ಕಲಬುರ್ಗಿ: ಮಹಾನಗರ ಪಾಲಿಕೆ ಆಯುಕ್ತರೇ ಲಂಚಕ್ಕಾಗಿ ಕೈಯೊಡ್ದಿ ಎಸಿಬಿ ಬಲೆಗೆ ಬಿದ್ದ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. 15 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಕಲಬುರ್ಗಿ ಮಹಾನಗರ ಪಾಲಿಕೆ ಆಯುಕ್ತ ಶಂಕ್ರಣ್ಣ ವಣಿಕ್ಯಾಳ ಅವರನ್ನು ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ ಕೋವಿಡ್ ಸುರಕ್ಷತಾ ಚಕ್ರದ ಹೆಲ್ಪ್ ಲೈನ್ ನಿರ್ದೇಶಕ ಶರಣಬಸಪ್ಪ ಬಳಿ ಪಾಲಿಕೆ ಆಯುಕ್ತ ಶಂಕ್ರಣ್ಣ 7 ಲಕ್ಷದ 50 ಸಾವಿರ ಬಿಲ್ ಮಾಡಲು ಶೇ.2ರಷ್ಟು ಲಂಚಕ್ಕೆ ಬೇಡಿಕೆ …
Read More »Daily Archives: ಜೂನ್ 2, 2022
ಮೋದಿ ಅಧಿಕಾರಕ್ಕೆ ಬಂದ್ಮೇಲೆ ಪ್ರತಿಯೊಬ್ಬರ ಮೇಲೆ 1.70 ಲಕ್ಷ ಸಾಲ ಹೊರಿಸಿದ್ದಾರೆ – ಸಿದ್ಧರಾಮಯ್ಯ
ಬೆಂಗಳೂರು: ರಾಜ್ಯ ಮತ್ತು ದೇಶ ಸಾಲದ ಸುಳಿಯಲ್ಲಿ ಸಿಲುಕಿವೆ. 2014-15ರಲ್ಲಿ ದೇಶದ ಮೇಲಿನ ಸಾಲ 53 ಲಕ್ಷದ 11 ಸಾವಿರ ಕೋಟಿ ಇತ್ತು, ಈಗ ಮಾರ್ಚ್ ಕೊನೆವರೆಗೆ ಸಾಲ 155 ಲಕ್ಷ ಕೋಟಿಯಾಗಿದೆ. ಮೋದಿ ಅಧಿಕಾರಕ್ಕೆ ( PM Modi ) ಬಂದು 8 ವರ್ಷದಲ್ಲಿ 100 ಲಕ್ಷಕ್ಕೂ ಹೆಚ್ಚು ಕೋಟಿ ಸಾಲ ಮಾಡಿದ್ದಾರೆ. ಪ್ರತಿಯೋಬ್ಬರ ಮೇಲೆ 1 ಲಕ್ಷದ 70 ಸಾವಿರ ಸಾಲ ಇದೆ ಎಂಬುದಾಗಿ ವಿಪಕ್ಷ ನಾಯಕ …
Read More »2023 ರ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಪಕ್ಷದ ಸಂಘಟನೆ ಹಾಗೂ ಕಾರ್ಯತಂತ್ರ
2023 ರ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಪಕ್ಷದ ಸಂಘಟನೆ ಹಾಗೂ ಕಾರ್ಯತಂತ್ರಗಳನ್ನು ರೂಪಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ನವಸಂಕಲ್ಪ ಶಿಬಿರದ ಮೊದಲನೇ ದಿನ ಕಾಂಗ್ರೆಸ್ ಮುಖಂಡರ ಜೊತೆ ಭಾಗಿಯಾದೆ. ಈ ನವಸಂಕಲ್ಪ ಶಿಬಿರ ಪಕ್ಷಕ್ಕೆ ಮತ್ತಷ್ಟು ಶಕ್ತಿಯನ್ನು ತುಂಬಲಿದ್ದು, ಇದು ಬರುವ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ನಾಂದಿಯಾಗಲಿದೆ. ಬರುವ ಚುನಾವಣೆಯಯನ್ನು ನಾವೆಲ್ಲರೂ ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಕೂಡಿಕೊಂಡು ಕೆಲಸ ಮಾಡಬೇಕಿದೆ. ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವದ ಅಭಿಯಾನದಲ್ಲಿ ನಮ್ಮ ಎಲ್ಲ …
Read More »ಜೂನ್ 8 ರಿಂದ ಬಿಜೆಪಿಯ ಶಾಸಕರ ಕಚೇರಿ, ಮನೆ ಮುಂದೆ ಧರಣಿ ಸತ್ಯಾಗ್ರಹ: ಪ್ರಮೋದ್ ಮುತಾಲಿಕ್
ಮಸೀದಿ, ದೇವಾಲಯ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಲೌಡ್ಸ್ಪೀಕರ್ ಬಳಕೆ ವಿಚಾರದಲ್ಲಿ ಸರ್ಕಾರಕ್ಕೆ ನೀಡಿದ ಡೆಡ್ ಲೈನ್ ಕೊನೆಯಾಗಿದ್ದು, ಜೂನ್ 8 ರಿಂದ ಬಿಜೆಪಿಯ ಶಾಸಕರ ಕಚೇರಿ, ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಕ್ ನಿರ್ಬಂಧ ಕುರಿತು ರಾಜ್ಯ ಸರ್ಕಾರ ಅಧಿಕೃತವಾಗಿ ಸುತ್ತೋಲೆ ಪ್ರಕಟಿಸಿ. ಮೈಕ್ ಬಳಸಲು ಧಾರ್ಮಿಕ ಕೇಂದ್ರಗಳು ಅನುಮತಿ ಪಡೆಯಬೇಕು. ರಾತ್ರಿ …
Read More »ಅಂಬೇಡ್ಕರ್ ಅವರ ಸ್ಮಾರಕಭವನ ನಿರ್ಮಾಣ ಮಾಡುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನಾ ರ್ಯಾಲಿ
ಹುಬ್ಬಳ್ಳಿಯ ಸಿದ್ಧಾರ್ಥ ಕಾಲೋನಿಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸ್ಮಾರಕಭವನ ನಿರ್ಮಾಣ ಮಾಡುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿತು. ನಗರದ ಅಂಬೇಡ್ಕರ್ ಸರ್ಕಲ್ ನಿಂದ ಆರಂಭಗೊಂಡ ಪ್ರತಿಭಟನೆಯ ರ್ಯಾಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯವರೆಗೆ ನಡೆಸಲಾಯಿತು. ಬಳಿಕ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು ಕೂಡಲೇ ಸ್ಮಾರಕ ಭವನ ನಿರ್ಮಾಣ ಮಾಡುವಂತೆ ಆಗ್ರಹಿಸಿದ್ದಾರೆ.
Read More »ಪೋಡಿ, ಭೂಪರಿವರ್ತನೆ, 11ಇ ಸ್ಕೆಚ್, ಹದ್ದುಬಸ್ತ್ ಮತ್ತಿತರ ನಕ್ಷೆ ಆನ್ ಲೈನ್ ನಲ್ಲಿ ಲಭ್ಯ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ
ಬೆಳಗಾವಿ, ಜೂ.3 11E, ಫೋಡಿ, ಭೂ ಪರಿವರ್ತನೆ ಸ್ಕೆಚ್, ಹದ್ದುಬಸ್ತ್ ಮತ್ತು ಇತರ ನಕ್ಷೆಗಳ ಮುದ್ರಣ ಮತ್ತು ನಾಗರಿಕರ ಅರ್ಜಿಗಳ ಸ್ಥಿತಿಯ ಮಾಹಿತಿಯನ್ನು ನಾಗರಿಕರು ಆನ್ ಲೈನ್( ONLINE )ನಲ್ಲಿ rdservices.karnataka.gov.in ಮುಖಾಂತರ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ಮೇಲ್ಕಂಡ ಸೇವೆಗಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ, ನಾಗರಿಕರು ಅರ್ಜಿಗಳಿಗೆ ಹಣವನ್ನು ಪಾವತಿಸುತ್ತಾರೆ. ಆದ್ದರಿಂದ, ಅವರ ನಕ್ಷೆಯನ್ನು ಅನುಮೋದಿಸಿದ ತಕ್ಷಣ, ಕೆಳಗೆ ನೀಡಲಾದ ವೆಬ್ಸೈಟ್ ಲಿಂಕ್ನಲ್ಲಿ ಅದನ್ನು ಮುದ್ರಿಸಲು …
Read More »ಬೆಳಗಾವಿ ನಗರದಲ್ಲಿ ದಿಂಡಿ ಪಾದಯಾತ್ರೆಗೆ ಭವ್ಯ ಸ್ವಾಗತ:
ಬೇಲೂರ್ ಪಾಯೆ ಧಾರವಾಡದದಿಂದ ನಿನ್ನೆ ಬೆಳಗಾವಿ ನಗರದಕ್ಕೆ ತಲುಪಿತು. ಈ ವೇಳೆ ದಿಂಡಿ ಕಾರ್ಯಕ್ರಮಕ್ಕೆ ಅದ್ಧೂರಿ ಸ್ವಾಗತವನ್ನು ಕೋರಲಾಯಿತು. ನಿನ್ನೆ ಬುಧವಾರ ದಿನಾಂ 1ರಂದು ಬೆಳಗಾವಿಯಲ್ಲಿ ದಿಂಡಿ ಆಗಮಿಸಿತು. ಈ ವೇಳೆ ನ್ಯಯವಾದಿಗಳಾದ ಸದಾಶಿವ ಹಿರೇಮಠರವರ ಕುಟುಂಬದವರು ತಮ್ಮ ನಿವಾಸದಲ್ಲಿ ದಿಂಡಿಯನ್ನು ಸ್ವಾಗತ ಮಾಡಿಕೊಂಡರು. ಈ ವೇಳೆ ಭಜನೆ, ಕೀರ್ತನೆ, ಹಾಗೂ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಈ ವೇಳೆ ಭಕ್ತರಿಗೆ ಮಹಾಪ್ರಸಾದವನ್ನು ವಿತರಣೆ ಮಾಡಲಾಯಿತು. ಈ ವೇಳೆ ಕೀರ್ತನಕಾರರಾದ ದೇವಪ್ಪಾ …
Read More »ಕಾಂಗ್ರೆಸ್ ಪಕ್ಷ.ಬಾಬಾಸಾಹೇಬರು ತೀರಿಕೊಂಡಾಗ ಆರು ಅಡಿ ಜಾಗ ಕೊಟ್ಟಿಲ್ಲ
ನನ್ನ ಚುನಾವಣೆ ಸೇರಿದಂತೆ ಇತರೆ ಚುನಾವಣೆಯ ಸಂಧರ್ಭದಲ್ಲಿ ಅರುಣ ಶಹಾಪೂರ ಅವರು ದೂರ ಉಳಿದಿದ್ದರೂ ಎಂದು ವಿಜಯಪುರದ ಸಂಸದ ರಮೇಶ ಜಿಗಜಿನಗಿಯವರು ಸಹಜವಾಗಿಯೇ ಅಸಮಾಧಾನ ಹೊರಹಾಕಿದರು. ಅವರು ಚಿಕ್ಕೋಡಿ ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆರ್.ಎಸ್.ಎಸ್ ಹಿನ್ನಲೆ ಉಳ್ಳವರು ಪಕ್ಷಕ್ಕೆ ದುಡಿಯೋದು ಸ್ವಲ್ಪ ಕಡಿಮೆನೆ.ಅರುಣ ಶಹಾಪೂರಯವರು ಸಂಘ ಪರಿವಾರದಿಂದ ಬಂದವರು ಈ ಹಿನ್ನಲೆಯಲ್ಲಿ ಪಕ್ಷದಿಂದ ಅವರು ದೂರ ಉಳಿಯುತ್ತಾರೆ..ಪಕ್ಷದಿಂದ ದೂರ ಉಳಿದಿದ್ದೆ ವಿಷಯವನ್ನು ಹೋರತುಪಡಿಸಿದರೆ ಅವರು ವಿಧಾನಪರಿಷತ ಸದಸ್ಯರಾಗಿ …
Read More »ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದ ʻಹಾರ್ದಿಕ್ ಪಟೇಲ್ʼ!
ಗಾಂಧಿನಗರ (ಗುಜರಾತ್): ಕಳೆದ ತಿಂಗಳು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದ ಹಾರ್ದಿಕ್ ಪಟೇಲ್ ಇಂದು ಭಾರತೀಯ ಜನತಾ ಪಕ್ಷ(BJP)ಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಹಾರ್ದಿಕ್ ಪಟೇಲ್ ಗುಜರಾತ್ನಲ್ಲಿ ವಿಧಾನಸಭೆ ಚುನಾವಣೆಗೆ ತಿಂಗಳುಗಳ ಮೊದಲೇ ಇಲ್ಲಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ರಾಜ್ಯ ಮುಖಂಡ ಸಿಆರ್ ಪಾಟೀಲ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಇಂದು ಮುಂಜಾನೆ, ಪಟೇಲ್ ಅವರು ಕೆಲಸ ಮಾಡಲು ಬಿಜೆಪಿಗೆ ಸೇರುತ್ತಿದ್ದೇನೆ ಎಂದು ಹೇಳಿದರು. ‘ಇಂದು ನಾನು ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇನೆ, …
Read More »ಗಂಡ ಹೊಡೆದ ಏಟಿಗೆ ಪ್ರಜ್ಞೆ ತಪ್ಪಿದ ಹೆಂಡತಿ ; ಸತ್ತಳೆಂದು ಆತ್ಮಹತ್ಯೆ ಮಾಡಿಕೊಂಡ ಗಂಡ.!
ಮೂಡಲಗಿ : ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರ (Naganur) ಪಟ್ಟಣದಲ್ಲಿ ತಾನು ಹೊಡೆದ ಹೊಡೆತಕ್ಕೆ ಪತ್ನಿ ಮೃತಪಟ್ಟಿದ್ದಾಳೆ ಎಂದು ಭಾವಿಸಿ ಪತಿಯೂ (husband) ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ. ಆತ್ಮಹತ್ಯೆ (suicide) ಮಾಡಿಕೊಂಡ ಯುವಕನನ್ನು ನಾಗನೂರು ಪಟ್ಟಣದ ಅರಣ್ಯಸಿದ್ದೇಶ್ವರ ತೋಟದ ನಿವಾಸಿ ಮಹಾಂತೇಶ ಸಿದ್ದಪ್ಪ ಗೂಡೆನ್ನವರ ಎಂದು ಗುರುತಿಸಲಾಗಿದೆ. ಕಳೆದ ಎಂಟು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಮಹಾಂತೇಶ, ಬುಧವಾರ ಹೆಂಡತಿಯೊಡನೆ ಜಗಳವಾಡಿದ್ದಾನೆ. …
Read More »
Laxmi News 24×7