Breaking News

ಎಲ್‌ಪಿಜಿ ಸಿಲಿಂಡರ್‌ಗೆ ರಾತ್ರಿಯಿಡೀ ಕ್ಯೂ ಕೂತ ಜನ

Spread the love

ಬೆಂಗಳೂರು: ಮಧ್ಯಪ್ರಾಚ್ಯ ಯುದ್ಧದಿಂದ ಜಗತ್ತಿನಲ್ಲಿ ʻಎನರ್ಜಿ ಎಮರ್ಜೆನ್ಸಿʼ  ಸೃಷ್ಟಿ ಆಗಿಬಿಡುತ್ತಾ ಅನ್ನೋ ಕಳವಳ ಹೆಚ್ಚಾಗ್ತಿದೆ. ಕೊರೊನಾ ಬಳಿಕ ಜಗತ್ತಿನಲ್ಲಿ ಮೊದಲ ಬಾರಿಗೆ ಅನಿಲ ಸಂಕಷ್ಟ ಎದುರಾಗೋ ಆತಂಕ ಮನೆ ಮಾಡಿದೆ.

ರಾಜ್ಯದಲ್ಲೂ ಪೆಟ್ರೋಲ್-ಡೀಸೆಲ್ ಸಿಗಲ್ಲ ಅನ್ನೋ ಗಾಳಿಸುದ್ದಿಗೆ ಜನ ಎದ್ನೋ ಬಿದ್ನೋ ಅಂತ ಬಂಕ್‌ಗಳಿಗೆ ಲಗ್ಗೆ ಇಟ್ಟಿದ್ದಾರೆ. ಬೆಂಗಳೂರು, ಬೀದರ್, ಶಿವಮೊಗ್ಗ, ಯಾದಗಿರಿ, ಬೆಳಗಾವಿ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ.

ಬೆಂಗಳೂರಿನ ಸುತ್ತಮುತ್ತ ಆನೇಕಲ್, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರದ ಕಡೆ ತೈಲ ಪೂರೈಕೆ ಆಗುತ್ತಿಲ್ಲ ಅಂತ ಡೀಲರ್‌ಗಳು ಆರೋಪ ಮಾಡಿದ್ದಾರೆ.

ಇನ್ನು, ರಾಜ್ಯದ ಹಲವೆಡೆ ಗ್ಯಾಸ್ ಪರದಾಟ ಹೆಚ್ಚಾಗ್ತಿದೆ. ಕಲಬುರಗಿಯ ಆಳಂದ ಪಟ್ಟಣದ ಗ್ಯಾಸ್ ಏಜೆನ್ಸಿ ಮುಂದೆ ಸಿಲಿಂಡರ್‌ಗಾಗಿ ಜನ ರಾತ್ರಿಯೆಲ್ಲಾ ರಸ್ತೆಯಲ್ಲೇ ಮಲಗಿದ್ದರು. ಸನಾ ಇಂಡಿಯನ್ ಗ್ಯಾಸ್ ಏಜೆನ್ಸಿ ಮುಂದೆ ಮಕ್ಕಳು, ಮಹಿಳೆಯರು, ಸರ್ಕಾರಿ ನೌಕರರು ಕಿ.ಮೀ.ಗಟ್ಟಲೇ ಕಾದು ಕೂತಿದ್ದರು.

ಬೆಳಗ್ಗೆ ಬಿಸಿಲಿನಲ್ಲಿ ಕಾಯ್ತಿದ್ದ ಯುವಕ ಅಸ್ವಸ್ಥ ಕೂಡ ಆದ. ಜನ ಆಸ್ಪತ್ರೆಗೆ ಕರೆದೊಯ್ದರು. ಏಜೆನ್ಸಿಯವರು ಸರಿಯಾದ ಸಮಯಕ್ಕೆ ಹೋಂ ಡೆಲಿವರಿ ಕೊಡ್ತಿಲ್ಲ. ನಾವೇ ತಗೊಂಡ್ ಹೋಗ್ತೇವೆ ಕೊಡಿ ಅಂತ ಪ್ಟು ಹಿಡಿದರು. ಬಳ್ಳಾರಿಯ ಸಂಡೂರು ತಾಲೂಕಿನ ಗ್ರಾಮೀಣ ಭಾಗದಲ್ಲಿ ಸಿಲಿಂಡರ್ ವಾಹನಗಳಿಗೆ ಮುಗಿಬೀಳ್ತಿದ್ದಾರೆ.

ಹೆಚ್ಚುವರಿ 50 ರೂಪಾಯಿ ಕೊಟ್ಟೂ ತಗೊಂಡ್ ಹೋಗ್ತಿದ್ದಾರೆ. ಮಡಿಕೇರಿಯಲ್ಲಿ ಟೋಟಲ್ ಗ್ಯಾಸ್ ಏಜೆನ್ಸಿಯವರು ಮಂಗಳೂರಿನಿಂದ ಒಂದು ಲೋಡ್ ಗ್ಯಾಸ್ ತರಿಸಿ ಗ್ರಾಹಕರಿಗೆ ಕೊಟ್ಟರು. ಆದರೆ, ವಾಣಿಜ್ಯ ಸಿಲಿಂಡರ್‌ಗೆ 2,500 ರೂ. ಬದಲಿಗೆ 3,950 ರೂ. ಪಡೆದಿದ್ದಾರೆ ಅಂತ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ; 412 ಹುದ್ದೆಗಳಿಗೆ ಅರ್ಜಿ ಆಹ್ವಾನ

Spread the loveಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು  ಕಲಬುರಗಿ ಜಿಲ್ಲೆಯ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಒಟ್ಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ