Breaking News

Yearly Archives: 2025

ಲೋಕೋಪಯೋಗಿ ಇಲಾಖೆಯ ವತಿಯಿಂದ ನಿರ್ಮಿಸಲಾದ ಪಾಲಾರ್ ನದಿಯ ಮೇಲಿನ ಸೇತುವೆಯ ಉದ್ಘಾಟನೆಯನ್ನು ಇಂದು ಮಾನ್ಯ ಹಿರಿಯ ಸಚಿವರಾದ ಶ್ರೀ ಕೆ. ಎಚ್. ಮುನಿಯಪ್ಪ ಅವರೊಂದಿಗೆ ನೆರವೇರಿಸಲಾಯಿತು

ಕೋಲಾರ ಜಿಲ್ಲೆಯ ಕೆ.ಜೀ.ಎಫ್ ತಾಲೂಕಿನ ನಲ್ಲೂರು ಮತ್ತು ನತ್ತ ಗ್ರಾಮಗಳ ನಡುವೆ, ಲೋಕೋಪಯೋಗಿ ಇಲಾಖೆಯ ವತಿಯಿಂದ ನಿರ್ಮಿಸಲಾದ ಪಾಲಾರ್ ನದಿಯ ಮೇಲಿನ ಸೇತುವೆಯ ಉದ್ಘಾಟನೆಯನ್ನು ಇಂದು ಮಾನ್ಯ ಹಿರಿಯ ಸಚಿವರಾದ ಶ್ರೀ ಕೆ. ಎಚ್. ಮುನಿಯಪ್ಪ ಅವರೊಂದಿಗೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕೆ.ಜೀ.ಎಫ್ ಶಾಸಕರಾದ ಶ್ರೀಮತಿ ರೂಪಕಲಾ ಎಂ. ಶಶಿಧರ್, ಬಂಗಾರಪೇಟೆ ಶಾಸಕರಾದ ಶ್ರೀ ಎಸ್. ಎನ್. ನಾರಾಯಣಸ್ವಾಮಿ, ಇಲಾಖೆಯ ಹಿರಿಯ ಅಧಿಕಾರಿಗಳು, ಪಕ್ಷದ ನಾಯಕರು, ಗಣ್ಯರು ಹಾಗೂ ಸ್ಥಳೀಯ …

Read More »

ಹುಬ್ಬಳ್ಳಿಯ KMCRI ಸಾಧನೆ: ಶಸ್ತ್ರಚಿಕಿತ್ಸೆ ಮಾಡಿ ನವಜಾತ ಶಿಶುವಿನ ಹೊಟ್ಟೆಯಲ್ಲಿದ್ದ ಭ್ರೂಣ ಯಶಸ್ವಿಯಾಗಿ ಹೊರತೆಗೆದ ವೈದ್ಯರು!

ಹುಬ್ಬಳ್ಳಿ: 14 ದಿನಗಳ ನವಜಾತ ಶಿಶುವಿನ ಹೊಟ್ಟೆಯಲ್ಲಿದ್ದ ಭ್ರೂಣವನ್ನು ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಕೆಎಂಸಿಆರ್​ಐ) ವೈದ್ಯರು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ಕುಂದಗೋಳ ಮೂಲದ ಮಹಿಳೆಯೊಬ್ಬರು ಕೆಎಂಸಿಆರ್‌ಐನ ತಾಯಿ ಮತ್ತು ಮಕ್ಕಳ ವಿಭಾಗದಲ್ಲಿ ಸೆ.23 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿನಲ್ಲಿ ಏನಾದರೂ ನ್ಯೂನತೆ ಇದೆಯೇ ಎಂದು ತಿಳಿಯಲು ಪರೀಕ್ಷಿಸುವ ವೇಳೆ, ಶಿಶುವಿನಲ್ಲಿ ಭ್ರೂಣ (Fetus in fetu) ಇರುವುದು ಪತ್ತೆಯಾಗಿತ್ತು. ಭ್ರೂಣಕ್ಕೆ ಬೆನ್ನು ಹುರಿ, ಚರ್ಮ, …

Read More »

ಸಿರಪ್ ನಿಂದ ಮಕ್ಕಳು ಸಾವು,ಆರೋಗ್ಯ ಇಲಾಖೆ ಅಲರ್ಟ್ ಕರ್ನಾಟಕದ ಮೇಲೆ ಯಾವುದೇ ಪರಿಣಾಮ ಬೀರಲ್ಲ

ಮಾಗಡಿ : ಸಿರಪ್ ನಿಂದ ಮಕ್ಕಳು ಸಾವು,ಆರೋಗ್ಯ ಇಲಾಖೆ ಅಲರ್ಟ್ ಕರ್ನಾಟಕದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಕೋಲ್ಡ್ರೀಫ್ ಸಿರಪ್ ಗೆ ಮಕ್ಕಳು‌‌ ಬಲಿಯಾಗಿರುವ ಪ್ರಕರಣ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ.ಇಂದು ಅಧಿಕಾರಿಗಳ ಜೊತೆ ವರ್ಚುವಲ್ ಸಭೆ ಬಳಿಕ ಮಾತ್ನಾನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್,ತಮಿಳುನಾಡು,ಪಾಂಡಿಚೆರಿ, ರಾಜಸ್ಥಾನ ಸೇರಿದಂತೆ ಈ ಕಾಫ್ ಸಿರಪ್ ಸರಬರಾಜು ಆಗಿದೆ ಎಂಬ ಮಾಹಿತಿ ಇದೆ.ನಮ್ಮ ರಾಜ್ಯದಲ್ಲಿ ಕೋಲ್ಡ್ರೀಫ್ ಸರಬರಾಜು ಆಗಿಲ್ಲ.ಆದ್ರೂನೂ ಮುಂಜಾಗ್ರತಾ …

Read More »

ಮಳೆಯಿಂದ ಬೆಳೆ ಹಾನಿ ಹಿನ್ನೆಲೆ ಇವತ್ತೇ ಪರಿಹಾರದ ಡಿಡಿ ಜೊತೆ ಚರ್ಚೆ:ರಾಜು ಕಾಗೆ

ಚಿಕ್ಕೋಡಿ : ಮಳೆಯಿಂದ ಬೆಳೆ ಹಾನಿ ಹಿನ್ನೆಲೆ. ಬೆಳಗಾವಿ, ಕಲಬುರ್ಗಿ,ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಬಿಜೆಪಿ ನೀಯೋಗ ಭೇಟಿ. ಸರ್ಕಾರ ರೈತರ ಸಮಸ್ಯೆ ಸ್ಪಂದಿಸುತ್ತಿಲ್ಲ.ಎಂಬ ಆರ್ ಅಶೋಕ ಹೇಳಿಕೆ ವಿಚಾರ. ಕಾಗವಾಡದಲ್ಲಿ ಶಾಸಕ ರಾಜು ಕಾಗೆ ಹೇಳಿಕೆ. ವಿರೋಧಪಕ್ಷದವರು ನಮ್ಮನ್ನ ಎಚ್ಚರಿಸುವ ಕೆಲಸ ಮಾಡುತ್ತಿರಾರೆ. ವೀಕ್ಷಣೆ ಬಂದು ಚಾ ಚೋಡಾ ತಿಂದು ಹೋಗಬೇಕಾ ಏನಾದ್ರೂ ಒಂದು ಹೇಳಿಕೆಯನ್ನು ನೀಡಿರುತ್ತಾರೆ. ಇವತ್ತೇ ಪರಿಹಾರದ ಡಿಡಿ ಜೊತೆ ಚರ್ಚೆ ನಡೆಸಲಾಗಿದೆ. ಪರಿಹಾರನ್ನ ಆದೆಷ್ಟು ಬೇಗ …

Read More »

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಮೀರಜ್‌ನಲ್ಲಿ ಒಬ್ಬನನ್ನು ಬಂಧಿಸಲಾಗಿದೆ…

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಮೀರಜ್‌ನಲ್ಲಿ ಒಬ್ಬನನ್ನು ಬಂಧಿಸಲಾಗಿದೆ… – ಸಾಂಗ್ಲಿ ಜಿಲ್ಲೆಯ ಮೀರಜ್‌ನ 16 ವರ್ಷದ ಬಾಲಕನೊಬ್ಬ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡಿದ್ದ. ಈ ಘಟನೆಯಿಂದಾಗಿ ಮಿರಜ್‌ನ ಶಾಸ್ತ್ರಿ ಚೌಕ್‌ನಲ್ಲಿ ಜನಸಮೂಹ ಜಮಾಯಿಸಿತು. ಇದರ ಮದ್ಯ ರಾಜಕೀಯ ನಾಯಕರ ಪೋಸ್ಟರ್‌ಗಳನ್ನು ಹರಿದು ಹಾಕಿದ್ದಾರೆ. ಭಾವನೆಗಳಿಗೆ ಧಕ್ಕೆ ತಂದ ಹುಡುಗನ ಮನೆಗೆ ಕೆಲವರು ಮೆರವಣಿಗೆ ನಡೆಸಿದ್ದರು. ಪೊಲೀಸರು ಗುಂಪುಗರ್ಷಣೆ ಚದುರಿಸಲು ಧಾವಿಸಿದರು ಮತ್ತು ಸಮುದಾಯವು …

Read More »

ಹಸುವನ್ನು ಕೊಂದಿದೆ ಎಂಬ ಮಾತ್ರಕ್ಕೆ ವಿಷ ಹಾಕಿ ಹುಲಿಯನ್ನು ಸಾಯಿಸುವುದು ಸರಿಯಲ್ಲ.:C.M.

ಬೆಂಗಳೂರು: ಹಸುವನ್ನು ಕೊಂದಿದೆ ಎಂಬ ಮಾತ್ರಕ್ಕೆ ವಿಷ ಹಾಕಿ ಹುಲಿಯನ್ನು ಸಾಯಿಸುವುದು ಸರಿಯಲ್ಲ. ಅರಣ್ಯ ಸಂಪತ್ತು ನಾಶಪಡಿಸಿ, ವನ್ಯಜೀವಿಗಳನ್ನು ಕೊಲ್ಲಲು ಮುಂದಾದರೆ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​​ನಲ್ಲಿ ನಡೆದ 71ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಪರಿಸರ, ಅರಣ್ಯ ಸಂರಕ್ಷಕರಿಗೆ ಪದಕಗಳನ್ನು ವಿತರಿಸಿ ಅವರು ಮಾತನಾಡಿದರು. ಯಾರೇ ಅರಣ್ಯ ಮತ್ತು ಪ್ರಾಣಿ ಸಂಪತ್ತನ್ನು ಕೊಲ್ಲಲು ಮುಂದಾದರೆ ಅಂಥವರ …

Read More »

ಹೈಕೋರ್ಟ್​ ಎದುರು ವಕೀಲರಿಂದ ಪ್ರತಿಭಟನೆ

ಬೆಂಗಳೂರು: ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಬಿ ಆರ್​ ಗವಾಯಿ ಅವರ ಮೇಲಿನ ದಾಳಿಯನ್ನು ಖಂಡಿಸಿ ರಾಜ್ಯ ಹೈಕೋರ್ಟ್​ ಮುಂದೆ ವಕೀಲರು ಪ್ರತಿಭಟನೆ ನಡೆಸಿದರು. ದಾಳಿ ಮಾಡಿದ ವಕೀಲ ರಾಕೇಶ್​ ಕಿಶೋರ್ ಅವರನ್ನು ಈ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು. ಇದು ನ್ಯಾಯಾಂಗದ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವ ಗುರಿಯೊಂದಿಗೆ ನಡೆಸಿರುವ ಅತಿ ದೊಡ್ಡ ಪಿತೂರಿ, ಈ ಕುರಿತು ಸಂಪೂರ್ಣ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಭಾಗಿಯಾದ ವಕೀಲರೊಬ್ಬರು ಮಾತನಾಡಿ, ಈ ದಾಳಿಯು ಭಾರತದ …

Read More »

ಬೆಂಗಳೂರಲ್ಲಿ ಡ್ರಗ್ ಪೆಡ್ಲರ್‌ಗಳ ವಿರುದ್ಧ 711 ಪ್ರಕರಣ, ₹81.21 ಕೋಟಿ‌ ಮೌಲ್ಯದ ಮಾದಕ ವಸ್ತು ಜಪ್ತಿ

ಬೆಂಗಳೂರು: ಮಾದಕ ದಂಧೆಕೋರರ ವಿರುದ್ಧದ ಸಮರವನ್ನು ಮತ್ತಷ್ಟು ಚುರುಗೊಳಿಸಿರುವ ಬೆಂಗಳೂರು ನಗರ ಪೊಲೀಸರು ಪ್ರಸಕ್ತ ವರ್ಷ 81.21 ಕೋಟಿ ರೂಪಾಯಿ ಮೌಲ್ಯದ ವಿವಿಧ ಮಾದಕ‌ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. 2025ರ ಅಕ್ಟೋಬರ್ 8ರ ವರೆಗಿನ ಅಂಕಿಅಂಶಗಳ ಪ್ರಕಾರ ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದವರ ವಿರುದ್ಧ 711 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, 1,013 ಭಾರತೀಯ ಹಾಗೂ 35 ವಿದೇಶಿ ಮೂಲದ ಆರೋಪಿಗಳ ಸಹಿತ 1,048 ಜನರನ್ನು ಬಂಧಿಸಲಾಗಿದೆ. ಬಂಧಿತರಿಂದ ಒಟ್ಟೂ 1483.30 ಕೆ.ಜಿ ತೂಕದ …

Read More »

ಭತ್ತದ ಕಟಾವಿಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ದಾವಣಗೆರೆಯಲ್ಲಿ ಖರೀದಿ ಕೇಂದ್ರ ಬಂದ್

ದಾವಣಗೆರೆ: ಭತ್ತದ ಕಟಾವಿಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ ಇದೇ ಸಮಯಕ್ಕೆ ದಾವಣಗೆರೆಗೆಯಲ್ಲಿ ಭತ್ತದ ಖರೀದಿ ಕೇಂದ್ರ ಬಂದ್​​​​ ಆಗಿದ್ದು, ಹೆಕ್ಟೇರ್​ಗಟ್ಟಲೇ ಬೆಳೆದ ಭತ್ತದ ದರ ಕುಸಿಯುವ ಆತಂಕದಲ್ಲಿ ಅನ್ನದಾತರಿದ್ದಾರೆ. ಭತ್ತದ ಕಣಜ ದಾವಣಗೆರೆ, ಖರೀದಿ ಕೇಂದ್ರ ಬೇಕೇ ಬೇಕು: ಭತ್ತವನ್ನು ಮಧ್ಯ ಕರ್ನಾಟಕದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಕೊಪ್ಪಳದ ಗಂಗಾವತಿ ಬಿಟ್ಟರೆ ದಾವಣಗೆರೆಯಲ್ಲಿ ಭತ್ತವನ್ನು ಕಾಂಪಿಟೇಶನ್​​ ಮೇಲೆ ಬೆಳೆಯುತ್ತಾರೆ. ಭದ್ರಾ, ತುಂಗಾಭದ್ರಾ ಜಲಾಶಯ ತುಂಬಿದರೆ ಕರ್ನಾಟಕದಲ್ಲಿ ಅಕ್ಕಿಗೇನು ಕೊರತೆ ಇಲ್ಲ ಅನ್ನೋ …

Read More »

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಬೈಲಹೊಂಗಲ ಕ್ಷೇತ್ರದಿಂದ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಕಣಕ್ಕೆ

ಬೆಳಗಾವಿ: ತೀವ್ರ ಕುತೂಹಲ ಮೂಡಿಸಿರುವ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬೈಲಹೊಂಗಲ ತಾಲೂಕಿನಿಂದ ಇದೇ ಮೊದಲ ಬಾರಿಗೆ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ನಾಮಪತ್ರ ಸಲ್ಲಿಸಿದ್ದಾರೆ. ಇವರ ಸ್ಪರ್ಧೆಯಿಂದ ಬೈಲಹೊಂಗಲದಲ್ಲಿ ಚುನಾವಣಾ ಕಣ ರಂಗೇರಿದೆ. ಬೆಳಗಾವಿಯ ಡಿಸಿಸಿ ಬ್ಯಾಂಕಿಗೆ‌ ತಮ್ಮ ಆಪ್ತರೊಂದಿಗೆ ಆಗಮಿಸಿದ ಡಾ. ವಿಶ್ವನಾಥ ಪಾಟೀಲ ನಾಮಪತ್ರ ಸಲ್ಲಿಸಿದರು. ಈ ವೇಳೆ ಮುಖಂಡರಾದ ಪರ್ವತಗೌಡ ಪಾಟೀಲ, ಆನಂದ ಮೂಗಿ, ಬಾಳನಗೌಡ ಪಾಟೀಲ,‌ ಚನ್ನಪ್ಪ ಹೊಳೆಪ್ಪನವರ, ಬಾಬುರಾವ ಬೋಳಶೆಟ್ಟಿ ಸೇರಿ …

Read More »