ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..! ರಾಮದುರ್ಗ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ರಾಮದುರ್ಗ ತಾಲ್ಲೂಕಿನ ಉಜ್ಜಿನಕೊಪ್ಪ ಗ್ರಾಮದ ಶ್ರೀ ಹನುಮಂತ ದೇವರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. …
Read More »Monthly Archives: ಮಾರ್ಚ್ 2024
ಬಸ್ನಿಂದ ಆಯತಪ್ಪಿ ಬಿದ್ದು ಮೃತಪಟ್ಟ ನಿರ್ವಾಹಕ
ಮೈಸೂರು, ಮಾರ್ಚ್ 09: ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನಿಂದ ಆಯತಪ್ಪಿ ಬಿದ್ದು ನಿರ್ವಾಹಕ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕಿನ ಮಲ್ಲನಮೂಲೆ ಮಠದ ಬಳಿ ನಡೆದಿದೆ. ಚಾಮರಾಜನಗರ (Chamarajanagar) ತಾಲೂಕಿನ ಹಳೇಪುರ ನಿವಾಸಿ ಮಹದೇವಸ್ವಾಮಿ (35) ಮೃತ ನಿರ್ವಾಹಕ. ನಿರ್ವಾಹಕ ಮಹದೇವಸ್ವಾಮಿ ಕೆಎಸ್ಆರ್ಟಿಸಿ ಬಸ್ನ ಫುಟ್ ಬೋರ್ಡ್ನಲ್ಲಿ ನಿಂತಿದ್ದರು. ಈ ವೇಳೆ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಸ್ಥಳಕ್ಕೆ ನಂಜನಗೂಡು ಡಿವೈಎಸ್ಪಿ ರಘು, ಸಂಚಾರಿ ಪೊಲೀಸರು ಭೇಟಿ ನೀಡಿದ್ದಾರೆ. ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯಲ್ಲಿ …
Read More »ನಿಶ್ಚಿತಾರ್ಥದ ವೇಳೆ ಪ್ರಿಯಕರನಿಗೆ ಚಾಕು ಇರಿದ ತಮ್ಮ,
ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಕುಟುಂಬಸ್ಥರ ವಿರೋಧದ ಹಿನ್ನೆಲೆ ಮದುವೆಯಾಗಬೇಕೆಂದು ಪ್ರೇಮಿಗಳು ಮನೆಬಿಟ್ಟು ಹೋಗಿದ್ದರು. ಆದರೂ ಕುಟುಂಬಸ್ಥರು ಇಬ್ಬರನ್ನೂ ಮನವೊಲಿಸಿ ವಾಪಸ್ ಕರೆಸಿದ್ದರು. ನಿನ್ನೆ ಶುಕ್ರವಾರ ಪ್ರೇಮಿಗಳ ಮದುವೆ ನಿಶ್ಚಿತಾರ್ಥವಿತ್ತು. ಯುವತಿಯ ತಮ್ಮನು ನಿನ್ನೆ ರಾತ್ರಿ ಪ್ರೇಮಿಯ ಹೊಟ್ಟೆಗೆ ಚಾಕು ಇರಿದ್ದಾನೆ. ಈ ಘಟನೆಯಿಂದ ಪ್ರೇಮಿಗಳ ನಿಶ್ಚಿತಾರ್ಥ ಕ್ಯಾನ್ಸಲ್ ಆಗಿದೆ. ಪ್ರೇಮಿಯು ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆ ಸೇರಿದ್ದಾನೆ. ಲವರ್ ಗೆ ಚಾಕು ಇರಿತ ಶಾಕ್ ಕುರಿತು ಒಂದು ವರದಿ ಇಲ್ಲಿದೆ. ಸಲ್ಮಾನ್ …
Read More »ನೀರಿನ ಬಿಕ್ಕಟ್ಟು ಎದುರಿಸಲು ಹೇಗಿದೆ ಬೆಂಗಳೂರಿನ ಐಟಿ ಕಂಪನಿಗಳ ಸಿದ್ಧತೆ
ಬೆಂಗಳೂರು, ಮಾರ್ಚ್ 9: ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು (Bengaluru Water Crisis) ತೀವ್ರಗೊಂಡಿದೆ. ಇನ್ನೇನು ಬೇಸಗೆ ಆರಂಭವಾಗುತ್ತಿದ್ದಂತೆಯೇ ಈ ವರ್ಷ ಕುಡಿಯುವ ನೀರಿಗೂ ಹಲವೆಡೆ ಸಮಸ್ಯೆ ಎದುರಾಗಿದೆ. ಈ ಮಧ್ಯೆ, ಅನೇಕ ಐಟಿ ಕಂಪನಿಗಳನ್ನು ಹೊಂದಿರುವ ವೈಟ್ಫೀಲ್ಡ್ (Whitefield) ಪ್ರದೇಶದಲ್ಲಿ ಕೂಡ ನೀರಿನ ಅಭಾವದ ಸುಳಿಯು ದೊರೆತಿದೆ. ನೀರಿನ ಬಿಕ್ಕಟ್ಟು ಎದುರಿಸಲು ಮಾಡಿಕೊಂಡಿರುವ ಸಿದ್ಧತೆ ಬಗ್ಗೆ, ಬಹುತೇಕ ಐಟಿ ಸಂಸ್ಥೆಗಳನ್ನೇ ಒಳಗೊಂಡಿರುವ ವೈಟ್ಫೀಲ್ಡ್ ಏರಿಯಾ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅಸೋಸಿಯೇಷನ್ (WACIA) …
Read More »ಜೈ ಮಹಾರಾಷ್ಟ್ರ ಎಂದವನಿಗೆ ಬುದ್ಧಿವಾದ ಹೇಳಿದ್ದಕ್ಕೆ ಉದ್ಯಮಿ ಮೇಲೆ ಎಂಇಎಸ್ ಪುಂಡರಿಂದ ಹಲ್ಲೆ?
ಬೆಳಗಾವಿ ತಾಲೂಕಿನ ಆನಂದವಾಡಿ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಈ ವೇಳೆ ಮೈಕ್ನಲ್ಲಿ ಜೈ ಶಿವಾಜಿ, ಜೈ ಮಹಾರಾಷ್ಟ್ರಎಂದು ಕುಸ್ತಿಪಟು ಘೋಷಣೆ ಕೂಗಿದನು. ಕೂಡಲೆ ಉದ್ಯಮಿ ಶ್ರೀಕಾಂತ್ ಕುಸ್ತಿಪಟುವಿನ ಕೈಯಿಂದ ಮೈಕ್ ಕಿತ್ತುಕೊಂಡಿದ್ದಾರೆ. ಬೆಳಗಾವಿ, ಮಾರ್ಚ್ 09: ಬೆಳಗಾವಿ (Belagavi) ತಾಲೂಕಿನ ಆನಂದವಾಡಿ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಈ ವೇಳೆ ಮೈಕ್ನಲ್ಲಿ ಜೈ ಶಿವಾಜಿ, ಜೈ ಮಹಾರಾಷ್ಟ್ರ (Maharashtra) ಎಂದು ಕುಸ್ತಿಪಟು ಘೋಷಣೆ ಕೂಗಿದನು. ಉದ್ಯಮಿ ಶ್ರೀಕಾಂತ್ …
Read More »ಲವರ್ ಕೈಕೊಟ್ಟಿದ್ದಕ್ಕೆ ಮಾರಾಕಾಸ್ತ್ರದಿಂದ ಚುಚ್ಚಿಕೊಂಡು ಜೀವ ಬಿಟ್ಟ ಪ್ರಿಯಕರ
ಬೆಂಗಳೂರು, ಮಾ.08: ಪ್ರಿಯತಮೆ ಬಿಟ್ಟು ಹೋಗಿದ್ದಕ್ಕೆ ನೊಂದ ಪ್ರಿಯಕರನೊಬ್ಬ ಚೂಪಾದ ಆಯುಧದಿಂದ ಹೊಟ್ಟೆಗೆ ತಿವಿದುಕೊಂಡು ಸಾವನ್ನಪ್ಪಿರುವ ಬೆಂಗಳೂರು ನಗರದ ನಡೆದಿದೆ. ದಾವಣಗೆರೆ ಮೂಲದ ಚೇತನ್ (21) ಮೃತ ದುರ್ದೈವಿ. ಇಬ್ಬರು ಕಾಲೇಜಿನಲ್ಲಿ ಓದುವ ವೇಳೆ ಪರಿಚಯವಾಗಿ ಲವ್ ಆಗಿತ್ತು. ಎರಡು ವರ್ಷದಿಂದ ಚೇತನ್ ಯುವತಿಯನ್ನು ಪ್ರೀತಿಸುತ್ತಿದ್ದ. ಈ ವಿಷಯ ಹುಡುಗಿ ಕಡೆಯವರಿಗೆ ಗೊತ್ತಾಗಿತ್ತು. ಈ ಹಿನ್ನಲೆ ಹುಡುಗಿಯ ಚಿಕ್ಕಪ್ಪ ಚೇತನ್ ಜೊತೆ ಮದುವೆಗೆ ಒಪ್ಪಿರಲಿಲ್ಲ. ಬೇರೆ ಹುಡುಗಿ ಮದುವೆಯಾಗುವಂತೆ ಹೇಳಿದ …
Read More »ರಾಮೇಶ್ವರಂ ಕೆಫೆ ಬಾಂಬರ್ ಬಳ್ಳಾರಿಯಲ್ಲಿ ಓಡಾಟ
ಬಳ್ಳಾರಿ, ಮಾರ್ಚ್ 08: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ (Rameshwaram Cafe) ಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಹೊಸ ಬಸ್ ನಿಲ್ದಾಣದಲ್ಲೇ ಮಾರ್ಚ 1 ರ ರಾತ್ರಿ 9 ಗಂಟೆ ಸುಮಾರಿಗೆ ಶಂಕಿತ ಓಡಾಡಿದ್ದಾನೆ. ಬಸ್ ನಿಲ್ದಾಣದಲ್ಲಿ ಕೆಲ ಕಾಲ ಓಡಾಡಿರುವ ಶಂಕಿತ ಬಳಿಕ ಆಟೋ ಹತ್ತಿ ಹೋಗಿದ್ದಾನೆ. ಹೀಗಾಗಿ ಆಟೋ ಚಾಲಕನನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಳ್ಳಾರಿ ನಗರದ ರಾಯಲ್ ಸರ್ಕಲ್ ಮುಖಾಂತರ ಕೌಲ ಬಜಾರ್ಗೆ ಬಾಂಬರ್ …
Read More »ಚುನಾವಣೆ ಬರುತ್ತಿದ್ದಂತೆ ಮತ್ತೆ ಪ್ರತ್ಯಕ್ಷರಾದ ಪ್ರಕಾಶ್ ರೈ
ಬಹುಭಾಷಾ ನಟ ಪ್ರಕಾಶ್ ರಾಜ್ ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಾತ್ಮಕ ಹೇಳಿಕೆಯಿಂದಲೇ ಹೆಚ್ಚು ಸುದ್ದಿಯಲ್ಲಿ ಇರುತ್ತಾರೆ. ಕೇಂದ್ರ ಸರ್ಕಾರದ ವಿರುದ್ಧ ಆಗಾಗ ಸಿಡಿದೇಳು ಪ್ರಕಾಶ್ ರಾಜ್, ಪ್ರಧಾನಿ ನರೇಂದ್ರ ಮೋದಿ ಚಂದ್ರಯಾನ’ ಕುರಿತು ವಿವಾದಾತ್ಮಕ ಟ್ವೀಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದ ಪ್ರಕಾಶ್ ಆಗಾಗ ಒಂದಲ್ಲ ಒಂದು ವಿಚಾರದ ಬಗ್ಗೆ ಕಮೆಂಟ್ ಮಾಡುತ್ತಲೇ ಇರುತ್ತಾನೆ. ಇದೀಗ ಮತ್ತೊಮ್ಮೆ ಪ್ರಧಾನಿ ಮೋದಿಯವರನ್ನು ಟಾರ್ಗೆಟ್ ಮಾಡಿದ್ದಾರೆ. ಪ್ರಕಾಶ್ ರಾಜ್ ‘ಮೇರಿ ಮಾತಿ ಮೇರಾ ದೇಶ್’ ಅಭಿಯಾನಕ್ಕೆ …
Read More »ಪಾರ್ಕ್ ನಲ್ಲಿ ಕಾಂ,ಡೋಮ್ ಕಾಟ, ಕಾಲೇಜು ವಿಧ್ಯಾರ್ಥಿಗಳ ಹೊಸ ಕ್ರೀಡೆ
ಮಕ್ಕಳನ್ನು ಶಾಲಾ-ಕಾಲೇಜಿಗೆ ಕಳುಹಿಸುವ ಪಾಲಕರೊಮ್ಮೆ ಈ ಸ್ಟೋರಿ ಓದಲೇ ಬೇಕು. ಪ್ರತಿಯೊಬ್ಬ ಪೋಷಕರು ಕಂಗಾಲಾಗುವಂತಹ ವಿಷಯವಿದು. ಹೌದು ಮಕ್ಕಳನ್ನು ಓದಲು ಕಳುಹಿಸಿದರೆ ಸಾಲದು, ಅವರ ಮೇಲೆ ಒಂದು ನಿಗಾ ಇಟ್ಟಿರಬೇಕು. ಇಲ್ಲವಾದಲ್ಲಿ ದಾರಿ ತಪ್ಪುವ ಸಾಧ್ಯತೆ ಇರುತ್ತದೆ.ಇದಕ್ಕೆ ತಾಜಾ ನಿದರ್ಶನವೇ ಈ ಒಂದು ಘಟನೆ. ರಾಯಚೂರಿನ ಈ ಸ್ಥಳ ಅಪ್ರಾಪ್ತ ಪ್ರೇಮಿಗಳ ಹಾಟ್ಸ್ಪಾಟ್ ಆಗಿ ಮಾರ್ಪಟ್ಟಿದೆ. ಕಲಾವಿದರ ಬಾಳಿಗೆ ಬೆಳಕಾಗಬೇಕಿದ್ದ ರಂಗಮಂದಿರವೀಗ ಪ್ರೇಮ ಮಂದಿರವಾಗಿದೆ. ಅಪ್ರಾಪ್ತರ ಲವ್ ಅಡ್ಡ ಆಗಿ …
Read More »ಹಬ್ಬಗಳು ಬಂದ್ರೆ ದೇವಸ್ಥಾನಗಳಿಗೆ ಬಿಲ್ವಪತ್ರೆ-ಹೂವು ಬರ್ತಾವೆ, ಆದ್ರೆ ನನಗೆ ಪೊಲೀಸ್ ನೋಟಿಸ್ ಬರುತ್ತೆ: ಸಿದ್ದಲಿಂಗ ಸ್ವಾಮೀಜಿ
ಕಲಬುರಗಿ, ಮಾರ್ಚ್ 08: ಶಿವರಾತ್ರಿ ಸೇರಿದಂತೆ ಇನ್ನಿತರ ಹಬ್ಬಗಳು ಬಂದರೆ ದೇವಸ್ಥಾನಗಳಿಗೆ ಬಿಲ್ವಪತ್ರೆ ಮತ್ತು ಹೂವು ಬರುತ್ತವೆ. ಆದರೆ ನನಗೆ ಪೊಲೀಸರಿಂದ ನೋಟಿಸ್ ಬರುತ್ತದೆ ಎಂದು ಆಂದೋಲದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ. ಜಿಲ್ಲೆಯ ಆಳಂದ ಪಟ್ಟಣದಲ್ಲಿ ಮಾತನಾಡಿದ ಅವರು, ಹಿಂದೂತ್ವದ ಸೂನಾಮಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಎದ್ದಿದೆ. ಹಿಂದೂ ಧರ್ಮದ ಉಳಿವಿಗಾಗಿ ನಾವು ಹೋರಾಟ ಆರಂಭಿಸಿದ್ದೇವೆ. ಹಿಂದೂತ್ವದ ಗೆಲುವು ಬಿಜೆಪಿ ಹಿರಿಯ ನಾಯಕರಿಗೆ ಅರ್ಪಿಸುತ್ತೇವೆ. 2022 ರಲ್ಲಿ ಆಳಂದದಲ್ಲಿ ದೊಡ್ಡಮಟ್ಟದ …
Read More »