Breaking News

15 ಲಕ್ಷ ರೂ ಲಂಚ ಪಡೆಯುವಾಗ ತಹಸೀಲ್ದಾರ್‌ ಲೋಕಾಯುಕ್ತ ಬಲೆಗೆ

Spread the love

ಬೀದರ್​: ಲಂಚ ಪಡೆಯುತ್ತಿದ್ದರು ಎನ್ನಲಾದ ವೇಳೆ ತಹಶಿಲ್ದಾರ್ ಎಸಿಬಿ ಬಲೆಗೆ ಬಿದ್ದ ಘಟನೆ ಬೀದರ್​ನಲ್ಲಿ ನಡೆದಿದೆ. ತಹಶಿಲ್ದಾರ್ ಗಂಗಾದೇವಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿ.

ನಗರದ ಲೀಲಾಧರ್​ ಎನ್ನುವವರಿಗೆ ಚಿದ್ರಿ ಸರ್ವೆ ನಂಬರ್​ನಲ್ಲಿನ 15ರ ಭೂಮಿ ಮುಟೆಷನ್ ಮಾಡಲು ತಹಶೀಲ್ದಾರ್​ ಗಂಗಾದೇವಿ ಅವರು 20 ಲಕ್ಷ ನೀಡುವಂತೆ ಡಿಮ್ಯಾಂಡ್​ ಮಾಡಿದ್ದರು ಎನ್ನಲಾಗಿದೆ. 15 ಲಕ್ಷ ಕೊಡುವದಾಗಿ ಒಪ್ಪಿಕೊಂಡಿದ್ದ ಲೀಲಾಧರ್​ ಎಸಿಬಿಗೆ ಮಾಹಿತಿ ನೀಡಿದ್ದರು.

15 ಲಕ್ಷ ಹಣವನ್ನು ತಹಶೀಲ್ದಾರ ತಮ್ಮ ಮನೆಯಲ್ಲಿ ಪಡೆಯುತ್ತಿದ್ದರು ಎನ್ನಲಾದ ವೇಳೆ ಎಸಿಬಿ ಎಸ್ಪಿ ಮಹೇಶ್ ಮೇಘಣ್ಣನವರ್ ನೇತೃತ್ವದಲ್ಲಿ ದಾಳಿ ನಡೆಸಿದ್ದು ತಹಶೀಲ್ದಾರ್​ ಬಲೆಗೆ ಬಿದ್ದಿದ್ದಾರೆ. ಇನ್ನು ನಗರದಲ್ಲಿ ತಹಶೀಲ್ದಾರ್​ ಗಂಗಾದೇವಿ ಹತ್ತು ಹಲವು ಭ್ರಷ್ಟಾಚಾರ ಆರೋಪಗಳನ್ನು ಹೊತ್ತಿದ್ದಾರೆ ಎನ್ನಲಾಗಿದೆ.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ