ಮಡಿಕೇರಿ: ಮೇ 4ರಿಂದ ಗ್ರೀನ್ ಝೋನ್ ಗಳಲ್ಲಿ ಲಾಕ್ ಡೌನ್ ಸಂಪೂರ್ಣ ಸಡಿಲಿಕೆ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ಕೊಡಗಿನ ಜನರಿಗೆ ನಿರಾಸೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಎಂದಿನಂತೆ ಲಾಕ್ ಡೌನ್ ಮುಂದುವರೆಸುವುದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ. ಲಾಕ್ಡೌನ್ ಸಡಿಲಿಕೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಮೂರುವರೆಯಿಂದ ನಾಲ್ಕು ಸಾವಿರ ಜನ ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಬರುವ ನಿರೀಕ್ಷೆ ಇದೆ. ಹೀಗಾಗಿ ಲಾಕ್ಡೌನ್ ಮುಂದುವರಿಸಲು ಚಿಂತನೆ ನಡೆಸಲಾಗಿದೆ. …
Read More »ಕೊಡಗು ಜಿಲ್ಲೆಯಲ್ಲಿ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಭಾರೀ ಮಳೆ……….
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಬಿರುಗಾಳಿಯ ರಭಸಕ್ಕೆ ಮನೆಗಳ ಛಾವಣಿ ಹಾಗೂ ಹೆಂಚುಗಳು ಹಾರಿವೆ. ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿಯಾದ್ಯಂತ ಭಾನುವಾರ ಸಂಜೆ ಭಾರೀ ಮಳೆ ಸುರಿದಿದ್ದು, ಬಿರುಗಾಳಿ ಸಹಿತ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ಸಂಜೆ ಗುಡುಗು ಸಹಿತ ಪ್ರಾರಂಭವಾದ ಬಿರುಗಾಳಿ ಮಳೆಗೆ ಶನಿವಾರಸಂತೆ ಸಮೀಪದ ಅಪ್ಪಶೆಟ್ಟಳ್ಳಿ, ದೊಡ್ಡ ಬಿಳಾಹ, ಗಸುಳುಗಳಲೆ ಕಾಲೋನಿ ಹಾಗೂ ಚಿನ್ನಳ್ಳಿ ಗ್ರಾಮಗಳ ಹಲವು ಮನೆಗಳ ಮೇಲ್ಛಾವಣಿ, …
Read More »ಲಾಕ್ಡೌನ್ ರಿಲೀಫ್ ಜೊತೆ ಖಡಕ್ ಎಚ್ಚರಿಕೆ:ಪೊಲೀಸ್ ಆಯುಕ್ತ ಭಾಸ್ಕರ್ ರಾವ್
ಬೆಂಗಳೂರು: ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಬಹುತೇಕ ಬೆಂಗಳೂರು ನಾಳೆಯಿಂದ ಓಪನ್ ಆಗಲಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಬೆಂಗಳೂರಿಗರಿಗೆ ಬಹುತೇಕ ರಿಲೀಫ್ ನೀಡಿದ್ದಾರೆ. ಪಾಸ್ ಇಲ್ಲದೆಯೂ ಓಡಾಡಬಹುದು ಎಂದಿದ್ದಾರೆ. ಕೆಲವೊಂದು ಷರತ್ತು ವಿಧಿಸಲಾಗಿದ್ದು, ನಿಯಮ ಉಲ್ಲಂಘಿಸಿದ್ರೆ, ಸೆಕ್ಷನ್ 188ರ ಅಡಿ ಕೇಸ್ ದಾಖಲಿಸಲಾಗುತ್ತೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ನಾಳೆಯಿಂದ ಅಂದ್ರೆ ಸೋಮವಾರದಿಂದ ಪಾಸ್ ಇಲ್ಲದೆಯೂ ಓಡಾಡಬಹುದು. ಒಂದು ಪೊಲೀಸರು ಪರಿಶೀಲನೆಗೆ ತಡೆದಾಗ ರಸ್ತೆಗೆ …
Read More »ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ : ರಾಜ್ಯ ಸರ್ಕಾರ ಸುಗ್ರೀವಾಜ್ಞೆ
ಬೆಂಗಳೂರು : ಸಾರ್ವಜನಿಕ ಸ್ಥಳಗಳಲ್ಲಿ ಇನ್ನು ಮುಂದೆ ರಾಜ್ಯದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ಸುಗ್ರೀವಾಜ್ಞೆಯನ್ನು ಹೊರಡಿಸಿದೆ. ಕರ್ನಾಟಕ ಸಾಂಕ್ರಾಮಿಕ ರೋಗ ನಿಯಮಾವಳಿ 2020 ಸುಗ್ರೀವಾಜ್ಞೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಈ ಸುಗ್ರೀವಾಜ್ಞೆ ಪ್ರಕಾರ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಮಾಸ್ಕ್ ಇಲ್ಲವೆ, ಕರವಸ್ತ್ರ, ಅಥವಾ ಬಟ್ಟೆಯನ್ನು ಬಾಯಿ, ಮೂಗು ಮುಚ್ಚುವಂತೆ ಧರಿಸುವುದು ಕಡ್ಡಾಯವಾಗಿದೆ. ರಾಜ್ಯದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯರಾಜ್ಯದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯಅದೇ …
Read More »ಎಚ್ಚರಿಕೆ : ಎಣ್ಣೆ ಮಾರೋರಿಗೂ, ಕುಡಿಯೋರಿಗೂ Conditions Apply, ಯಾಮಾರಿದರೆ ತೆರಬೇಕಾಗುತ್ತೆ ದಂಡ..!
ಬೆಂಗಳೂರು : ಕಳೆದ ಒಂದೂವರೆ ತಿಂಗಳಿನಿಂದ ಮುಚ್ಚಿದ್ದ ಮಧ್ಯದ ಅಂಗಡಿಗಳು ನಾಳೆ ರಾಜ್ಯಾದ್ಯಂತ ( ಕಂಟೋನ್ಮೆಂಟ್ ಹೊರತುಪಡಿಸಿ) ತೆರೆಯಲಿದ್ದು, ಭಾನುವಾರದಿಂದಲೇ ಎಣ್ಣೆ ಪ್ರಿಯರು ದಾಂಗುಡಿ ಇಟ್ಟಿದ್ದಾರೆ. ಇದರ ನಡುವೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿ ಮಾರ್ಗಸೂಚಿ ಹೊರಡಿಸಿದೆ. ಜೊತೆಗೆ ಕೆಲವು ಷರತ್ತುಗಳನ್ನು ವಿಧಿಸಿದೆ. ಕಂಟೈನ್ಮೆಂಟ್ ಝೋನ್ ವ್ಯಾಪ್ತಿಯ ಜನರಿಗೂ ಎಣ್ಣೆ ಬೇಕು ಅಂದರೆ ಸರಿಯಾಗಿ ಲಾಕ್ಡೌನ್ ನಿಯಮ ಪಾಲಿಸಿ ಸೋಂಕು ಮುಕ್ತ ಝೋನ್ ಆಗಬೇಕಿದೆ. ಸರಿಯಾಗಿ ನಿಯಮ ಪಾಲಿಸದಿದ್ದರೆ, ನೂಕು …
Read More »:ಕೇಂದ್ರ ಸರಕಾರದ ಮಾರ್ಗಸೂಚಿ ಪ್ರಕಾರ ಬೆಳಗಾವಿ ಜಿಲ್ಲೆ ಕಿತ್ತಳೆ ವಲಯ(ಆರೇಂಜ್ ಝೋನ್)ದಲ್ಲಿ ಗುರುತಿಸಲ್ಪಟ್ಟಿರುತ್ತದೆ.
ಸಾರ್ವಜನಿಕರ ಗಮನಕ್ಕೆ, ಗೋಕಾಕ :ಕೇಂದ್ರ ಸರಕಾರದ ಮಾರ್ಗಸೂಚಿ ಪ್ರಕಾರ ಬೆಳಗಾವಿ ಜಿಲ್ಲೆ ಕಿತ್ತಳೆ ವಲಯ(ಆರೇಂಜ್ ಝೋನ್)ದಲ್ಲಿ ಗುರುತಿಸಲ್ಪಟ್ಟಿರುತ್ತದೆ. ಆದ್ದರಿಂದ ಈ ವಲಯಕ್ಕೆ ಅನ್ವಯವಾಗುವ ಮಾರ್ಗಸೂಚಿ ಅನುಸಾರ ಲಾಕ್ ಡೌನ್ ಷರತ್ತುಗಳನ್ನು ಸಡಿಲ ಗೊಳಿಸಲಾಗಿದೆ. ಕಿತ್ತಳೆ ವಲಯದಲ್ಲಿ ಅನುಸರಿಸಬೇಕಾದ ನಿಯಮಾವಳಿಗಳ ಪ್ರಕಾರ ಬೆಳಿಗ್ಗೆ 7.00 ರಿಂದ ಸಂಜೆ 7.00ರ ವರೆಗೆ ಆರ್ಥಿಕ ಮತ್ತು ವಾಣಿಜ್ಯ ಚಟುವಟಿಕೆಗಳು ಮತ್ತು ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಅದರಂತೆ ಹೋಟೆಲ್ ಕಿಚನ್ ತೆರೆಯಲು ಮಾತ್ರ ಅವಕಾಶ ಇದ್ದು, …
Read More »ಮಾರ್ಕೆಟ್ ಎಸಿಪಿ ನಾರಾಯಣ ಭರಮಣಿ ಅವರ ಕಚೇರಿ ಆವರಣದಲ್ಲಿ ನಡೆದ ಪೋಲೀಸ್ ಅಧಿಕಾರಿಗಳ ಮಹತ್ವದ ಸಭೆ
ಬೆಳಗಾವಿ- ಬೆಳಗಾವಿ ಜಿಲ್ಲೆ ಆರೇಂಜ್ ಝೋನ್ ವ್ಯಾಪ್ತಿಗೆ ಬಂದಿದ್ದು ಕೇಂದ್ರ ಸರ್ಕಾರದ ಆರೇಂಜ್ ಝೋನಿನ ಎಲ್ಲ ಮಾರ್ಗಸೂಚಿಗಳು ಬೆಳಗಾವಿ ಜಿಲ್ಲೆಗೆ ಅನ್ವಯ ಆಗುತ್ತವೆ ಆದರೆ ಬೆಳಗಾವಿ ನಗರದಲ್ಲಿ ಸಂಗಮೇಶ್ವರ ನಗರ,ಆಝಾದ್ ಗಲ್ಲಿ,ಕ್ಯಾಂಪ್ ಪ್ರದೇಶ ,ಅಮನ್ ನಗರ ಗಳು ಕಂಟೈನ್ಮೆಂಟ್ ಝೋನ್ ನಲ್ಲಿ ಬರುವದರಿಂದ ಬಹುತೇಕ ಬೆಳಗಾವಿ ನಗರವೇ ಕಂಟೈನ್ಮೆಂಟ್ ಝೋನ್ ನಲ್ಲಿ ಇರುವದರಿಂದ ಬೆಳಗಾವಿ ನಗರದಲ್ಲಿ ಯಾವ ರೀತಿಯಲ್ಲಿ ಸಡಲಿಕೆ ನೀಡಬಹುದು ಎನ್ನುವದರ ಬಗ್ಗೆ ಚರ್ಚಿಸಲು ಬೆಳಗಾವಿಯಲ್ಲಿ ಹಿರಿಯ ಪೋಲೀಸ್ …
Read More »ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಎರಡು ಎಮ್ಮೆಗಳಿಗೆ ತಲಾ 50 ಸಾವಿರ ರೂಪಾಯಿ ಯಂತೆ ಒಂದು ಲಕ್ಷ ರೂ. ಪರಿಹಾರವನ್ನು ಶಾಸಕ ಸತೀಶ ಜಾರಕಿಹೊಳಿ ನೀಡಿದರು.
ಬೆಳಗಾವಿ: ಯಮಕನಮರಡಿ ಮತಕ್ಷೇತ್ರದ ಕಡೋಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೇದನೂರ ಗ್ರಾಮದಲ್ಲಿ ಇತ್ತೀಚೆಗೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಎರಡು ಎಮ್ಮೆಗಳಿಗೆ ತಲಾ 50 ಸಾವಿರ ರೂಪಾಯಿ ಯಂತೆ ಒಂದು ಲಕ್ಷ ರೂ. ಪರಿಹಾರವನ್ನು ಶಾಸಕ ಸತೀಶ ಜಾರಕಿಹೊಳಿ ನೀಡಿದರು. ಇಲ್ಲಿನ ಗೃಹಕಚೇರಿಯಲ್ಲಿ ಎಮ್ಮೆ ಮಾಲೀಕ ರವೀಂದ್ರ ಪಾಟೀಲ ಅವರಿಗೆ ವಿದ್ಯುತ್ ಇಲಾಖೆ ನಿಧಿಯಿಂದ ಪರಿಹಾರವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿ.ಪಂ. ಉಪಾಧ್ಯಕ್ಷ ಅರುಣ ಕಟಾಂಬಳೆ, ಎಇಇ ವಿವೇಕ ನಾಯಿಕ, ಜಯರಾಮ …
Read More »ಲಾಕ್ಡೌನ್ನಲ್ಲೂ ಹುಕ್ಕಾ ಬಾರ್ ಓಪನ್ ಮಾಡಿದ್ದ ಮೂವರು ಅಂದರ್
ಬೆಂಗಳೂರು, – ಲಾಕ್ಡೌನ್ ಸಂದರ್ಭದಲ್ಲೂ ಕಾನೂನು ಬಾಹಿರವಾಗಿ ನಡೆಸಲಾಗುತ್ತಿದ್ದ ಹುಕ್ಕಾ ಬಾರ್ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಹುಕ್ಕಾ ಬಾರ್ ಮಾಲೀಕ ಸೂರಜ್ಕುಮಾರ್ (29), ಮ್ಯಾನೇಜರ್ ಲಕ್ಷ್ಮಣ್ (26) ಹಾಗೂ ನೌಕರ ಜೀತು (21) ಬಂಧಿತ ಆರೋಪಿಗಳು ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯ ಕ್ಯಾಫ್-11 ಹುಕ್ಕಾಬಾರ್ಅನ್ನು ಲಾಕ್ಡೌನ್ ಸಂದರ್ಭದಲ್ಲೂ ತೆರೆದು ಗ್ರಾಹಕರಿಗೆ ಅಕ್ರಮವಾಗಿ ಹುಕ್ಕಾ ನೀಡುತ್ತಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ …
Read More »ಲವ್ ಮಾಕ್ಟೇಲ್ ಮೊದಲ ದಿನದ ಚಿತ್ರೀಕರಣ ನೆನೆದ ನಿಧಿಮಾ
ಬೆಂಗಳೂರು: ಲವ್ ಮಾಕ್ಟೇಲ್ ಸಿನಿಮಾದಲ್ಲಿ ನಿಧಿಮಾ ಪಾತ್ರಕ್ಕೆ ಜೀವ ತುಂಬಿದ್ದ ನಟಿ ಮಿಲನ ನಾಗರಾಜ್, ಸಿನಿಮಾದ ಮೊದಲ ದಿನದ ಚಿತ್ರೀಕರಣದ ಸಂದರ್ಭವನ್ನು ನೆನೆದಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಂಡಿರುವ ಅವರು, ಲವ್ ಮಾಕ್ಟೇಲ್ ಚಿತ್ರೀಕರಣದ ಮೊದಲ ದಿನ ನೆನಪಾಗುತ್ತಿದೆ. ನಿಮಗೆ ಈ ಸೀನ್ ನೆನಪಾಗುತ್ತಾ, ಇದೇ ಚಿತ್ರೀಕರಣದ ಮೊದಲ ಶಾಟ್ ಎಂದು ಬರೆದುಕೊಂಡು ಡಾರ್ಕ್ ಪಿಂಕ್ ಕಲರ್ ಸೀರೆ ಉಟ್ಟಿರುವ ಫೋಟೋವನ್ನು ಹಾಕಿದ್ದಾರೆ. ಹಿಂದೆ ಕೆಲ ಸಿನಿಮಾಗಳಲ್ಲಿ ಮಿಲನ …
Read More »