Breaking News

ಸಿನಿಮಾದಲ್ಲಿ ನಟಿಸಿದ ಬಿಎಸ್​ ಯಡಿಯೂರಪ್ಪ;

ಸಿನಿಮಾ ಮತ್ತು ರಾಜಕೀಯ ಕ್ಷೇತ್ರದ ನಡುವೆ ಮೊದಲಿನಿಂದಲೂ ನಂಟು ಇದೆ. ಚಿತ್ರರಂಗದಲ್ಲಿ ಮಿಂಚಿದ ಹಲವರು ರಾಜಕೀಯಕ್ಕೆ ಕಾಲಿಟ್ಟು ಸಾಧನೆ ಮಾಡಿದ್ದಾರೆ. ಅದೇ ರೀತಿ, ರಾಜಕೀಯದಲ್ಲಿ ಸಾಧನೆ ಮಾಡಿದ ಅನೇಕರು ನಂತರ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ ಉದಾಹರಣೆ ಇದೆ. ಈಗಿನದ್ದು ಬಿ.ಎಸ್. ಯಡಿಯೂರಪ್ಪ (BS Yediyurappa) ಅವರ ಸರದಿ. ಹೌದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕನ್ನಡದ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆ ಚಿತ್ರಕ್ಕೆ ‘ತನುಜಾ’ (Tanuja Kannada movie) ಎಂದು ಶೀರ್ಷಿಕೆ ಇಡಲಾಗಿದೆ. ಇದರ ಚಿತ್ರೀಕರಣ ಕೂಡ …

Read More »

ಗ್ರಾಮ ವಾಸ್ತವ್ಯಕ್ಕೆ ಅಪ್ಪಟ ರೈತನಂತೆ ಎತ್ತಿನ ಗಾಡಿಯಲ್ಲಿ ಹೊರಟ ಜಿಲ್ಲಾಧಿಕಾರಿ!

ಕಲಬುರಗಿ: ರಾಜ್ಯ ಕಂದಾಯ ಸಚಿವರು ಗ್ರಾಮೀಣ ಭಾಗದ ಜನರ ಸಮಸ್ಯೆ ಆಲಿಸಲು ಮತ್ತು ಸಮಸ್ಯೆ ಗೆ ಪರಿಹಾರ ಕಲ್ಪಿಸಲು ಪ್ರತಿ ತಿಂಗಳು ಜಿಲ್ಲಾಧಿಕಾರಿ, ತಹಶಿಲ್ದಾರರು ತಮ್ಮ ವ್ಯಾಪ್ತಿಯ ಒಂದು ಹಳ್ಳಿಗೆ ಭೇಟಿ ನೀಡಿ, ಅಲ್ಲಿಯೇ ಗ್ರಾಮ ವಾಸ್ತವ್ಯ ಮಾಡಲು‌ (jilhadhikari nade halli kade) ಸೂಚನೆ ನೀಡಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಕೆಲ ತಿಂಗಳಿಂದ ಬಂದಾಗಿದ್ದ ಗ್ರಾಮ ವಾಸ್ತವ್ಯ ಇಂದು ಮತ್ತೆ ಪ್ರಾರಂಭವಾಗಿದೆ. ಆದರೆ ಗ್ರಾಮ‌ ವಾಸ್ತ್ಯವ್ಯಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಅಪ್ಪಟ …

Read More »

ಮೊಬೈಲ್ ವಿಚಾರಕ್ಕೆ ಮನೆ ಬಿಟ್ಟು ಹೋಗಿದ್ದಾತ ಶವವಾಗಿ ಪತ್ತೆ;

ಬಳ್ಳಾರಿ: ಮೊಬೈಲ್(Mobile Phone) ವಿಚಾರಕ್ಕೆ ಮನೆ ಬಿಟ್ಟು ಹೋಗಿದ್ದಾತ ಶವವಾಗಿ(Dead Body) ಪತ್ತೆಯಾದ ಘಟನೆ ವಿಜಯನಗರದಲ್ಲಿ(Vijayanagara) ನಡೆದಿದೆ. ಬಡತನದ(Poverty) ಬೇಗೆಯಲ್ಲಿ ಬೇಯ್ತಿದ್ದ ಪೋಷಕರು ಮೊಬೈಲ್ ಕೊಡಿಸಲಾಗದೆ ಇದ್ದೊಬ್ಬ ಮಗನ ಬೇಡಿಕೆಯನ್ನ ಈಡೇರಿಸಲಾಗದೆ ಈಗ ಕಣ್ಣೀರಲ್ಲಿ ಕೈ ತೊಳಿಯುವಂತಾಗಿದೆ. ಮಗನನ್ನ ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ವಿಜಯನಗರದ ಕೊಟ್ಟೂರಿನ ಸನ್ನಿಧಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡ್ತಾ ಇದ್ದ ನಾಗರಾಜ್, ಮೊಬೈಲ್ ಕೊಡಿಸುವಂತೆ ಪೋಷಕರ ಬೆನ್ನು ಬಿದ್ದಿದ್ದ. ಮೊಬೈಲ್ ವಿಚಾರಕ್ಕೆ ಹಠ ಹಿಡಿದು …

Read More »

ವಿದ್ಯಾರ್ಥಿನಿ ಮೇಲೆ ನಾಲ್ವರು ಕಾಮುಕರಿಂದ ಸಾಮೂಹಿಕ ಅತ್ಯಾಚಾರ

ಕೋಲಾರ : ಕೋಲಾರದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, 9 ನೇ ತರಗತಿ ವಿದ್ಯಾರ್ಥಿನಿ ಮೇಲೆ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ. ಕೋಲಾರದಲ್ಲಿ 9 ನೇ ತರಗತಿ ವಿದ್ಯಾರ್ಥಿನಿಯನ್ನು ಅಪಹರಿಸಿ ನಾಲ್ವರು ಕಾಮುಕರು ಅತ್ಯಾಚಾರ ಎಸಗಿದ್ದು, ಸದ್ಯ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಇಂದು ಕೂಡ ಮುಂದುವರಿಯಲಿದೆ ಕಾಂಗ್ರೆಸ್‌ ನ ಅಹೋರಾತ್ರಿ ಧರಣಿ: ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಸಚಿವ ಕೆ.ಎಸ್.‌ ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧದಲ್ಲಿ ಕಾಂಗ್ರೆಸ್‌ ನಾಯಕರ ಅಹೋರಾತ್ರಿ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಗುರುವಾರದಿಂದ ಪ್ರಾರಂಭವಾದ ಈ ಧರಣಿ ಇಂದು ಕೂಡ ಮುಂದುವರಿಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.   ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಸೋಮವಾರ ರಾಜ್ಯಾದ್ಯಂತ ಎಲ್ಲಾ ತಾಲೂಕುಗಳಲ್ಲಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದರು. ಕಾಂಗ್ರೆಸ್‌ ನ …

Read More »

ಒಂದೇ ಒಂದು ಫೋಟೋಶೂಟ್‍ನಿಂದ ಬದಲಾದ ಕಾರ್ಮಿಕನ ಜೀವನ: ಛಾಯಾಗ್ರಾಹಕನ ಜೀವ ಉಳಿಸಿದ್ದ ಮಮ್ಮಿಕ್ಕ..!

ರಾತ್ರಿ, ಬೆಳಗಾಗೋದ್ರೊಳಗೆ ದಿನಗೂಲಿ ಕಾರ್ಮಿಕನಾಗಿದ್ದ ಕೇರಳದ ಮಮ್ಮಿಕ್ಕ ಮನೆ ಮಾತಾದ ಕಥೆ ನಿಮಗೆಲ್ಲರಿಗೂ ತಿಳಿದಿದೆ. ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದ 60ರ ಹರೆಯದ ಈತನಿಗೆ ಒಮ್ಮೆಲೇ ಅದೃಷ್ಟ ಲಕ್ಷ್ಮೀ ಒಲಿದಿರುವುದು ನಿಜಕ್ಕೂ ಸಂತೋಷದ ವಿಷಯ. ನೀವು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರೆ, ಮಮ್ಮಿಕ್ಕ ಅವರ ಲೇಟೆಸ್ಟ್ ಫೋಟೋಗಳ್ನು ಬಹುಶಃ ನೋಡಿರುತ್ತೀರಿ. ಅಂತರ್ಜಾಲದಲ್ಲಿ ಹೊಸ ಸೆನ್ಸೇಷನ್ ಸೃಷ್ಟಿಸಿದ್ದಾರೆ ಈ ಮಮ್ಮಿಕ್ಕ. ಛಾಯಾಗ್ರಾಹಕ ಅದ್ಯಾವ ಸಮಯದಲ್ಲಿ ಫೋಟೋ ಕ್ಲಿಕ್ಕಿಸಿದ್ರೋ ಗೊತ್ತಿಲ್ಲ, ಚಂಡಮಾರುತದಂತೆ ಫೋಟೋ ವೈರಲ್ …

Read More »

ಬೆಂಗಳೂರು ರಸ್ತೆಗೆ ‘ಪವರ್ ಸ್ಟಾರ್’ ಪುನೀತ್ ರಾಜಕುಮಾರ್ ಹೆಸರು

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮನಗಲಿದ್ರು ಅವರ ನಗು, ಅವರ ಒಳ್ಳೆಯತನ ಅವರು ಕನ್ನಡ ಸಿನಿ‌ ಲೋಕಕ್ಕೆ ನೀಡಿರುವ ಕೊಡುಗೆ ಎಂದೆಂದಿಗೂ ಜೀವಂತ. ಪುನೀತ್ ಕಾಲವಾದ ಮೇಲೆ ಪ್ರತಿ ಜಿಲ್ಲೆಯಲ್ಲೂ, ಪ್ರತಿ ತಾಲೂಕಿನಲ್ಲೂ ಒಂದು ರಸ್ತೆಗಾದರೂ ಅವರ ಹೆಸರನ್ನಿಟ್ಟು ಮರುನಾಮಕರಣ ಮಾಡಲಾಗ್ತಿದೆ.‌ ಪುನೀತ್ ಅವರ ಬೆಂಗಳೂರಿನ ಅಭಿಮಾನಿಗಳು ಸಹ ಇದೇ ಬಯಕೆ ವ್ಯಕ್ತಪಡಿಸಿದ್ದರು. ಬೆಂಗಳೂರಿನ ಪ್ರತಿಷ್ಟಿತ ರಸ್ತೆಯೊಂದಕ್ಕೆ ಪುನೀತ್ ಹೆಸರನ್ನ ಮರುನಾಮಕರಣ ಮಾಡಲು ಮನವಿ ಮಾಡಿದ್ದರು. ಈ ಕಾರ್ಯಕ್ಕೆ ಬಿಬಿಎಂಪಿ …

Read More »

ಮುಂಬೈನಲ್ಲಿ ಐಷಾರಾಮಿ ಫ್ಲಾಟ್ ಖರೀದಿಸಿದ ನಟಿ ಕಾಜೋಲ್​​..! ಈ ಬಂಗಲೆಯ ಬೆಲೆ ಎಷ್ಟು ಗೊತ್ತಾ.?

ಬಾಲಿವುಡ್​ ನಟಿ ಕಾಜೋಲ್​​ ಮುಂಬೈನಲ್ಲಿರುವ ತನ್ನ ಆಸ್ತಿಯ ಲಿಸ್ಟ್​ಗೆ ಮತ್ತೊಂದು ಅದ್ಧೂರಿ ಫ್ಲಾಟ್​ಗಳನ್ನು ಸೇರ್ಪಡೆ ಮಾಡಿದ್ದಾರೆ. ಜುಹುದಲ್ಲಿರುವ ಶಿವಶಕ್ತಿ ಬಂಗಲೆಯ ಮಾಲೀಕೆಯಾಗಿರುವ ಕಾಜೋಲ್​ ಇದೀಗ ಇದೇ ಬಂಗಲೆಯ ಸಮೀಪದಲ್ಲಿಯೇ ಮತ್ತೆರಡು ಫ್ಲಾಟ್​ಗಳನ್ನು ಖರೀದಿ ಮಾಡಿದ್ದಾರೆ.   ಈ ಅದ್ದೂರಿ ಅಪಾರ್ಟ್​ಮೆಂಟ್​ಗಳನ್ನು ಖರೀದಿಸಲು ನಟಿ ಕಾಜೋಲ್​ 11.95 ಕೋಟಿ ರೂಪಾಯಿಗಳನ್ನು ವ್ಯಯಿಸಿದ್ದಾರೆ ಎನ್ನಲಾಗಿದೆ. ಈ ಫ್ಲಾಟ್​ಗಳು ಕಟ್ಟಡದ 10ನೇ ಮಹಡಿಯಲ್ಲಿದೆ ಎನ್ನಲಾಗಿದೆ. ನಟಿ ಕಾಜಲ್​ ಈ ಬಗ್ಗೆ ಯಾವುದೇ ಖಚಿತ ಮಾಹಿತಿಯನ್ನು …

Read More »

ನಾವು ನಿಮ್ಮ ಅಪ್ಪ – ಬಿಜೆಪಿ ಬೆದರಿಕೆಗೆ ಶಿವಸೇನೆ ತಿರುಗೇಟು

ಮುಂಬೈ: ಠಾಕ್ರೆ ಕುಟುಂಬ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಬೆದರಿಕೆ ಹಾಕಿರುವ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ನಾರಾಯಣ ರಾಣೆಗೆ ಶಿವಸೇನೆ ಸಂಸದ ಸಂಜಯ್‌ ರಾವತ್‌ ತಿರುಗೇಟು ನೀಡಿದ್ದಾರೆ. ಬೆದರಿಕೆ ಒಡ್ಡುವುದನ್ನು ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಕೇಂದ್ರ ಸಚಿವರಾಗಿರಬಹುದು ಆದರೆ ಇದು ಮಹಾರಾಷ್ಟ್ರ. ಈ ವಿಚಾರವನ್ನು ಮರೆಯಬೇಡಿ. ನಾವು ನಿಮ್ಮ ತಂದೆ. ಇದರ ಅರ್ಥವೇನೆಂದು ನಿಮಗೆ ಚೆನ್ನಾಗಿ ತಿಳಿದಿದೆ ಎಂದು ರಾವತ್‌ ವಾಗ್ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ …

Read More »

ಕಾಂಗ್ರೆಸ್‍ನ ಮತ ಬ್ಯಾಂಕ್, ಬಿಜೆಪಿ ಧರ್ಮಾಂಧತೆಯಿಂದ ಶಿಕ್ಷಣ ವ್ಯವಸ್ಥೆ ಹಾಳು

ಮೈಸೂರು: ಒಂದು ಕಡೆ ಕಾಂಗ್ರೆಸ್ ಮತ ಬ್ಯಾಂಕ್ ಲೆಕ್ಕ, ಇನ್ನೊಂದು ಕಡೆ ಬಿಜೆಪಿಯ ಕೆಲವರ ಧರ್ಮಾಂಧತೆಯಿಂದ ಶಿಕ್ಷಣ ವ್ಯವಸ್ಥೆ ಕೆಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣಕ್ಕಿಂತ ಹಿಜಬ್ ಮುಖ್ಯ ಎಂದು ಒಬ್ಬ ವಿದ್ಯಾರ್ಥಿನಿ ಹೇಳುತ್ತಾಳೆ. ವಿದ್ಯಾರ್ಥಿನಿಯನ್ನು ಆ ರೀತಿ ಮಾತಾಡುವಂತೆ ಕಾಂಗ್ರೆಸ್ ಟ್ಯೂನ್ ಮಾಡುತ್ತಿದೆ. ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್‍ಗಾಗಿ ಮನಸ್ಸು ಕೆಡಿಸುತ್ತಿದೆ. ಶಿಕ್ಷಣಕ್ಕಿಂತ ಹಿಜಬ್ ಮುಖ್ಯ ಎಂದು ಕಾಂಗ್ರೆಸ್ ಮಕ್ಕಳಿಗೆ …

Read More »