ನೀವು ನಮ್ಮನ್ನು ಅಗಲಿ ಹತ್ತು ವರ್ಷ ಕಳೆದರೂ ನಿಮ್ಮ ನೆನಪು ನಮ್ಮಲ್ಲಿ ಸದಾ ಜೀವಂತ: ಸಂತೋಷ್ ಜಾರಕಿಹೊಳಿ ಗೋಕಾಕ್: ಗೋಕಾಕ ನಗರದ ಪ್ರತಿಷ್ಠಿತ ಮನೆತನ ಜಾರಕಿಹೊಳಿ ಕುಟುಂಬದಲ್ಲಿ ಇಂದು ದುಃಖ ಹಾಗೂ ಸಂತೋಷ್ ಎರಡರ ಸಂಭ್ರಮಾಚರಣೆ ಒಂದುಕಡೆ ಹಿರಿಯ ಜೀವಗಳು ಅಗಲಿ, ಹತ್ತು ವರ್ಷ ಕಳೆದಿವೆ ಎಂಬ ನೋವು ಆದ್ರೆ , ಇನ್ನೊಂದು ಕಡೆ ಅವರ್ ನೆನಪು ಸದಾ ನಮ್ಮ ಮನದಲ್ಲಿ ಹಚ್ಚ ಹಸಿರು ಆಗಿವೆ ಎಂಬ ನೆನಪು ಇವೆ …
Read More »ಜಿಲ್ಲೆಗಳಲ್ಲೂ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ರೆ ವಿದ್ಯಾಗಮ ಯೋಜನೆ ಜಾರಿ
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ವಿದ್ಯಾಗಮ ಯೋಜನೆಯ ಮೊರೆಹೋಗಿದೆ. ರಾಜ್ಯದಲ್ಲಿ ಶಾಲೆಗಳಿಗೆ ರಜೆ ನೀಡಿದರೆ ವಿದ್ಯಾಗಮ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ. ಯೋಜನೆಯ ಜಾರಿಗೆ ರೂಪುರೇಷೆ ಸಿದ್ದಪಡಿಸಲಾಗುತ್ತಿದೆ. ಈಗಾಗಲೇ ಬೆಂಗಳೂರು ಮಹಾನಗರದಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಜಿಲ್ಲೆಗಳಲ್ಲಿಯೂ ಕೊರೋನಾ ಸೋಂಕು ಹೆಚ್ಚಾಗಿ ರಜೆ ಘೋಷಣೆ ಮಾಡಿದರೆ ವಿದ್ಯಾಗಮ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಈ ಕುರಿತಾಗಿ ಶಿಕ್ಷಣ ಇಲಾಖೆ ಕ್ರಮಕೈಗೊಂಡಿದ್ದು, ಎಲ್ಲ ಜಿಲ್ಲಾ ಬಿಇಒ ಮತ್ತು ನಿರ್ದೇಶಕರಿಗೆ ಈ ಕುರಿತು ಸೂಚನೆ ನೀಡಲಾಗಿದೆ. …
Read More »ಗಣರಾಜ್ಯೋತ್ಸವಕ್ಕೂ ಮುನ್ನ ಉಗ್ರರ ದಾಳಿ ಸಾಧ್ಯತೆ; ಭದ್ರತಾ ಪಡೆಗಳಿಂದ ಹೈ ಅಲರ್ಟ್ ಘೋಷಣೆ
ಉಗ್ರರ ದಾಳಿಯ ಭೀತಿಯ ಹಿನ್ನೆಲೆಯಲ್ಲಿ ಭಾರತೀಯ ಭದ್ರತಾ ಪಡೆ ವಿಧಾನಸಭಾ ಚುನಾವಣೆಗೆ ಒಳಪಡುವ 5 ರಾಜ್ಯಗಳಲ್ಲಿ ನಿಯೋಜಿಸಲಾದ ಅಧಿಕಾರಿಗಳು ಮತ್ತು ಪಡೆಗಳಿಗೆ ಹೆಚ್ಚಿನ ಎಚ್ಚರಿಕೆ ವಹಿಸಲು ಸೂಚಿಸಿದೆ.ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಭಾರತದ ಇತರ ಭಾಗಗಳಲ್ಲಿ ಗಣರಾಜ್ಯೋತ್ಸವದ (ಜ. 26) ಮೊದಲು ಶಂಕಿತ ಭಯೋತ್ಪಾದನಾ ದಾಳಿಯ ಕುರಿತು ಶುಕ್ರವಾರ ಅನೇಕ ಏಜೆನ್ಸಿಗಳಿಂದ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಭದ್ರತಾ ಏಜೆನ್ಸಿಗಳು ದೇಶಾದ್ಯಂತ ಹೆಚ್ಚಿನ ಅಲರ್ಟ್ ಘೋಷಿಸಿವೆ. ಉಗ್ರರ ದಾಳಿಯ …
Read More »ನಿಮ್ಮ ಮೊಬೈಲ್ ಗೂ ಬಂದಿದೆಯಾ ಈ ಮೆಸೇಜ್..? ಹಾಗಿದ್ರೆ ಹುಶಾರ್.!
ದೇಶದಲ್ಲಿ ಆನ್ಲೈನ್ ವಂಚಕರ ಬಳಗ ದಿನೇ ದಿನೇ ಹೊಸ ತಂತ್ರಗಳನ್ನು ತಮ್ಮ ಕಸುಬಿಗೆ ಅಳವಡಿಸಿಕೊಳ್ಳುವ ಮೂಲಕ ಜನಸಾಮಾನ್ಯರ ದುಡ್ಡು ಕೊಳ್ಳೆ ಹೊಡೆಯುತ್ತಿದ್ದಾರೆ. ಇದೇ ವೇಳೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೀಗೆ ವಂಚನೆ ಎಸಗುವವರ ಕಾಟವೂ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ನೀವು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಗ್ರಾಹಕರಾಗಿದ್ದು, “Dear A/c Holder Your SBI Bank Documents has expired A/c will be Blocked. Update Your …
Read More »ವಿಟ್ಲ: ಕೊರಗಜ್ಜನ ವೇಷ ಧರಿಸಿ ಕುಣಿದ ಮುಸ್ಲಿಂ ಮದುಮಗ: ಪ್ರಕರಣ ದಾಖಲಿಸಿದ ಪೊಲೀಸರು
ವಿಟ್ಲ: ಮುಸ್ಲಿಂ ಮದುಮಗನೊಬ್ಬ ತನ್ನ ಮದುವೆಯ ಸಂದರ್ಭದಲ್ಲಿ ಕೊರಗಜ್ಜನ ವೇಷ ಹಾಕಿ ಕುಣಿದಿದ್ದು ಈ ಸಂಬಂಧ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೊಳ್ನಾಡು ಗ್ರಾಮದ ಅಝೀಝ್ ಅವರ ಪುತ್ರಿಯ ಜೊತೆ ಮಂಜೇಶ್ವರ ತಾಲೂಕಿನ ಉಪ್ಪಳದ ಉಮರುಲ್ಲಾ ಬಶೀತ್ ನ ಮದುವೆ ನಿಶ್ಚಿಯವಾಗಿತ್ತು. ಇಂದು ಮಧ್ಯಾಹ್ನ ಇಬ್ಬರ ವಿವಾಹ ನಡೆದಿತ್ತು. ಇನ್ನು ಕಳೆದ ರಾತ್ರಿ ವರನ ಕಡೆಯವರು ವಧುವಿನ ಮನೆಗೆ ಬರುವ ಸಂದರ್ಭದಲ್ಲಿ ವರ ತುಳುನಾಡಿನ ಆರಾಧ್ಯ ದೈವವಾದ ಕೊರಗಜ್ಜನ ವೇಷ ಧರಿಸಿ …
Read More »ಮೇಕೆದಾಟು ಪಾದಯಾತ್ರೆ ರಾಜಕೀಯ ಗಿಮಿಕ್; ಅಧಿಕಾರದಲ್ಲಿದ್ದಾಗ ನಿದ್ದೆ ಮಾಡಿದ್ದ ಕಾಂಗ್ರೆಸ್ ಈಗ ಎಚ್ಚೆತ್ತುಕೊಂಡಿದೆ; ಟಾಂಗ್ ನೀಡಿದ ಸಚಿವ ಕಾರಜೋಳ
ಚಿತ್ರದುರ್ಗ: ಕಾಂಗ್ರೆಸ್ ಪಾದಯಾತ್ರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಪ್ರಾಣಹೋದರೂ ಪಾದಯಾತ್ರೆ ಬಿಡಲ್ಲ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಟಾಂಗ್ ನೀಡಿರುವ ಸಚಿವ ಗೋವಿಂದ ಕಾರಜೋಳ, ಎಲ್ಲರಿಗೂ ಹೋರಾಟ ಮಾಡುವ ಹಕ್ಕಿದೆ, ಅದಕ್ಕಾಗಿ ಪ್ರಾಣ ಕಳೆದುಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಸಚಿವ ಕಾರಜೋಳ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನೀರಾವರಿ ಯೋಜನೆಗೆ ಏನೂ ಮಾಡದೇ ಗಡದ್ ಆಗಿ ನಿದ್ದೆಗೆ ಜಾರಿತ್ತು. ಈಗ ಎಚ್ಚೆತ್ತುಕೊಂಡು ಪಾದಯಾತ್ರೆ ನಾಟಕವಾಡುತ್ತಿದೆ. ಒಮಿಕ್ರಾನ್, ಕೋವಿಡ್ ಪ್ರಕರಣಗಳು …
Read More »ಪ್ರಯಾಣಿಕರಿಗಿಂತ ಹೆಚ್ಚು ನಾಯಿಗಳೇ ಕಾಣಿಸುತ್ತಿವೆ ಬೆಳಗಾವಿ ಕೇಂದ್ರ ಬಸ್ನಿಲ್ದಾಣದಲ್ಲಿ
ಬೆಳಗಾವಿ ಕೇಂದ್ರ ಬಸ್ನಿಲ್ದಾಣದಲ್ಲಿ ಪ್ರಯಾಣಿಕರಿಗಿಂತ ಹೆಚ್ಚು ನಾಯಿಗಳೇ ಕಾಣಿಸುತ್ತಿವೆ. ಇದರಿಂದ ಪ್ರಯಾಣಿಕರು ಪ್ರತಿನಿತ್ಯ ನಾಯಿಗಳ ಭೀತಿಯಲ್ಲಿಯೇ ಓಡಾಡುವ ದುಸ್ಥಿತಿ ಅನುಭವಿಸುತ್ತಿದ್ದಾರೆ. ಹೌದು ಹಿಂಡು-ಹಿಂಡು ನಾಯಿಗಳು, ಒಂದಲ್ಲ, ಎರಡಲ್ಲ. 50ಕ್ಕೂ ಹೆಚ್ಚು ನಾಯಿಗಳ ದಂಡು ಬೆಳಗಾವಿ ಕೇಂದ್ರ ಬಸ್ನಿಲ್ದಾಣದಲ್ಲಿ ಬಿಡು ಬಿಟ್ಟಿದೆ. ಇಲ್ಲಿ ಪ್ರಯಾಣಿಕರಿಗಿಂತ ಹೆಚ್ಚಾಗಿ ನಾಯಿಗಳೇ ಕಾಣಿಸುತ್ತಿವೆ. ಇದೇನು ಜನರ ಬಸ್ಸ್ಟಾಂಡೋ ಅಥವಾ ನಾಯಿಗಳ ಬಸ್ಸ್ಟಾಂಡೋ ಎಂಬ ಅನುಮಾನ ಮೂಡುವಂತಾಗಿದೆ. ಪ್ರತಿನಿತ್ಯ ವೃದ್ಧರು, ಚಿಕ್ಕಮಕ್ಕಳು, ಮಹಿಳೆಯರು ಬಸ್ಸ್ಟಾಂಡ್ಗೆ ಬರುತ್ತಾರೆ, ಈ …
Read More »ಪ್ರಧಾನಿ ಮೋದಿ ಸಮಸ್ಯೆ ಅನುಭವಿಸಿದ್ದು ಕೇವಲ 15 ನಿಮಿಷಗಳಷ್ಟೇ, ರೈತರು ಒಂದು ವರ್ಷ ಪ್ರತಿಭಟಿಸಿದ್ದರು: ಸಿಧು ವ್ಯಂಗ್ಯ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೇವಲ 15 ನಿಮಿಷ ಸಮಸ್ಯೆ ಎದುರಿಸಿದ್ದರು. ಆದರೆ, ರೈತರು ಒಂದು ವರ್ಷ ಪ್ರತಿಭಟಿಸಿದ್ದರು ಎಂದು ಪಂಜಾಬ್ ರಾಜ್ಯದ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಶುಕ್ರವಾರ ವ್ಯಂಗ್ಯವಾಡಿದ್ದಾರೆ. ಪ್ರಧಾನಿ ಮೋದಿ ಭದ್ರತಾ ಲೋಪ ವಿಚಾರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪ್ರಧಾನ ಮಂತ್ರಿ ಸಾಹೇಬರ ಬಳಿ ಕೇಳು ಬಯಸುತ್ತಿದ್ದೇನೆ. ನಮ್ಮ ರೈತ ಸಹೋದರರು ದೆಹಲಿ ಗಡಿಯಲ್ಲಿ ಒಂದು ವರ್ಷದಿಂದ ಪ್ರತಿಭಟನೆ …
Read More »ಟಿವಿ ನೋಡಲು ಬಂದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ಆರೋಪಿಯ ಬಂಧನ
ಮಂಗಳೂರು: ನಗರದ ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟಿವಿ ನೋಡಲು ಬಂದ ಅಪ್ರಾಪ್ತೆಯ ಮೇಲೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯ ಬಂಧನ. ಶಾಲೆ ಮುಗಿಸಿ ಟಿವಿ ನೋಡಲು ಮನೆಗೆ ಬಂದಿದ್ದ ಬಾಲಕಿಯ ಮೇಲೆ ನಿತೇಶ್ ರಿತಿನ್ (19) ಲೈಂಗಿಕ ಕಿರುಕುಳ ನೀಡಿದ್ದಾನೆ.ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಸಾಯಿಸುವುದಾಗಿ ಜೀವ ಬೆದರಿಕೆಯನ್ನು ಇಟ್ಟಿದ್ದಾನೆ ಎಂದು ತಿಳಿದುಬಂದಿದೆ.ಪ್ರಕರಣವನ್ನು ಐಪಿಸಿ ಸೆಕ್ಷನ್ 354 447 506 ಹಾಗೂ ಪೋಕ್ಸೋ ಕಾಯಿದೆಯ ಅಡಿಯಲ್ಲಿ ದಾಖಲು ಮಾಡಲಾಗಿದೆ.
Read More »ಜ್ಯೋತಿಷ್ಯ ಮಾತು ಕೇಳಿ ಮಗಳನ್ನು ಕೊಂದು ನೇಣಿಗೆ ಶರಣಾದ ತಾಯಿ!
ಕೊಯಮತ್ತೂರು: ಜಿಲ್ಲೆಯಲ್ಲಿ ತಾಯಿ-ಮಗಳು ಸಾವಿನ ಸುದ್ದಿ ಸಂಚಲನ ಮೂಡಿಸುತ್ತಿದೆ. ಜ್ಯೋತಿಷಿಯೊಬ್ಬರ ಮಾತು ಕೇಳಿ ತಾಯಿಯೊಬ್ಬಳು ತನ್ನ ಮಗಳನ್ನು ಕೊಲೆ ಮಾಡಿದಲ್ಲದೇ ತಾನೂ ಸಹಿತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಡಿಯಲೂರ್ ಪಕ್ಕದಲ್ಲಿರುವ ಅಪ್ಪನಾಯಕನಪಾಳ್ಯಂ ನಡೆದಿದೆ. ಘಟನೆಯ ವಿವರ: ಅಪ್ಪನಾಯಕನಪಾಳ್ಯಂ ನಿವಾಸಿ ಧನಲಕ್ಷ್ಮಿ (58) ತನ್ನ ಅಂಗವಿಕಲ ಮಗಳು ಸುಗನ್ಯಾ (30) ಜೊತೆ ವಾಸವಿದ್ದಾರೆ. ಇವರ ಪುತ್ರ ಶಶಿಕುಮಾರ್ಗೆ ಮದುವೆಯಾಗಿದ್ದು, ಸರವಣಂಪಟ್ಟಿಯಲ್ಲಿ ವಾಸಿಸುತ್ತಿದ್ದಾರೆ. ಆದರೆ ಧನಲಕ್ಷ್ಮಿ ಜ್ಯೋತಿಷಿ ಮಾತುಗಳನ್ನು ಹೆಚ್ಚಾಗಿ ನಂಬುತ್ತಿದ್ದರು. ಈ ಕ್ರಮದಲ್ಲಿ ಧನಲಕ್ಷ್ಮಿ …
Read More »