ಬೆಳಗಾವಿ: ಬಿಜೆಪಿ ಹಾಗೂ ಜೆಡಿಎಸ್ನ ಪ್ರಭಾವಿ ನಾಯಕರು ಕಾಂಗ್ರೆಸ್ಗೆ ಬರಲು ತುದಿಗಾಲ ಮೇಲೆ ನಿಂತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ನ ಹಲವಾರು ನಾಯಕರು ತಮ್ಮ ಸೇರ್ಪಡೆ ಕುರಿತಂತೆ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿದ್ದಾರೆ. ಆದರೆ ಅವರ ಹೆಸರನ್ನು ಈಗ ಬಹಿರಂಗಪಡಿಸುವುದಿಲ್ಲ ಎಂದರು. ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಪರ ಅಲೆ ಆರಂಭವಾಗಿದೆ. ಜನರು ನಿಧಾನವಾಗಿ ಕಾಂಗ್ರೆಸ್ ಕಡೆ ಮುಖ ಮಾಡುತ್ತಿದ್ದಾರೆ. …
Read More »Monthly Archives: ಜನವರಿ 2022
ಸಿದ್ದರಾಮಯ್ಯ ತರಾಟೆ; ಗೃಹಸಚಿವರನ್ನು ಭೇಟಿಯಾದ ಕೋಟ
ಕೋಟ: ಡಿ.ಜೆ.ಗೆ ಸಂಬಂಧಿಸಿದಂತೆ ಕೋಟ ಬಾರಿಕೆರೆಯ ಚಿಟ್ಟಿಕಟ್ಟೆಯ ಮೆಹಂದಿ ಮನೆಯಲ್ಲಿ ಲಾಠಿ ಚಾರ್ಜ್ ನಡೆಸಿದ ಘಟನೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸರಕಾರ ಮತ್ತು ಸಚಿವ ಕೋಟ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿದ್ದು, ಕೋಟತಟ್ಟುವಿನಲ್ಲಿ ಪೊಲೀಸರಿಂದ ದೌರ್ಜನ್ಯಕ್ಕೆ ಈಡಾಗಿರುವ ಕೊರಗ ಸಮುದಾಯದ ಮೇಲೆ ಪೊಲೀಸರೇ ಪ್ರಕರಣ ದಾಖಲು ಮಾಡಿರುವುದು ನೋಡಿದರೆ ದೌರ್ಜನ್ಯ ಆಕಸ್ಮಿಕ ಅಲ್ಲ, ಯೋಜಿತ ಸಂಚಿನಂತೆ ಕಾಣುತ್ತಿದೆ ಹಾಗೂ ಕೊರಗ ಸಮುದಾಯದ ಮೇಲೆ ಪೊಲೀಸರು …
Read More »ವಾಹನಕ್ಕೆ 100, 200 ರೂಪಾಯಿಯ ಪೆಟ್ರೋಲ್ ಹಾಕಿಸ್ತೀರಾ? ಹಾಗಿದ್ರೆ ನೀವು ಮೋಸ ಹೋಗಿದ್ದೀರಾ!
ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆಗಳು (Price) ಗಗನ ಮುಟ್ಟುತ್ತಿದ್ದು, ಕೆಲವರಂತೂ ಈ ಸಮಯದಲ್ಲಿ ಎಲೆಕ್ಟ್ರಿಕ್ ವಾಹನದತ್ತ (Electric Vehicle) ಚಿತ್ತ ಹರಿಸಿದ್ದಾರೆ. ಇನ್ನು ಕೆಲವರು ಇಂಧನ ಬಳಕೆಯ ವಾಹನವನ್ನೇ ಬಳಸುತ್ತಿದ್ದಾರೆ. ಬೈಕ್ (Bike), ಸ್ಕೂಟರ್ಗಳಿಗೆ (Scooter) ಪೆಟ್ರೋಲ್ ಅವಶ್ಯಕ. ಹೀಗಾಗಿ ಪೆಟ್ರೋಲ್ಗೆಂದು ಪಂಪ್ಗೆ ತೆರಳಿ ಇಂಧನ ಹಾಕಿಸಿಕೊಳ್ಳುತ್ತೇವೆ. ಆದರೆ ಪೆಟ್ರೋಲ್ ಪಂಪ್ನಲ್ಲಿ ಕೆಲವೊಮ್ಮೆ ಗ್ರಾಹಕರನಿಗೆ ತಿಳಿಯದೇ ಮೋಸ (Cheating) ನಡೆದು ಹೋಗುತ್ತದೆ. ಹಾಗಾಗಿ ಇಂತಹ ವಂಚನೆಗೆ ಬಳಿಯಾಗುವ …
Read More »ತುಮಕೂರಿನ ದಲಿತರ ಮನೆಗೆ ನುಗ್ಗಿ ಹಣೆಗೆ ಸಿಂಧೂರ ಯಾಕೆ ಇಟ್ಟಿಲ್ಲ? ಕ್ರಿಸ್ಮಸ್ ಪ್ರಾರ್ಥನೆ ಯಾಕೆ ಮಾಡುತ್ತೀರ? ಎಂದು ಪ್ರಶ್ನಿಸಿದ ಬಜರಂಗದಳದವರಿಗೆ ತಿರುಗೇಟು ನೀಡಿರುವ ಮಹಿಳೆ
ತುಮಕೂರಿನ ದಲಿತರ ಮನೆಗೆ ನುಗ್ಗಿ ಹಣೆಗೆ ಸಿಂಧೂರ ಯಾಕೆ ಇಟ್ಟಿಲ್ಲ? ಕ್ರಿಸ್ಮಸ್ ಪ್ರಾರ್ಥನೆ ಯಾಕೆ ಮಾಡುತ್ತೀರ? ಎಂದು ಪ್ರಶ್ನಿಸಿದ ಬಜರಂಗದಳದವರಿಗೆ ತಿರುಗೇಟು ನೀಡಿರುವ ಮಹಿಳೆಯರು ನಾವು ಮಾಂಗಲ್ಯ ಬೇಕಾದರೂ ಬಿಚ್ಚಿಡುತ್ತೇವೆ ಅದನ್ನು ಕೇಳಲು ನೀವು ಯಾರು? ಎಂದು ದಬಾಯಿಸಿದ್ದಾರೆ. ಬೆಂಗಳೂರು: ತುಮಕೂರಿನಲ್ಲಿ ಕ್ರಿಸ್ಮಸ್ ಆಚರಣೆಯನ್ನು ಪ್ರಶ್ನಿಸಿ ಗಲಾಟೆ ಮಾಡಿದ ಬಲಪಂಥೀಯರ ವಿರುದ್ಧ ಮಹಿಳೆಯರ ಗುಂಪು ಸಿಡಿದೆದ್ದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಿಂದುತ್ವವಾದಿಗಳು ಎಂದು ಹೇಳಿಕೊಂಡು ಬಂದ ಗುಂಪೊಂದು …
Read More »ಭಾನುವಾರ ಬೆಳಗಾವಿಯಲ್ಲಿ ಕರೆಂಟ್ ಇರೋದಿಲ್ಲ….
ಬೆಳಗಾವಿಯಲ್ಲಿ ಕರೆಂಟ್ ಇರೋದಿಲ್ಲ…. ಬೆಳಗಾವಿ- ತುರ್ತು ದುರಸ್ಥಿ ಕಾರ್ಯದ ಹಿನ್ನಲೆಯಲ್ಲಿ ಬೆಳಗಾವಿ ಮಹಾನಗರ ಶೇ 75 ರಷ್ಟು ಪ್ರದೇಶದಲ್ಲಿ ಹೊಸ ವರ್ಷದ ಎರಡನೇಯ ದಿನವೇ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಕರೆಂಟ್ ಇರೋದಿಲ್ಲ ಎಂದು ಹೆಸ್ಕಾಮ್ ಪ್ರಕಟನೆ ಹೊರಡಿಸಿದೆ ಹೊಸ ವರ್ಷದ ಎರಡನೇಯ ದಿನವಾದ ಭಾನುವಾರ ಈ ಕೆಳಕಂಡ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ. ಕಾಂಟೋನ್ಮೆಂಟ್ ಏರಿಯಾ, ನಾನಾವಾಡಿ, ಪಾಟೀಲ ಗಲ್ಲಿ ಹಿಂದವಾಡಿ ತಿಳಕವಾಡಿ ಶಹಾಪೂರ ಎಸ್ ವಿ …
Read More »