Breaking News

ಬಿಜೆಪಿ ಸಚಿವೆ ಪಂಕಜಾ ಮುಂಡೆ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ – ಚುನಾವಣಾ ಪ್ರಚಾರ ರದ್ದು

Spread the love

ಮುಂಬೈ: ಬಿಜೆಪಿ ನಾಯಕಿ ಹಾಗೂ ರಾಜ್ಯ ಪರಿಸರ ಮತ್ತು ಪಶುಸಂಗೋಪನಾ ಸಚಿವೆ ಪಂಕಜಾ ಮುಂಡೆ  ಅವರ ಹೆಲಿಕಾಪ್ಟರ್‌ನಲ್ಲಿ ಮಂಗಳವಾರ ತಾಂತ್ರಿಕ ದೋಷ ಕಂಡುಬಂದಿದೆ. ಹೀಗಾಗಿ ಲಾತೂರ್‌  ಚುನಾವಣಾ ಪ್ರಚಾರ ಕಾರ್ಯಕ್ರಮವನ್ನ ದಿಢೀರ್‌ ರದ್ದುಗೊಳಿಸಲಾಗಿದೆ.

ಇಂದು ಜಿಲ್ಲಾ ಚುನಾವಣಾ ಪ್ರಚಾರಕ್ಕಾಗಿ ಪಂಕಜಾ ಮುಂಡೆ ಅವರು ಮಹಾರಾಷ್ಟ್ರದಲ್ಲಿ ಸಂಭಾಜಿನಗರ ರಿಂದ ಲಾತೂರ್‌ಗೆ ತೆರಳಬೇಕಿತ್ತು. ಈ ವೇಳೆ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ (Technical Issue) ಕಂಡುಬಂದಿತು. ಹಾರಾಟ ನಡೆಸುವ ಮೊದಲೇ ಪೈಲಟರ್‌ ಈ ವಿಷಯ ಗಮನಕ್ಕೆ ತಂದಿದ್ದರಿಂದ ಲಾತೂರ್‌ ಪ್ರಯಾಣವನ್ನ ರದ್ದುಗೊಳಿಸಲಾಯಿತು.

ಸೋಮವಾರ (ಫೆ.2) ಪಂಕಜಾ ಮುಂಡೆ ಅವರು ಪಿಶೋರ್, ಘಟನಂದ್ರ, ಚೌಕಾ, ಅಡ್ಗಾಂವ್, ಬಜನಗರ ಮುಂತಾದ ಅವರ ಸ್ಥಳಗಳಲ್ಲಿ ಚುನಾವಣಾ ಪೂರ್ವ ಸಭೆಗಳನ್ನ ನಡೆಸಿದ್ದರು. ಪ್ರಚಾರ ಕಾರ್ಯ ಮುಗಿದ ಬಳಿಕ ಛತ್ರಪತಿ ಸಂಭಾಜಿನಗರದಲ್ಲಿ ವಾಸ್ತವ್ಯ ಹೂಡಿಸಿದ್ದರು. ಇಂದು (ಮಂಗಳವಾರ) ಬೆಳಗ್ಗೆ ಲಾತೂರ್, ಧಾರಶಿವ ಮತ್ತು ಸೋಲಾಪುರ ಸೇರಿ 3 ಜಿಲ್ಲೆಗಳಲ್ಲಿ ಯೋಜಿತ ಸಭೆಗಳಿಗೆ ಹಾಜರಾಗಬೇಕಿತ್ತು. ಎಲ್ಲಾ ತಯಾರಿ ಮಾಡಿಕೊಳ್ಳಲಾಗಿತ್ತು. ಕೊನೇ ಕ್ಷಣದಲ್ಲಿ ತಾಂತ್ರಿಕ ದೋಷದ ಬಗ್ಗೆ ಪೈಲಟ್‌ ಮಾಹಿತಿ ನೀಡಿದ ಹಿನ್ನೆಲೆ ಚುನಾವಣಾ ಪ್ರಚಾರ ಕಾರ್ಯಗಳನ್ನ ರದ್ದುಗೊಳಿಸಲಾಗಿದೆ.


Spread the love

About Laxminews 24x7

Check Also

ಬಾಗಲಕೋಟೆ: ನಿಯಂತ್ರಣ ತಪ್ಪಿ ಎಥಿನಾಲ್ ಲಾರಿ ಪಲ್ಟಿ; ಅಧಿಕಾರಿಗಳ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ!

Spread the loveಬಾಗಲಕೋಟೆ: ನಿಯಂತ್ರಣ ತಪ್ಪಿ ಎಥಿನಾಲ್ ಲಾರಿ ಪಲ್ಟಿ; ಅಧಿಕಾರಿಗಳ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ! ಬಾಗಲಕೋಟೆ ಜಿಲ್ಲೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ