Breaking News

Yearly Archives: 2024

ಅಂಗನವಾಡಿ ಮಕ್ಕಳಿಗೆ ಸಿಹಿ ಸುದ್ದಿ: ಇನ್ನು ಹೊಸ ತಿಂಡಿ, ಸಿರಿಧಾನ್ಯ ಲಾಡು

ಬೆಂಗಳೂರು: ಅಂಗನವಾಡಿಗಳಲ್ಲಿ ಮಕ್ಕಳಿಗೆ ನೀಡುತ್ತಿದ್ದ ಮೆನುವಿನಲ್ಲಿ ಬದಲಾವಣೆ ಮಾಡಲಾಗಿದೆ. ಅಪೌಷ್ಟಿಕತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದ್ದು, ಹೆಚ್ಚುವರಿ ಗೋಧಿ, ಸಿರಿಧಾನ್ಯ ಲಾಡು, ಹೊಸ ತಿಂಡಿ ನೀಡಲಾಗುವುದು. ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಕಳೆದ ವರ್ಷವೇ ಮೆನು ಬದಲಾವಣೆ ಮಾಡಿ ಪೌಷ್ಟಿಕ ಆಹಾರ ನೀಡುವಂತೆ ಹೈಕೋರ್ಟ್ ನೀಡಿದ ಆದೇಶ ಎತ್ತಿ ಹಿಡಿದಿತ್ತು. ಐಸಿಡಿಎಸ್ ಯೋಜನೆಯಡಿ ಅಂಗನವಾಡಿ ಮಕ್ಕಳಿಗೆ ಹೊಸ ಮೆನು ನೀಡಲಾಗುತ್ತಿದೆ. ಅನ್ನ ಸಾಂಬಾರ್, ಅನ್ನ ಕಿಚಿಡಿ, ಉಪ್ಪಿಟ್ಟು ನೀಡುತ್ತಿದ್ದು, …

Read More »

8 ವಾರಗಳಲ್ಲಿ ಡಿಸಿಸಿ ಬ್ಯಾಂಕ್ ಗಳ ಚುನಾವಣೆ ನಡೆಸಲು ಹೈಕೋರ್ಟ್ ಗಡುವು

ಬೆಂಗಳೂರು: ಚುನಾವಣೆಗೆ ಬಾಕಿ ಇರುವ ಡಿಸಿಸಿ ಬ್ಯಾಂಕ್ ಗಳಿಗೆ 8 ವಾರಗಳಲ್ಲಿ ಚುನಾವಣೆ ನಡೆಸುವಂತೆ ಸಹಕಾರ ಚುನಾವಣಾ ಪ್ರಾಧಿಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಚುನಾವಣೆ ಬಾಕಿ ಇರುವ ಡಿಸಿಸಿ ಬ್ಯಾಂಕ್ ಗಳನ್ನು ಆಡಳಿತಾಧಿಕಾರಿ ವಹಿಸಿಕೊಳ್ಳಬೇಕು. ಚುನಾವಣೆ ವಿಳಂಬ ಮಾಡಬಾರದು. 8 ವಾರಗಳಲ್ಲಿ ಚುನಾವಣೆ ನಡೆಸಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗಿಯ ಪೀಠ ಆದೇಶ ನೀಡಿದೆ. ಅರ್ಹರು, ಅನರ್ಹರ ಪಟ್ಟಿಯಲ್ಲಿ …

Read More »

ಜಗತ್ತಿನಲ್ಲಿರುವುದು ಒಂದೇ ಧರ್ಮ, ಅದು ಸನಾತನ : ಯುಪಿ ಸಿಎಂ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಸನಾತನ ಧರ್ಮದ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಜಗತ್ತಿನಲ್ಲಿ ಒಂದೇ ಧರ್ಮವಿದೆ ಮತ್ತು ಅದು ಸನಾತನ ಧರ್ಮ ಎಂದು ಅವರು ಹೇಳಿದರು. ರಾಜಸ್ಥಾನದ ಜೋಧಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಒಂದೇ ಧರ್ಮವಿದೆ ಮತ್ತು ಅದು ಸನಾತನ ಧರ್ಮ. ಉಳಿದವು ಪಂಥಗಳು ಮತ್ತು ಪಂಥಗಳಾಗಿರಬಹುದು. ಪ್ರತಿಯೊಂದು ದೇಶ, ಸಮಯ ಮತ್ತು ಪರಿಸ್ಥಿತಿಯಲ್ಲಿ, ನಿಲ್ಲದೆ, ಚಂಚಲರಾಗದೆ ಮತ್ತು ತಲೆಬಾಗದೆ ಉಳಿಸಿಕೊಳ್ಳುವುದು ಶಾಶ್ವತವಾಗಿದೆ …

Read More »

ಮೂರನೇ ಬಾರಿ ಇಡಿ ವಿಚಾರಣೆ ತಪ್ಪಿಸಿಕೊಂಡ ಸಿಎಂ ಕೇಜ್ರಿವಾಲ್‌..!

ದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯ(Delhi) ಮದ್ಯ ಹಗರಣ (Liquor scam)ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ(ED) ವಿಚಾರಣೆಗೆ ಸಿಎಂ ಅರವಿಂದ ಕೇಜ್ರಿವಾಲ್‌ ಮೂರನೇ ಬಾರಿ ಗೈರಾಗಿದ್ದಾರೆ. ಅಬಕಾರಿ ನೀತಿ ಪ್ರಕರಣ ಸಂಬಂಧ 2023ರ ಡಿಸೆಂಬರ್ 22ರಂದು ಇಡಿ ವಿಚಾರಣೆಗೆ ಹಾಜರಾಗುವಂತೆ ಮೂರನೇ ಬಾರಿ ಸಮನ್ಸ್‌ ಜಾರಿ ಮಾಡಿತ್ತು. ಆದರೆ ಇಂದೂ (ಜ.3) ಕೂಡ ವಿಚಾರಣೆಗೆ ಗೈರಾಗಿದ್ದಾರೆ.     ಈ ಬಗ್ಗೆ ಆಮ್‌ ಆದ್ಮಿ ಪಕ್ಷ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು …

Read More »

ಮೊಬೈಲ್‌ ಬ್ಲಾಸ್ಟ್‌ (Mobile Blast) ಆಗಿ ಯುವಕನ ತೊಡೆಗೆ ಗಾಯ

ಬೆಂಗಳೂರು: ಮೊಬೈಲ್‌ ಬ್ಲಾಸ್ಟ್‌ (Mobile Blast) ಆಗಿ ಯುವಕನ ತೊಡೆಗೆ ಗಾಯವಾದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಬೆಂಗಳೂರಿನ ವೈಟ್‌ ಫಿಲ್ಡ್‌ ನಿವಾಸಿ ಪ್ರಸಾದ್‌ (24) ಗಾಯಗೊಂಡ ಯುವಕ. ಈತ ಅಕ್ಟೋಬರ್ ತಿಂಗಳಲ್ಲಿ ಒನ್​ ಪ್ಲಸ್​(1+) ಕಂಪನಿಯ ಮೊಬೈಲ್ ಖರೀದಿಸಿದ್ದ. ಇಂದು ಸ್ಕೂಟರ್​ನಲ್ಲಿ ತೆರಳುತ್ತಿದ್ದ ವೇಳೆ ತನ್ನ ಜೇಬಿನಲ್ಲಿ ಇಟ್ಟುಕೊಂಡಿದ್ದ ಮೊಬೈಲ್​ ಏಕಾಏಕಿ ಬ್ಲಾಸ್ಟ್ ಆಗಿದೆ. ಪರಿಣಾಮ ಆತನ ತೊಡೆಗೆ ಗಂಭೀರ ಗಾಯವಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಮೊಬೈಲ್ ಸೆಂಟರ್​ಗೆ ಹೋದರೆ …

Read More »

ST CERTIFICATE: ಗೊಂಡ, ರಾಜಗೊಂಡ, ಕಾಡು ಕುರುಬ ಜನಾಂಗದವರಿಗೆ ಎಸ್ಟಿ ಪ್ರಮಾಣ ಪತ್ರ

ಬೆಂಗಳೂರು: ಕಲಬುರ್ಗಿ (kalburgi), ಬೀದರ್ (bidar) ಮತ್ತು ಯಾದಗಿರಿ (yadgiri) ಜಿಲ್ಲೆಯ ಗೊಂಡ, ರಾಜಗೊಂಡ, ಕಾಡುಕುರುಬ ಹಾಗೂ ಕೊಡಗು (kodagu) ಜಿಲ್ಲೆಯ ಕುರುಬ ಜನಾಂಗದವರಿಗೆ ಪರಿಶಿಷ್ಟ ಪಂಗಡದ (ST) ಜಾತಿ ಪ್ರಮಾಣ ಪತ್ರ (Caste certificate) ಮತ್ತು ಸಿಂಧುತ್ವ ಪ್ರಮಾಣಪತ್ರ ವಿತರಣೆಗೆ ರಾಜ್ಯ ಸರ್ಕಾರ ಆದೇಶ ನೀಡಿದೆ.   ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ಕಳೆದ ಆಗಸ್ಟ್ ತಿಂಗಳಲ್ಲಿ ಮುಖ್ಯಮಂತ್ರಿ …

Read More »

ಕರ್ನಾಟಕ ರಾಜಕಾರಣಕ್ಕೆ ಗುಡ್‌ ಬೈ ಹೇಳಿದ ಶ್ರೀರಾಮುಲು ಸೋದರಿ!

ಬಳ್ಳಾರಿ : ಬಿಜೆಪಿ (BJP) ತೊರೆದು ವೈಎಸ್‌ಆರ್‌ (YSRP) ಕಾಂಗ್ರೆಸ್‌ ಪಕ್ಷ ಸೇರಿರುವ ಮಾಜಿ ಸಂಸದೆ ಜೆ. ಶಾಂತಾ (J Shanta) ಕರ್ನಾಟಕ ರಾಜಕಾರಣಕ್ಕೆ ಗುಡ್‌ ಬೈ ಹೇಳಿದ್ದಾರೆ. ಮಾಜಿ ಸಚಿವ ಶ್ರೀರಾಮುಲು (Sriramulu) ಸೋದರಿಯಾಗಿರುವ ಶಾಂತಾ, ಆಂಧ್ರಪ್ರದೇಶದ (Andhrapradesh) ಸಿಎಂ ಜಗಮೋಹನ್‌ ರೆಡ್ಡಿ (CM Jagamohan reddy) ಸಮ್ಮುಖದಲ್ಲಿ ವೈಎಸ್‌ಆರ್‌ ಪಾರ್ಟಿ ಸೇರ್ಪಡೆಯಾಗಿದ್ದಾರೆ.   ಲೋಕಸಭಾ ಚುನಾವಣೆಯಲ್ಲಿ ಹಿಂದೂಪುರ ಕ್ಷೇತ್ರದಿಂದ ಶಾಂತಾ ಅವರಿಗೆ ವೈಎಸ್‌ಆರ್‌ ಟಿಕೆಟ್‌ ದೊರೆಯಲಿದೆ ಎನ್ನಲಾಗಿದೆ. …

Read More »

ಕರ ಸೇವಕರನ್ನು ಹುಡುಕಿ ಬಂಧನ ಮಾಡಿದ್ದು ನ್ಯಾಯವೇ? ಅಶೋಕ್ ಪ್ರಶ್ನೆ

ಧಾರವಾಡ: ಕರ ಸೇವಕರ ಮೇಲಿನ ಕೇಸ್ ರೀ ಓಪನ್ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ. ಅಲ್ಲದೇ ರಾಮ ಭಕ್ತರನ್ನು ಬಂಧಿಸುವ ಹುನ್ನಾರವನ್ನು ಕಾಂಗ್ರೆಸ್‌ ಮಾಡುತ್ತಿದೆ ಎಂದು ಆರ್ ಅಶೋಕ್‌(R Ashoka) ಆರೋಪಿಸಿದ್ದಾರೆ. ಕರಸೇವಕ ಶ್ರೀಕಾಂತ್ ಪೂಜಾರಿಯನ್ನು(Srikanth Pujari) ಬಂಧನ ವಿರೋಧಿಸಿ ಬಿಜೆಪಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಹುಬ್ಬಳ್ಳಿಯ(Hubballi) ಶಹರ ಠಾಣೆ ಎದುರು ಪ್ರತಿಪಕ್ಷ ನಾಯಕ ಆರ್‍‌.ಅಶೋಕ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಇದೇ ಸಂದರ್ಭದಲ್ಲಿ …

Read More »

ಲೂಟಿ ಮಾಡಿರುವವರು ರಾಮರಾಜ್ಯದ ಬಗ್ಗೆ ಮಾತಾಡುತ್ತಾರೆ: ಪಾಟೀಲ್

ವಿಜಯಪುರ: ಬಜೆಟ್ ಗಿಂತ ಹೆಚ್ಚು ಹಣ ಖರ್ಚು ಮಾಡಿ ರಾಜ್ಯವನ್ನು ಲೂಟಿ ಮಾಡಿರುವವರು ಈಗ ರಾಮ (ram) ರಾಜ್ಯದ ಬಗ್ಗೆ ಮಾತನಾಡುತ್ತಾರೆ. ಇಂತವರಿಂದ ನಾವು ಕಲಿಯೋದು ಏನಿದೆ ಎಂದು ಕೈಗಾರಿಕ ಸಚಿವ ಎಂ. ಬಿ. ಪಾಟೀಲ್ (m.b. patil) ಹೇಳಿದರು. ವಿಜಯಪುರದಲ್ಲಿ (vijaypura) ಕೆಡಿಪಿ ಸಭೆಗೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಲ್ವಾಮಾ (pulwama), ಬಾಲಾಕೋಟ್ (balkot) ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದ ಬಿಜೆಪಿ (bjp) ಈಗ ರಾಮನ ಹೆಸರನ್ನು ಬಳಸಿಕೊಂಡು …

Read More »

ರಾಮ ಮಂದಿರ ಲೋಕಾರ್ಪಣೆ- ಸಿದ್ದಗಂಗಾ ಶ್ರೀಗಳಿಗೆ ಬಂತು ಆಹ್ವಾನ

ತುಮಕೂರು : ಇದೇ ಜನೆವರಿ 22 ರಂದು ಅಯೋಧ್ಯೆಯಲ್ಲಿ(Ayodhye) ನಡೆಯಲಿರುವ ರಾಮಲಲ್ಲಾ ಮೂರ್ತಿ(Ramalalla) ಪ್ರಾಣಪ್ರತಿಷ್ಟಾಪನೆ ಮತ್ತು ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮಿಗಳಿಗೆ ಆಮಂತ್ರಣ ತಲುಪಿದೆ. ಶ್ರೀರಾಮ ಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಂದ ಅಧಿಕೃತ ಆಹ್ವಾನ ಬಂದಿದ್ದು ಈ ಬಗ್ಗೆ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ಮಾಹಿತಿ ನೀಡಿದ್ದಾರೆ. ಜನೆವರಿ 20 ರಂದೇ ಅಯೋಧ್ಯೆ ತಲುಪುವಂತೆ ರಾಮಮಂದಿರ ಟ್ರಸ್ಟ್‌ನಿಂದ …

Read More »