Breaking News

ಪ್ರಧಾನಿ ಮೋದಿಯವರನ್ನ ಗೇಲಿ‌ ಮಾಡಿದ ಕಾರ್ಯಕ್ರಮ ಪ್ರಸಾರ; ಖಾಸಗಿ ವಾಹಿನಿಗೆ ಕೇಂದ್ರದ ನೋಟೀಸ್

ತಮಿಳುನಾಡಿನ ಬಿಜೆಪಿ ರಾಜ್ಯ ಐಟಿ ಮತ್ತು ಸಾಮಾಜಿಕ ಮಾಧ್ಯಮ ಸೆಲ್‌ನ ಅಧ್ಯಕ್ಷ ನಿರ್ಮಲ್ ಕುಮಾರ್ ಅವರು ಸಲ್ಲಿಸಿದ ದೂರಿನ ಕುರಿತು ಪ್ರತಿಕ್ರಿಯೆ ಕೋರಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್‌ಗೆ ನೋಟಿಸ್ ಜಾರಿ ಮಾಡಿದೆ‌. ಇತ್ತೀಚೆಗೆ ತಮಿಳು ರಿಯಾಲಿಟಿ ಶೋ ಒಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅಸಹ್ಯಕರ ಕಾಮೆಂಟ್‌ಗಳನ್ನು ಮಾಡಲಾಗಿದೆ ಎಂದು ಆರೋಪಿಸಿ ದೂರು ದಾಖಲಾಗಿತ್ತು. ಝೀ ತಮಿಳು ಟಿವಿ ಚಾನೆಲ್ ನಲ್ಲಿ ಜನವರಿ …

Read More »

ಒಂದೇ ಸೂರಿನಡಿ ವಿವಿಧ ಸೇವೆಗಳನ್ನು ಒದಗಿಸುವ ‘ಗ್ರಾಮ ಒನ್’ ಯೋಜನೆಯು ಜ. 26 ರಿಂದ 12 ಜಿಲ್ಲೆಗಳಲ್ಲಿ ಪ್ರಾರಂಭ

: ಬೆಂಗಳೂರು: ಗ್ರಾಮ ಮಟ್ಟದಲ್ಲಿ ಒಂದೇ ಸೂರಿನಡಿ ವಿವಿಧ ಸೇವೆಗಳನ್ನು ಒದಗಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ‘ಗ್ರಾಮ ಒನ್’ ಯೋಜನೆಯು ಜ. 26 ರಿಂದ 12 ಜಿಲ್ಲೆಗಳಲ್ಲಿ ಪ್ರಾರಂಭವಾಗಲಿದ್ದು, ಈ ಉದ್ದೇಶಕ್ಕಾಗಿ ಸುಮಾರು 3,000 ‘ಗ್ರಾಮ ಒನ್’ ಸೇವಾ ಕೇಂದ್ರಗಳನ್ನು ತೆರೆಯಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಹೇಳಿದ್ದಾರೆ.   ಈ ಯೋಜನೆಯ ಕುರಿತಂತೆ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ವರ್ಚುವಲ್ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಅವರು, …

Read More »

ಬೆಳಗಾವಿ ಮಹಾನಗರ ಚುನಾವಣೆ ಸೇಡು ಇವಾಗ ಮುತ್ತ್ಯಾ ನಟ್ಟಿ ಗ್ರಾಮದಲ್ಲಿ ಮಾರಾ ಮಾರಿ, ಹಾಫ್ ಮರ್ಡರ್ ಆಗಿದೆ ಎಂದು ಸ್ಥಳೀಯರ ಆರೋಪ

ಬೆಳಗಾವಿ ಮಹಾನಗರ ಚುನಾವಣೆ ಸೇಡು ಇವಾಗ ಮುತ್ತ್ಯಾ ನಟ್ಟಿ ಗ್ರಾಮದಲ್ಲಿ ಮಾರಾ ಮಾರಿ, ಹಾಫ್ ಮರ್ಡರ್ ಆಗಿದೆ ಎಂದು ಸ್ಥಳೀಯರ ಆರೋಪ..? ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ನಡೆದು ನಾಲ್ಕೈದು ತಿಂಗಳು ಆದರೂ ಅದರ ದ್ವೇಷ ಮಾತ್ರ ಇನ್ನು ಕಮ್ಮಿ ಆಗಿಲ್ಲ ಹೌದು ಇಂದು ಬೆಳಗಾವಿಯ ಹತ್ತಿರದ ಮುತ್ಯಾನಟ್ಟಿ ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯೆ ಮರಾ ಮಾರಿ ಆಗಿದೆ ಲಕ್ಷ್ಮಣ್ ದಡ್ಡಿ ಹಾಗೂ ಅವರ್ ಸಂಗಡಿಗರು ಕಟಾಂಬಳಿ ಬೆಳಗಾವಿ ಮಹಾನಗರ …

Read More »

ಬೆಳಗಾವಿ ಇಂದಿನ ಕೊರೋನಾ

ಬೆಳಗಾವಿ- ಇಂದು ಜಿಲ್ಲೆಯಲ್ಲಿ 418 ಪ್ರಕರಣಗಳು ಕಂಡು ಬಂದಿವೆ. ಅಥಣಿ 33, ಚಿಕ್ಕೋಡಿ 29, ಸವದತ್ತಿ 33 ಪ್ರಕರಣಗಳು ಕಂಡು ಬಂದಿವೆ.

Read More »

ಸುಭಾಷ್ ಚಂದ್ರ ಭೋಸ್ ಜನ್ಮ ದಿನ ಆಚರಣೆ ಸಿಎಂ ಬಸವರಾಜ ಬೊಮ್ಮಾಯಿ ವರ್ಚವಲ್ ಸಭೆ

ಜನೇವರಿ ೨೩ರಂದು ಜರುಗಲಿರುವ ಸುಭಾಷ್ ಚಂದ್ರ ಭೋಸ್ ಅವರ ಜನ್ಮ ದಿನಾಚರಣೆಯನ್ನು ವಿನೂತನವಾಗಿ ಆಚರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಂಗಳವಾರ ತಮ್ಮ ನಿವಾಸದಿಂದ ವೆಬ್ ನೆರ್ ಮೂಲಕ ಹಿರಿಯ ಅಧಿಕಾರ ಸಭೆ ಜರುಗಿಸಿದರು.ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ, ಕರ್ನಾಟಕ ಮತ್ತು ಗೋವಾ ಎನ್.ಸಿ.ಸಿ. ನಿರ್ದೇಶನಾಲಯದ ಅಧಿಕಾರಿ ಎ.ಆರ್ ಕಮಾಂಡರ ಬಿ.ಎಸ್. ಕನ್ವರ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ಗೋಯೆಲ್, ಜಿ.ಕುಮಾರ ನಾಯ್ಕ್, …

Read More »

ಮಹದಾಯಿ ಹೋರಾಟ ಪಕ್ಷದ ನಾಯಕರೊಂದಿಗೆ ಚರ್ಚಿಸಿ ನಿರ್ಧಾರ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

ಪಾಲಿಕೆಯಲ್ಲಿ ಅಭಯ ಪಾಟೀಲ ಮೇಯರ್, ಅನೀಲ ಬೆನಕೆ ಡೆಪ್ಯುಟಿ ಮೇಯರ್ ಸತೀಶ್ ಜಾರಕಿಹೊಳಿ ಲೇವಡಿ….   ಬೆಳಗಾವಿ: ಕೋವಿಡ್‌ ಕಡಿಮೆಯಾದ ಮೇಲೆ ಮುಂದಿನ ದಿನಗಳಲ್ಲಿ ಮೇಕೆದಾಟು ಹೋರಾಟದ ಮಾದರಿಯಲ್ಲಿಯೇ ಮಹದಾಯಿ ಹೋರಾಟ ನಡೆಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಹೇಳಿದರು. ನಗರದ ಕಾಂಗ್ರೆಸ್‌ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹದಾಯಿ ಹೋರಾಟ ಎಲ್ಲಿಂದ ಆರಂಭ ಮಾಡಬೇಕೆಂಬುವುದನ್ನು ನಮ್ಮ ಪಕ್ಷದ ನಾಯಕರೊಂದಿಗೆ ಚರ್ಚಿಸಿ, ರೂಪರೇಷೆ ತಯಾರಿಸಿ ನಂತರ ನಿರ್ಧಾರ …

Read More »

ಗೋವಾದ ಕಾರಂಜೋಲ್‌ ಬಳಿ ವಾಸ್ಕೋ-ಡಿ-ಗಾಮಾ ಹೌರಾ ಅಮರಾವತಿ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿರುವ ಘಟನೆ ನಡೆದಿದೆ.

ಕಾರಂಜೋಲ್‌(ಗೋವಾ): ವಾಸ್ಕೋ-ಡಿ-ಗಾಮಾ ಹೌರಾ ಅಮರಾವತಿ ಎಕ್ಸ್‌ಪ್ರೆಸ್ ರೈಲು ದೂಧ್‌ಸಾಗರ್ ಮತ್ತು ಕಾರಂಜೋಲ್ ನಡುವೆ (ಗೋವಾ) ಹಳಿತಪ್ಪಿರುವ ಘಟನೆ ನಡೆದಿದೆ. ಇಂದು ಬೆಳಗ್ಗೆ 8.56 ಕ್ಕೆ ಸುಮಾರು ಈ ಘಟನೆ ನಡೆದಿದ್ದು, ರೈಲಿನ ಇಂಜಿನ್‌ನ ಮುಂಭಾಗದ ಜೋಡಿ ಚಕ್ರಗಳು ಹಳಿತಪ್ಪಿವೆ. ರೈಲಿನಲ್ಲಿದ್ದ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More »

ಗಲಾಟೆ ಮಾಡಿ ಕರ್ನಾಟಕ ಪ್ರವೇಶ ಮಾಡುತ್ತಿರುವ ಪ್ರಯಾಣಿಕರು

ಕಲಬುರಗಿ: : ಕೊರೊನಾ ಹೆಚ್ಚಳವಾದ ಹಿನ್ನೆಲೆ ಮಹಾರಾಷ್ಟ್ರ- ಕರ್ನಾಟಕ ಗಡಿಗಳಲ್ಲಿ ಜಿಲ್ಲಾಡಳಿತ ಬಿಗಿ ಭದ್ರತೆ ಕೈಗೊಂಡಿದ್ದು, ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರು ಕರ್ನಾಟಕ ಪ್ರವೇಶ ನೀಡುವಂತೆ ಚೆಕ್ ಪೋಸ್ಟ್​ಗಳಲ್ಲಿ ಗಲಾಟೆ ಮಾಡುತ್ತಿದ್ದಾರೆ‌. ಕಲಬುರಗಿ ಜಿಲ್ಲೆಯ ಗಡಿಗಳಲ್ಲಿ ಜಿಲ್ಲಾಡಳಿತ ಬಿಗಿ ಭದ್ರತೆ ಕೈಗೊಂಡಿದೆ. ಅಫಜಲಪೂರ ತಾಲೂಕಿನ ಬಳ್ಳೂರಗಿ ಚೆಕ್ ಪೋಸ್ಟ್​ನಲ್ಲಿ ಮಹಾರಾಷ್ಟ್ರದ ಪ್ರಯಾಣಿಕರು ಗಲಾಟೆ ಮಾಡುತ್ತಿದ್ದಾರೆ ಎಂದು ಪೊಲೀಸ್​ ಸಿಬ್ಬಂದಿ ಆರೋಪಿಸುತ್ತಿದ್ದಾರೆ. ಆರ್​ಟಿಪಿಸಿಆರ್ ವರದಿ ಇಲ್ಲದಿದ್ರು ಜಿಲ್ಲೆಗೆ ಪ್ರವೇಶ ನೀಡುವಂತೆ ಪೊಲೀಸರು ಹಾಗೂ …

Read More »

ವರಿಷ್ಠರು ಜವಾಬ್ದಾರಿ ನೀಡಿದರೆ ನಿಭಾಯಿಸುವೆ : ಮಹೇಶ್ ಕುಮಠಳ್ಳಿ

ಪಕ್ಷದ ವರಿಷ್ಟರು ನನಗೆ ಯಾವುದೇ ಜವಾಬ್ದಾರಿಯನ್ನು ವಹಿಸಿದರೂ ನಾನು ನಿಭಯಿಸಲು ಸಿದ್ಧನಿದ್ದೇನೆ ಎಂದು ಶಾಸಕ ಮಹೇಶ್ ಕುಮಠಳ್ಳಿ ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ತಮ್ಮ ಮನದ ಆಶಯವನ್ನು ಬಿಚ್ಚಿಟ್ಟಿದ್ದಾರೆ. ಚಿಕ್ಕೋಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಮಹೇಶ್ ಕುಮಠಳ್ಳಿ, ಪಕ್ಷದಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರು ಯಾವುದೇ ಜವಾಬ್ದಾರಿಯನ್ನು ನೀಡಿದರೂ ನಾನು ನಿಭಾಯಿಸಲು ಸಿದ್ಧನಿದ್ದೇನೆ. ಹಾಗಂತ ನಾನೇನೂ ಒತ್ತಾಯ ಮಾಡುವುದಿಲ್ಲ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ, …

Read More »

ಚಪ್ಪಲಿ ಹಾಕಿ ಪೂಜೆ ಮಾಡಿದ ಅರಣ್ಯ ಸಚಿವ ಉಮೇಶ್ ಕತ್ತಿ

ಕರ್ನಾಟಕದಲ್ಲಿ ಹಿಂದುತ್ವದ ಹೆಸರಿನ ಮೇಲೆ ಬಿಜೆಪಿ ಸರಕಾರ ಬಂದಿದೆ. ಆದರೆ ಅದೆ ಸರಕಾರದಲ್ಲಿ ಸಚಿವ ಸ್ಥಾನ ಪಡೆದವರಿಗೆ ಹಿಂದುತ್ವದ ಅರಿವೆ ಇಲ್ಲವೋ ಅಥವಾ ಸಚಿವರಾದ ಮೇಲೆ ಪೂಜೆ ಮಾಡುವಾಗ ತಾವು ಹಾಕಿಕೊಂಡ ಚಪ್ಪಲಿ ತೆಗೆಯಬಾರದೆಂಬ ನಿಯಮ ಇದೆಯೋ ಗೊತ್ತಿಲ್ಲ, ಗೋಕಾಕದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣಕ್ಕಾಗಿ ಶಂಕು ಸ್ಥಾಪನೆಗೆ ಆಗಮಿಸಿದ ಅರಣ್ಯ ಸಚಿವ ಉಮೇಶ ಕತ್ತಿಯವರಿಗೆ ಯಾವುದಾದರೂ ಪೂಜೆ ಮಾಡಬೇಕಾದರೆ ಮಾನವಿಯತೆ ದೃಷ್ಯಿಯಿಂದಾದರೂ ತಾವು ಧರಿಸಿದ ಚಪ್ಪಲಿ …

Read More »