Breaking News

P.S.I. ಹಗರಣ: ಧಾರವಾಡದ ಪ್ರಮುಖ ಕೋಚಿಂಗ್ ಸೆಂಟರ್ ನ ಶಿಕ್ಷಕನನ್ನು ವಶಕ್ಕೆ ಪಡೆದ ಸಿಐಡಿ

ಹುಬ್ಬಳ್ಳಿ: ಪಿಎಸ್‌ಐ ನೇಮಕಾತಿ ಹಗರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಸಿಐಡಿ ಪೊಲೀಸರು, ಧಾರವಾಡದ ಖ್ಯಾತ ಕೋಚಿಂಗ್ ಸೆಂಟರ್‌ ನ ಶಿಕ್ಷಕರೊಬ್ಬರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಸಪ್ತಾಪುರಭಾವಿ ಪ್ರದೇಶದಲ್ಲಿರುವ ಕೋಚಿಂಗ್ ಸೆಂಟರ್‌ನಲ್ಲಿ ಮಂಗಳವಾರ ಶಿಕ್ಷಕನನ್ನು ವಶಕ್ಕೆ ಪಡೆಯಲಾಗಿದ್ದು, ಬುಧವಾರವೂ ವಿಚಾರಣೆ ಮುಂದುವರೆದಿದೆ.   ಹಗರಣದಲ್ಲಿ ಭಾಗಿಯಾಗಿರುವ ಅಭ್ಯರ್ಥಿಗಳಲ್ಲಿ ಒಬ್ಬರು ನೀಡಿದ ಮಾಹಿತಿಯ ಆಧಾರದ ಮೇಲೆ ಈ ಶಿಕ್ಷಕನನ್ನು ವಶಕ್ಕೆ ಪಡೆಯಲಾಗಿದೆ ಮತ್ತು ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. …

Read More »

ರಮ್ಯಾ ಜತೆ ರಕ್ಷಿತ್​​ ಶೆಟ್ಟಿ ಸಿನಿಮಾ ಮಾಡೋದು ಪಕ್ಕಾ.. ಹೇಗಿತ್ತು ಸಿಂಪಲ್​ ಸ್ಟಾರ್​​ ರಿಯಾಕ್ಷನ್..?​​

ಸ್ಯಾಂಡಲ್​ವುಡ್​ ಪದ್ಮಾವತಿ ರಮ್ಯಾ ಕಂಬ್ಯಾಕ್​ಗಾಗಿ ಅದೇಷ್ಟೋ ಹೃದಯಗಳು ಕಾದು ಕುಂತಿವೆ. ಪೊಲಿಟಿಕಲ್ ಸಹವಾಸ ಸಾಕು, ಪ್ಲೀಸ್ ಸಿನಿಮಾ ಮಾಡಿ ಅಂತ ಅವರ ಫ್ಯಾನ್ಸ್ ರಿಕ್ವೆಸ್ಟ್ ಮೇಲೆ ರಿಕ್ವೆಸ್ಟ್ ಮಾಡ್ತಾ ಕನಸು ಕಾಣ್ತಾ ಇದ್ದಾರೆ. ಈಗ, ರಮ್ಯಾ ಫ್ಯಾನ್ಸ್​ಗೆ ನಿಮ್ಮ ನ್ಯೂಸ್​ಫಸ್ಟ್​ ಎಕ್ಸ್​ಕ್ಲೂಸಿವ್​ ಸಮಾಚಾರವೊಂದು ತಗೊಂಡು ಬಂದಿದೆ. ಸ್ಯಾಂಡವುಡ್​ ಪದ್ಮಾವತಿ, ಮೋಹಕತಾರೆ ರಮ್ಯಾ ತುಂಬಾ ಜನಕ್ಕೆ ಡ್ರೀಮ್ ಗರ್ಲ್. ಅವರೊಂದು ಕನಸು. ರಾಜಕೀಯಕ್ಕೆ ಹೋದ್ಮೇಲೆ ಅವರನ್ನ ತುಂಬಾ ಮಿಸ್ ಮಾಡಿಕೊಂಡಿರೋ ಅಭಿಮಾನಿಗಳು, …

Read More »

ರಾಜಕೀಯ ವಿಶ್ಲೇಷಣೆಯಿಂದ ರಮ್ಯಾ ದೂರ ಉಳಿಯಬೇಕು: ಚನ್ನರಾಜ ಹಟ್ಟಿಹೊಳಿ

ಬೆಳಗಾವಿ: ಮಾಜಿ ಸಂಸದೆ ರಮ್ಯಾ ಅವರು ರಾಜಕೀಯ ವಿಶ್ಲೇಷಣೆಯಿಂದ ದೂರ ಉಳಿಯಬೇಕು ಎಂದು ಕಾಂಗ್ರೆಸ್ ಎಂಎಲ್‍ಸಿ ಚನ್ನರಾಜ ಹಟ್ಟಿಹೊಳಿ ಆಕ್ರೋಶ ಹೊರಹಾಕಿದ್ದಾರೆ. ನಗರದಲ್ಲಿ ಅಶ್ವತ್ಥ್ ನಾರಾಯಣ್ ಹಾಗೂ ಎಂ.ಬಿ.ಪಾಟೀಲ್ ಭೇಟಿ ಬಗ್ಗೆ ಡಿಕೆಶಿ ಹೇಳಿಕೆಗೆ ರಮ್ಯಾ ಪ್ರತಿಕ್ರಿಯೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಮ್ಯಾ ಅವರು ಬಹಳ ದಿನಗಳಿಂದ ರಾಜಕಾರಣದಿಂದ ದೂರ ಉಳಿದಿದ್ದಾರೆ. ಈಗ ಮತ್ತೆ ಏಕಾಏಕಿ ಬಂದು ಅವರೇಕೆ ಸ್ಟೇಟ್‍ಮೆಂಟ್ ಕೊಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

Read More »

ಕರ್ನಾಟಕದ ನಾಲ್ಕು ‘ರಾಜ್ಯಸಭಾ ಸ್ಥಾನ’ಗಳಿಗೆ ಚುನಾವಣೆ ಘೋಷಣೆ: ಜೂ.10ರಂದು ಮತದಾನ, ಅಂದೇ ಫಲಿತಾಂಶ |

ನವದೆಹಲಿ: ದಿನಾಂಕ 30-06-2022ರಂದು ನಿವೃತ್ತಿಯಾಗಲಿರುವಂತ ಕರ್ನಾಟಕದಿಂದ ರಾಜ್ಯಸಭೆಗೆ ( Rajya Sabha ) ಆಯ್ಕೆಯಾಗಿದ್ದಂತ ನಾಲ್ಕು ಸ್ಥಾನಗಳು ಸೇರಿದಂತೆ ದೇಶದ 15 ರಾಜ್ಯಗಳ 57 ರಾಜ್ಯ ಸಭಾ ಸ್ಥಾನಗಳಿಗೆ ಚುನಾವಣಾ ಆಯೋಗದಿಂದ ಚುನಾವಣೆ ಘೋಷಣೆ ಮಾಡಲಾಗಿದೆ. ಈ ಸಂಬಂಧ ಚುನಾವಣಾ ಆಯೋಗ ( Election Commission of India – ECI) ಆದೇಶ ಹೊರಡಿಸಿದ್ದು, ದಿನಾಂಕ 30-06-2022ರಂದು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಂತ ಕೆಸಿ ರಾಮಮೂರ್ತಿ, ಜೈರಾಂ ರಮೇಶ್, ಆಸ್ಕರ್ ಫರ್ನಾಂಡಿಸ್, …

Read More »

ಸಿಎಂ ಜೊತೆಗಿನ ಚರ್ಚೆ ಮುಗಿಯುತ್ತಿದ್ದಂತೇ ಊಟಕ್ಕಾಗಿ ಮುಗಿಬಿದ್ದ ಶಾಲಾ ಶಿಕ್ಷಕರು!. ವಿಡಿಯೋ ವೈರಲ್‌

ಪಂಜಾಬ್‌: ಶಾಲಾ ಶಿಕ್ಷಕರು ಊಟಕ್ಕಾಗಿ ಮುಗಿಬಿದ್ದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಶಾಲಾ ಶಿಕ್ಷಣದ ಮಿತಿಯನ್ನು ಹೆಚ್ಚಿಸುವ ಸಂಬಂಧ ಪಂಜಾಬ್‌ ಸಿಎಂ ಭಗವಂತ್ ಮಾನ್ ಅವರು ರೆಸಾರ್ಟ್‌ವೊಂದರಲ್ಲಿ ಶಾಲಾ ಶಿಕ್ಷಕರು ಮತ್ತು ಪ್ರಾಂಶುಪಾಲರನ್ನು ಭೇಟಿ ಮಾಡಿದರು. ಚರ್ಚೆಯ ನಂತರ ಅಲ್ಲಿ ಏರ್ಪಡಿಸಲಾಗಿದ್ದ ಉಚಿತ ಊಟಕ್ಕೆ ಶಿಕ್ಷಕರು ತಟ್ಟೆ ಹಿಡಿದು ಮುಗಿಬಿದ್ದಿದ್ದಾರೆ. ಮಂಗಳವಾರ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಾಲಾ ಶಿಕ್ಷಣದ ಮಿತಿಯನ್ನು ಹೆಚ್ಚಿಸಲು …

Read More »

ಸುಗ್ರೀವಾಜ್ಞೆ ಮೂಲಕ `ಮತಾಂತರ ನಿಷೇಧ ಕಾಯ್ದೆ’ ಜಾರಿ : ಸಿಎಂ

ಬೆಂಗಳೂರು : ರಾಜ್ಯದಲ್ಲಿ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai)) ತಿಳಿಸಿದ್ದಾರೆ.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿ ಮಾಡುತ್ತೇವೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡುತ್ತೇವೆ. ವಿಧಾನಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಅಂಗೀಕಾರ ಆಗಿತ್ತು. ವಿಧಾನಪರಿಷತ್ ನಲ್ಲಿ ವಿದೇಯಕ ಅಂಗೀಕಾರ …

Read More »

ಗೋವಾದಲ್ಲಿ ರಷ್ಯಾ ಮೂಲದ ಬಾಲಕಿ ಮೇಲೆ ಅತ್ಯಾಚಾರ: ಗದಗದಲ್ಲಿ ಆರೋಪಿ ಸೆರೆ

ಪಣಜಿ: ಉತ್ತರ ಗೋವಾದ ಅರಂಬೋಲ್‌ನಲ್ಲಿರುವ ರೆಸಾರ್ಟ್‌ನಲ್ಲಿ ರಷ್ಯಾ ಮೂಲದ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಕರ್ನಾಟಕದ ವ್ಯಕ್ತಿಯೊಬ್ಬನನ್ನು ಗೋವಾ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಮೇ 6 ರಂದು ಲೈಂಗಿಕ ದೌರ್ಜನ್ಯ ಪ್ರಕರಣ ಸಂಭವಿಸಿತ್ತು. ಗೋವಾದ ಪೆರ್ನೆಮ್‌ ಠಾಣೆ ಪೊಲೀಸರು ಆರೋಪಿ ರವಿ ಲಮಾಣಿ (28)ಯನ್ನು ಮೇ 10 ರಂದು ಗದಗದಲ್ಲಿ ಬಂಧಿಸಿದ್ದಾರೆ. ಸಂತ್ರಸ್ತೆಯ ತಾಯಿ ಮೇ 9 ರಂದು ದೂರು ದಾಖಲಿಸಿದ್ದರು ಎಂದು ಪೊಲೀಸ್‌ ಅಧಿಕಾರಿಗಳು …

Read More »

ರಮ್ಯಾ v/s ಡಿಕೆಶಿ: ಕಾಂಗ್ರೆಸ್​ ಒಳಗೇ ಕೊತಕೊತ-

ಬೆಂಗಳೂರು: ಕಾಂಗ್ರೆಸ್​ನಲ್ಲಿ ಆಂತರಿಕವಾಗಿ ತಲೆದೋರಿರುವ ಗೊಂದಲ, ಕಿತ್ತಾಟ ಇದೀಗ ಮತ್ತೆ ಬಹಿರಂಗಗೊಂಡಿದೆ. ಮಾಜಿ ಸಂಸದೆ ರಮ್ಯಾ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ವಿರುದ್ಧ ವಾಕ್ಸಮರ ಶುರುವಾಗಿದ್ದು, ರಮ್ಯಾ ಡಿಕೆಶಿ ವಿರುದ್ಧ ರೊಚ್ಚಿಗೆದ್ದು ಬೆಳಗ್ಗೆಯಿಂದ ಒಂದೇ ಸಮನೆ ಟ್ವಿಟರ್​ ಸಮರ ಶುರು ಮಾಡಿದ್ದಾರೆ.   ‘ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಅವರು ತಮ್ಮ ಇಲಾಖೆ ಹಗರಣಗಳ ವಿಚಾರಗಳ ಬಗ್ಗೆ ಯಾರು ಧ್ವನಿ ಎತ್ತಬಾರದು, ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ …

Read More »

ಮೊಮ್ಮಗ ಅಥವಾ ಐದು ಕೋಟಿ ಪರಿಹಾರ ಕೋರಿ ಮಗ ಮತ್ತು ಸೊಸೆಯ ವಿರುದ್ಧ ನ್ಯಾಯಾಲಯದ ಮೊರೆ ಹೋದ ದಂಪತಿ

ನವದೆಹಲಿ:ಒಂದು ವಿಚಿತ್ರ ಪ್ರಕರಣದಲ್ಲಿ, ಉತ್ತರಾಖಂಡದ ಹರಿದ್ವಾರದ ದಂಪತಿಗಳು ತಮ್ಮ ಮಗ ಮತ್ತು ಸೊಸೆಯ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದು, ಒಂದು ವರ್ಷದೊಳಗೆ ಮೊಮ್ಮಗನನ್ನು ಅಥವಾ ಇಬ್ಬರಿಂದಲೂ ₹ 5 ಕೋಟಿ ಪರಿಹಾರವನ್ನು ಕೋರಿದ್ದಾರೆ.   ಎಎನ್‌ಐ ವರದಿಯ ಪ್ರಕಾರ, ಪೋಷಕರು ತಮ್ಮ ಮಗನ ಶಿಕ್ಷಣ ಮತ್ತು ಮನೆ ಕಟ್ಟಲು ಹಣವನ್ನು ಹೂಡಿಕೆ ಮಾಡಿದ್ದಾರೆ ಮತ್ತು ಈಗ ಆರ್ಥಿಕವಾಗಿ ಕುಸಿದಿದ್ದಾರೆ ಎಂದು ಹೇಳಿದ್ದಾರೆ. ಇದೀಗ ಅವರು ತಮ್ಮ ಮಗ ಮತ್ತು ಸೊಸೆಯಿಂದ …

Read More »

ತಾಜ್​ ಮಹಲ್​ನ ಜಾಗ ನನಗೆ ಸೇರಿದ್ದು, ದಾಖಲೆ ಇದೆ: ರಾಜವಂಶಸ್ಥೆಯ ವಾದ

ದೆಹಲಿಯ ಷತಾಜ್​​ಮಹಲ್​ನ ಜಾಗ ಮೂಲತಃ ನನಗೆ ಸೇರಿದ್ದು, ನಮ್ಮ ಮನೆತನಕ್ಕೆ ಸೇರಿದ್ದು ಎಂದು ಬಿಜೆಪಿ ಸಂಸದೆ ಹಾಗೂ ಜೈಪುರದ ರಾಜವಂಶಸ್ಥೆ ದಿಯಾ ಕುಮಾರಿ ಹೊಸ ವಿವಾದ ಹುಟ್ಟುಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಎಲ್ಲಾ ದಾಖಲೆಗಳಿವೆ ಎಂದಿರುವುದು ಚರ್ಚೆಗೆ ಕಾರಣವಾಗಿದೆ.   ಇದಕ್ಕೂ ಮೊದಲು ರಿಯಾ ಕುಮಾರಿ ತಾಜ್​ ಮಹಲ್​ನಲ್ಲಿ ಬೀಗ ಹಾಕಿರುವ 22 ಕೋಣೆಗಳ ಬೀಗ ತೆರೆಯುವಂತೆ ನಿರ್ದೇಶಿಸಲು ಅಲಹಾಬಾದ್​ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಈ ಜಾಗ …

Read More »