Breaking News

ರಾಜ್ಯದ ಹಲವೆಡೆ ಆರ್‌ಟಿಓ ಚೆಕ್‌ ಪೋಸ್ಟ್‌ಗಳ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು,ಅ.8-ರಾಜ್ಯದ ಹೆದ್ದಾರಿಗಳಲ್ಲಿನ ಚೆಕ್‌ ಪೋಸ್ಟ್‌ಗಳಲ್ಲಿ ಲಂಚ ದಂಧೆಯನ್ನು ಬಯಲಿಗೆಳೆಯಲು ಬೀದರ್‌, ಕೋಲಾರ, ಬಳ್ಳಾರಿ, ಚಿಕ್ಕೋಡಿ ಹಾಗೂ ವಿಜಯಪುರ ಆರ್‌ಟಿಓ ಚೆಕ್‌ ಪೋಸ್ಟ್‌ ಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಾಹನಗಳ ಸವಾರರಿಂದ ಹಣ ವಸೂಲಿ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತಾ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಬೀದರ್‌ನ ಆರ್‌ಟಿಒ ಕಚೇರಿ ಸಿಬ್ಬಂಧಿಗಳಿಗೂ ಶಾಕ್‌ ನೀಡಿದ್ದಾರೆ. ಇದಲ್ಲದೆ ತಾಲೂಕಿನ ಮೊಳಕೇರಾ ಬಳಿ ಇರುವ ಆರ್‌ಟಿಒ ಚೆಕ್‌ ಪೋಸ್ಟ್‌ ಮೇಲೆ ಮುಂಜಾನೆ ಲೋಕಾಯುಕ್ತ …

Read More »

ರುಪ್ಸಾ; ತಾಲ್ಲೂಕು ಘಟಕಕ್ಕೆ ಪುಷ್ಪಾ ಅಧ್ಯಕ್ಷೆ

ನವಲಗುಂದ: ನವಲಗುಂದ ಹಾಗೂ ಅಣ್ಣಿಗೇರಿ ತಾಲ್ಲೂಕಿನ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘದ (ರುಪ್ಸಾ) ಅಧ್ಯಕ್ಷರಾಗಿ ಶಾರದಾ ಶಿಕ್ಷಣ ಸಂಸ್ಥೆಯ ಪುಷ್ಪಾ ಹಿರೇಮಠ ಅವಿರೋಧವಾಗಿ ಆಯ್ಕೆಯಾದರು. ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ನಾಗರಾಜ ಧಾರವಾಡಶೆಟ್ರ ಅಧ್ಯಕ್ಷತೆಯಲ್ಲಿ ಸೋಮವಾರ ಪಟ್ಟಣದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.   ವೆಂಕರಡ್ಡಿ ನಡುವಿನಮನಿ (ಗೌರವಾಧ್ಯಕ್ಷ), ಶೋಭಾ ದಾಡಿಬಾವಿ (ಉಪಾಧ್ಯಕ್ಷೆ), ವಿ.ಬಿ.ನವಲಗುಂದ (ಪ್ರಧಾನಕಾರ್ಯದರ್ಶಿ), ಗುರುರಾಜ ಧಾರವಾಡ (ಕಾರ್ಯಾಧ್ಯಕ್ಷ), ಭರತೇಶ ಕುರುಬರ (ಖಜಾಂಚಿ), ರವಿ ಬಾಜಿ …

Read More »

ಆಟೊದವರ ಸಮಸ್ಯೆಗಳೇನು?

ಆಟೊದವರ ಸಮಸ್ಯೆಗಳೇನು? * ನಗರದಲ್ಲಿ ಎಲ್ಲ ಕಡೆಯೂ ‘ಶೇರಿಂಗ್‌’ ವ್ಯವಸ್ಥೆಗೆ ಜನ ಮುಗಿಬೀಳುತ್ತಾರೆ. ಮೀಟರ್‌ ಅಳವಡಿಸುವ ಮುನ್ನ ಶೇರಿಂಗ್‌ ವ್ಯವಸ್ಥೆ ಬಂದ್ ಮಾಡಿಸಬೇಕು. * ಗ್ರಾಮೀಣ ಪ್ರದೇಶಕ್ಕೆ ಪರವಾನಗಿ ‍ಪಡೆದವರೂ ನಗರದಲ್ಲಿ ಓಡಿಸುತ್ತಾರೆ. ನಗರದ ‍ಪರವಾನಗಿ ಇದ್ದವರು ಏನು ಮಾಡಬೇಕು? * ಕನಿಷ್ಠ ದೂರದ ದರವನ್ನು ₹30 ಮಾಡಲಾಗಿದೆ. ಇದು ಏಳು ವರ್ಷಗಳ ಹಿಂದಿನ ದರ. ಕನಿಷ್ಠ ದರವನ್ನೂ ಹೆಚ್ಚಿಸಬೇಕು. * ಮೀಟರ್‌ಗಳ ದುರಸ್ತಿ ಮಾಡುವವರು ಒಬ್ಬರೂ ಬೆಳಗಾವಿಯಲ್ಲಿ ಇಲ್ಲ. …

Read More »

ದಸರಾ ಕ್ರೀಡಾಕೂಟ | ಟೆಕ್ವಾಂಡೋ ಸ್ಪರ್ಧೆ: ಅಣ್ಣ- ತಂಗಿಗೆ ಚಿನ್ನದ ಪದಕ

ರಾಯಬಾಗ: ಮೈಸೂರು ದಸರಾ ಕ್ರೀಡಾಕೂಟದಲ್ಲಿ ಬೆಳಗಾವಿ ವಿಭಾಗದಿಂದ ಸ್ಪರ್ಧಿಸಿದ್ದ ಪಟ್ಟಣದ ಪ್ರತೀಕ ಅರ್ಜುನ ಗೊಂಡೆ ಹಾಗೂ ಸಹೋದರಿ ಶ್ರುತಿ ಅರ್ಜುನ ಗೊಂಡೆ ಟೆಕ್ವಾಂಡೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. 82 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಪ್ರತೀಕ, ಬೆಂಗಳೂರು ನಗರದ ಸ್ಪರ್ಧಿಯನ್ನು ಸೋಲಿಸಿ ಚಿನ್ನದ ಪದಕ ಪಡೆದರೆ, ಶ್ರುತಿ 62ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಬೆಂಗಳೂರು ಗ್ರಾಮೀಣ ಭಾಗದ ಸ್ಪರ್ಧಿಯನ್ನು ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.   ಪ್ರತೀಕಗೆ ಪಟ್ಟಣದ ಎ.ಕೆ.ಟೆಕ್ವಾಂಡೋ ಅಸೋಷಿಯೇಶನ್‌ನ …

Read More »

ಬೆಳಗಾವಿ | ಜಿಲ್ಲಾ ಸಾಹಿತ್ಯ ಸಮ್ಮೇಳನ ನ.25ರಿಂದ

ಮೂಡಲಗಿ: 16ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳವನ್ನು ನ.24 ಮತ್ತು 25ರಂದು ಎರಡು ಮೂಡಲಗಿಯ ಆರ್.ಡಿ.ಎಸ್. ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದೆ. ಗೋಕಾಕದ ಹಿರಿಯ ಸಾಹಿತಿ ಪ್ರೊ. ಚಂದ್ರಶೇಖ ಅಕ್ಕಿ ಅವರು ಸಮ್ಮೇಳನಾಧ್ಯಕ್ಷರಾಗಿರುವರು. ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ವಹಿಸಿವರು. ಸಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಅವರು ಉದ್ಘಾಟಿಸವರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ …

Read More »

ಬಾಲಕಿ ಮೇಲೆ ಅತ್ಯಾಚಾರ: 20 ವರ್ಷ ಜೈಲು ಶಿಕ್ಷೆ

ಬೆಳಗಾವಿ: ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಗ್ರಾಮವೊಂದರದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅ‍‍‍‍ಪರಾಧಿಗೆ ಇಲ್ಲಿನ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿದೆ. ತಿಗಡೊಳ್ಳಿ ಗ್ರಾಮದ ಗಂಗಪ್ಪ ಕಲ್ಲಪ್ಪ ಕೋಲಕಾರ ಶಿಕ್ಷೆಗೆ ಒಳಗಾದವ. ಬಾಲಕಿಯನ್ನು ಪುಸಲಾಯಿಸಿ, ಪ್ರೀತಿಸುತ್ತೆನೆ- ಮದುವೆಯಾಗುತ್ತೇನೆ ಎಂದು ನಂಬಿಸಿದ್ದ. 2017ರ ಸೆಪ್ಟೆಂಬರ್‌ನಲ್ಲಿ ಬೈಕ್‌ ಮೇಲೆ ಅಪಹರಿಸಿಕೊಂಡು ಮಹಾರಾಷ್ಟ್ರದ ತಾಸಗಾಂವ ಎಂಬಲ್ಲಿ ಬಿಲ್ಡಿಂಗ್‌ವೊಂದರಲ್ಲಿ ಇರಿಸಿದ್ದ. ಅಲ್ಲಿಯೇ …

Read More »

30 ಗುಂಟೆಗೆ 12 ಕ್ವಿಂಟಲ್ ಸೋಯಾಬಿನ್‌ ಇಳುವರಿ

ಸಂಕೇಶ್ವರ (ಬೆಳಗಾವಿ ಜಿಲ್ಲೆ): ಸಮೀಪದ ಕುರಣಿ ಗ್ರಾಮದ ರೈತ ಅಡಿವೆಪ್ಪ ಶಿವಪ್ಪ ಕಾಚಿ ಅವರು 30 ಗುಂಟೆ ಜಮೀನಿನಲ್ಲಿ 12 ಕ್ವಿಂಟಲ್‌ ಸೋಯಾಬಿನ್‌ ಇಳುವರಿ ಪಡೆದಿದ್ದಾರೆ. ತಾವೇ ಕಾದಿಟ್ಟ ಬಿತ್ತನೆ ಬೀಜಗಳಿಗೆ ಸರಿಯಾಗಿ ಪೋಷಣೆ, ಜತೆಗೆ ಸಕ್ಕರೆ ಕಾರ್ಖಾನೆಯಿಂದ ಹೊರಬರುವ ವ್ಯರ್ಥ ಮೊಲಾಸಿಸ್‌ ಅನ್ನು ಬಿತ್ತನೆ ವೇಳೆ ಬಳಸುವ ಮೂಲಕ ಈ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ.   ಪ್ರತಿ ವರ್ಷ ರೈತರಿಗೆ ವಿವಿಧ ಕಂಪನಿಗಳು ಬಿತ್ತನೆ ಬೀಜ ನೀಡುತ್ತವೆ. ಆದರೆ, ಅಡಿವೆಪ್ಪ ಕಂಪನಿ …

Read More »

ಮ್ಮು&ಕಾಶ್ಮೀರ ವಿಧಾನಸಭೆ ಚುನಾವಣೆ ಫಲಿತಾಂಶ : ಬಿಜೆಪಿಗೆ ಭರ್ಜರಿ ಮುನ್ನಡೆ

ನವದೆಹಲಿ : ಜಮ್ಮು ಮತ್ತು ಕಾಶ್ಮೀರ, ಹರಿಯಾಣ ವಿಧಾನಸಭೆ ಚುನಾವಣೆ 2024 ರ ಫಲಿತಾಂಶಗಳು ಇನ್ನೇನು ಕೆಲವೇ ಗಂಟೆಗಳಲ್ಲಿ ಬರಲಿದ್ದು, ಇದೀಗ ಮತ ಎಣಿಕೆ ಆರಂಭವಾಗಿದೆ. ಜಮ್ಮು& ಕಾಶ್ಮೀರದಲ್ಲಿ ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿದೆ. ಜಮ್ಮು& ಕಾಶ್ಮೀರ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, 22 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ಮೈತ್ರಿ 9 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.   ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 90 ವಿಧಾನಸಭಾ …

Read More »

ಮತ್ತೆ ಏರುಗತಿಯಲ್ಲಿ ಟೊಮೆಟೋ

ರಾಜ್ಯದಲ್ಲಿ ಕೆಲವು ದಿನಗಳಿಂದ ಟೊಮೆಟೋ ಧಾರಣೆ ಏರುಗತಿಯಲ್ಲಿ ಸಾಗುತ್ತಿದೆ. ಅತಿದೊಡ್ಡ ಟೊಮೆಟೋ ಮಾರುಕಟ್ಟೆ ಖ್ಯಾತಿಯ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಸದ್ಯ ಕೆ.ಜಿ. ಟೊಮೆಟೋ 30ರಿಂದ 75 ರೂ. ವರೆಗೆ ಹಾಗೂ 15 ಕೆ.ಜಿ.ಯ ಬಾಕ್ಸ್‌ ಕನಿಷ್ಠ 500ರಿಂದ ಗರಿಷ್ಠ 1,100 ರೂ.ಗೆ ಮಾರಾಟವಾಗುತ್ತಿದೆ. ದೇಶದ ವಿವಿಧ ಮಹಾನಗರಗಳು, ನೆರೆ ರಾಷ್ಟ್ರಗಳಿಗೂ ಟೊಮೆಟೋ ಕಳುಹಿಸುತ್ತಿದ್ದ ಮಾರುಕಟ್ಟೆಯಿಂದ ಇದೀಗ ಜಿಲ್ಲೆಯ ಅಥವಾ ರಾಜ್ಯದ ಬೇಡಿಕೆಯನ್ನು ಪೂರೈಸಲು ಸಾಧ್ಯವಿಲ್ಲವಾಗಿದೆ. ಫಸಲು ಕಡಿಮೆಗೆ ಕಾರಣ? ಟೊಮೆಟೋವನ್ನು …

Read More »

ಗಜಪಡೆ ತೂಕ ಪರೀಕ್ಷೆ: ಅಭಿಮನ್ಯುವೇ ‘ಕ್ಯಾಪ್ಟನ್‌’

ಮೈಸೂರು: ದಸರಾ ಗಜಪಡೆಯ ಎಲ್ಲ 14 ಆನೆಗಳಿಗೆ ಸೋಮವಾರ 2ನೇ ಹಂತದ ತೂಕ ಪರೀಕ್ಷೆ ನಡೆಯಿತು. ಕ್ಯಾಪ್ಟನ್‌ ಅಭಿಮನ್ಯು ಅತಿ ಹೆಚ್ಚು ತೂಕ ತೂಗಿದರೆ, ಭೀಮ ಕಳೆದ ಬಾರಿಗಿಂತ ಬರೋಬ್ಬರಿ 435 ಕೆ.ಜಿ. ತೂಕ ಹೆಚ್ಚಿಸಿಕೊಳ್ಳುವ ಮೂಲಕ 2ನೇ ಸ್ಥಾನದಲ್ಲಿದ್ದಾನೆ. ಎಂದಿನಂತೆ ತೂಕ ಪರೀಕ್ಷೆಯಲ್ಲಿ ಕ್ಯಾಪ್ಟನ್‌ ಅಭಿಮನ್ಯುವೇ ಹೆಚ್ಚು ಬಲಶಾಲಿಯಾಗಿದ್ದಾನೆ. ಆ. 21ರ ತೂಕ ಪರೀಕ್ಷೆಯಲ್ಲಿ 5,560 ಕೆ.ಜಿ., ಎರಡನೇ ಪರೀಕ್ಷೆಯಲ್ಲಿ 5,820 ಕೆ.ಜಿ. ತೂಕ ತೂಗಿದ್ದು 260 ಕೆ.ಜಿ. ಹೆಚ್ಚಿಸಿಕೊಂಡಿದ್ದಾನೆ. …

Read More »