಗಂಟೆಯಿಂದ ಮಧ್ಯಾಹ್ನ 1.30 ನಿಗದಿ ಮಾಡಿ ಇಂದು (ಮಾರ್ಚ್ 31) ರಾಜ್ಯ ಸರ್ಕಾರ …

Read More »

ಬೆಳಗಾವಿಯಲ್ಲಿ ಆಟೊ ಗ್ಯಾಸ್‌ಗೆ ಪರದಾಟ

ಬೆಳಗಾವಿ: ಅಮೆರಿಕ, ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಯುದ್ಧದ ಕರಿನೆರೆಳು ದೇಶದ ಕೆಲ ಜನರ ಬದುಕನ್ನು ಬುಡಮೇಲು ಮಾಡಿದ್ದು, ಮಧ್ಯಮ ವರ್ಗದ ಜನರ ಪಾಡಂತೂ ಹೇಳತೀರದಾಗಿದೆ. ಹೌದು… ಕುಂದಾನಗರಿಯಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್‌ ವ್ಯತ್ಯಯದಿಂದ ಹೋಟೆಲ್‌ಗಳ ಬಾಗಿಲು ಮುಚ್ಚುತ್ತಿದ್ದರೆ ಸಿಎನ್‌ ಜಿ ಗ್ಯಾಸ್‌ ಕೊರತೆಯಿಂದ ಆಟೊ ಚಾಲಕ ಬದುಕಿಗೂ ಪೆಟ್ಟು ಬಿದ್ದಿದೆ. ಈ ಚಾಲಕರು ಹೊತ್ತಿನ ಊಟಕ್ಕಾಗಿ ದುಡಿದ ತಿನ್ನುವ ಶ್ರಮಿಕರು. ನಗರದಲ್ಲಿ ನಿತ್ಯ ಆಟೊ ಓಡಾಡಿಸಿಕೊಂಡು ದುಡಿದರೆ ಮಾತ್ರ …

Read More »

ಬೆಳಗಾವಿಯಲ್ಲಿ ಸಿಲಿಂಡರ್ ಅಭಾವ: ನಡು ರಸ್ತೆಯಲ್ಲಿ ಸಿಲಿಂಡರ್ ಇಟ್ಟು ಪ್ರತಿಭಟನೆ

ಇರಾನ್- ಇಸ್ರೇಲ್ ಯುದ್ಧದ ಪರಿಣಾಮ ಎಲ್ಲಡೆ ಬೀರಿದ್ದು, ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಿಲಿಂಡರ್ ಸಿಗದ ಕಾರಣ ಜನ ರೊಚ್ಚಿಗೆದ್ದು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.‌ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಸಿಲಿಂಡರ್ ಸಿಗದ ಕಾರಣ ಕಂಗಾಲಾದ ಜನ ರೊಚ್ಚಿಗೆದ್ದು ನಡುರಸ್ತೆಯಲ್ಲೇ ಸಿಲಿಂಡರ್ ಇಟ್ಟುಕೊಂಡು ಪ್ರತಿಭಟನೆ ಮಾಡಿದ್ದಾರೆ. ಕಳೆದೊಂದು ತಿಂಗಳಿನಿಂದ ಬುಕ್ ಮಾಡಿದರು ಸಿಲಿಂಡರ್ ಸಿಗುತ್ತಿಲ್ಲ. ಸಿಲಿಂಡರ್ ಕಚೇರಿಗೆ ಹೋದರು ಯಾರು ಕ್ಯಾರೆ …

Read More »

ಕಾಂಕ್ರೀಟ್ ಪಂಪ್‌ನೊಳಗೆ ಮದ್ಯ ಸಾಗಿಸುತ್ತಿದ್ದ ಗುಜರಾತ್ ಮೂಲದ ಚಾಲಕನ ಬಂಧನ

ಜೋಯಿಡಾ: ಗೋವಾ-ಕರ್ನಾಟಕ ಗಡಿಭಾಗದ ಅನಮೋಡ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮ ಮದ್ಯ ಸಾಗಾಟದ ಬೃಹತ್ ಜಾಲವೊಂದನ್ನು ಭೇದಿಸಿದ್ದಾರೆ. ಗುಜರಾತ್‌ನ ರಾಜ್‌ಕೋಟ್ ಮೂಲದ ಯೋಗೇಶಭಾಯ್ ಕಾಗ್ದಾದ್ ಎಂಬಾತನನ್ನು ಬಂಧಿಸಲಾಗಿದ್ದು, 167 ಲೀಟರ್ ಮದ್ಯ ಸೇರಿದಂತೆ ಒಟ್ಟು ₹45 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಸಿಬ್ಬಂದಿ ವಾಡಿಕೆಯ ತಪಾಸಣೆ ನಡೆಸುತ್ತಿದ್ದ ವೇಳೆ, ಗುಜರಾತ್ ನೋಂದಣಿಯ ಅಶೋಕ್ ಲೇಲ್ಯಾಂಡ್ ಲಾರಿಯೊಂದು ಅನುಮಾನಾಸ್ಪದವಾಗಿ ಬಂದಿದೆ. ವಾಹನವನ್ನು ತಡೆದು ಸಮಗ್ರವಾಗಿ …

Read More »

ದಕ್ಷ ಪೊಲೀಸ್ ಸೇವೆಗಾಗಿ ಕುಮಟಾದ ರಾಮನಾಥ ಪಟಗಾರಗೆ ಒಲಿದ ‘ಮುಖ್ಯಮಂತ್ರಿಗಳ ಚಿನ್ನದ ಪದಕ’

ಕುಮಟಾ: ಪೊಲೀಸ್ ಇಲಾಖೆಯಲ್ಲಿನ ದಕ್ಷ ಹಾಗೂ ನಿಷ್ಠಾವಂತ ಸೇವೆಗಾಗಿ ನೀಡಲಾಗುವ ಪ್ರತಿಷ್ಠಿತ 2025ನೇ ಸಾಲಿನ ‘ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳ ಚಿನ್ನದ ಪದಕ’ಕ್ಕೆ ಕುಮಟಾ ತಾಲೂಕಿನ ಕಲಭಾಗ ಗ್ರಾಮದವರಾದ ಹಾಗೂ ಪ್ರಸ್ತುತ ಮುಖ್ಯಮಂತ್ರಿಗಳ ಭದ್ರತಾ ಪಡೆಯ ಸಿಬ್ಬಂದಿಯಾಗಿರುವ ಶ್ರೀ ರಾಮನಾಥ ಎಸ್. ಪಟಗಾರ ಅವರು ಭಾಜನರಾಗಿದ್ದಾರೆ. ಇವರ ಈ ಸಾಧನೆ ಇಡೀ ಉತ್ತರ ಕನ್ನಡ ಜಿಲ್ಲೆಗೆ ಹಾಗೂ ಕುಮಟಾ ತಾಲೂಕಿಗೆ ಹೆಮ್ಮೆಯನ್ನು ತಂದಿದೆ. ಜುಲೈ 1, 1978ರಲ್ಲಿ ಹಿರಿಯ ಧುರೀಣರಾದ ಶ್ರೀ …

Read More »

24 ವರ್ಷಗಳ ಸುದೀರ್ಘ ದೇಶಸೇವೆ ತವರಿಗೆ ಮರಳಿದ ವೀರ ಯೋಧ

24 ವರ್ಷಗಳ ಸುದೀರ್ಘ ದೇಶಸೇವೆ: ತವರಿಗೆ ಮರಳುತ್ತಿರುವ ವೀರ ಯೋಧ ವಿನಾಯಕ ಪಟಗಾರರಿಗೆ ಕುಮಟಾದಲ್ಲಿ ಭವ್ಯ ಸ್ವಾಗತ ಕುಮಟಾ: ಭಾರತೀಯ ಸೇನೆಯಲ್ಲಿ ಸತತ 24 ವರ್ಷಗಳ ಕಾಲ ದೇಶಸೇವೆಗೈದು ಸೇವಾ ನಿವೃತ್ತಿ ಪಡೆದಿರುವ ತಾಲೂಕಿನ ಕಡೇಕೋಡಿಯ ಹೆಮ್ಮೆಯ ಪುತ್ರ, ಹವಾಲ್ದಾರ್ ಶ್ರೀ ವಿನಾಯಕ ಹೊಸಬಯ್ಯ ಪಟಗಾರ ಅವರು ತಮ್ಮ ಹುಟ್ಟೂರಿಗೆ ಆಗಮಿಸುತ್ತಿದ್ದು, ಅವರಿಗೆ ಅದ್ಧೂರಿ ಸ್ವಾಗತ ಕೋರಲು ಕುಮಟಾ ಸಜ್ಜಾಗಿದೆ. ದೇಶದ ವಿವಿಧ ಗಡಿಗಳಲ್ಲಿ ಹಾಗೂ ಬೇರೆ ಬೇರೆ ಪ್ರದೇಶಗಳಲ್ಲಿ …

Read More »

ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ಚಿನ್ನದ ಉಂಗುರ ಹಾಗೂ ಪರ್ಸ್ ಸಿಕ್ಕಿದೆ

ಕುಮಟಾ: ಪ್ರಯಾಣಿಕರೊಬ್ಬರು ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ಚಿನ್ನದ ಉಂಗುರ ಹಾಗೂ ಹಣವಿರುವ ಪರ್ಸ್ ಒಂದು ಸಾರಿಗೆ ಸಂಸ್ಥೆಯ ನಿರ್ವಾಹಕರಿಗೆ ಸಿಕ್ಕಿದ್ದು, ವಾರಸುದಾರರು ಸೂಕ್ತ ದಾಖಲೆಗಳನ್ನು ನೀಡಿ ಪಡೆದುಕೊಳ್ಳುವಂತೆ ಕುಮಟಾ ಘಟಕದ ಸಂಚಾರ ಶಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ದಿನಾಂಕ 01/03/2026 ರಂದು ಮಧ್ಯಾಹ್ನ 14.00 ಗಂಟೆಗೆ ಕುಮಟಾ ಬಸ್ ನಿಲ್ದಾಣದಿಂದ ಕಡ್ನೀರು ಮಾರ್ಗವಾಗಿ ಹೊನ್ನಾವರಕ್ಕೆ ಹೋಗುವ ಬಸ್ಸಿನಲ್ಲಿ (ವಾಹನ ಸಂಖ್ಯೆ: KA 31 F 1292) ಈ ಘಟನೆ ನಡೆದಿದೆ. ಬಸ್ಸು …

Read More »