Breaking News

‘ನಿನ್ನ ಮೇಲೆ ಯಾರು ಕೇಸ್ ಹಾಕ್ತಾರೋ?’ ಅಶೋಕ್, ಸವದಿಗೆ ಸಿಎಂ ಪಾಠ ಹೇಗಿತ್ತು ಗೊತ್ತಾ..?

Spread the love

ಬೆಂಗಳೂರು: ರಾಜ್ಯದಲ್ಲಿ ಮುಂಗಾರುಮಳೆ ಕುರಿತು ಇಂದು ಸುದ್ದಿಗೋಷ್ಠಿ ಮುಗಿಸಿ ಹೊರಡುವ ವೇಳೆ ಸಿಎಂ ಬಿ.ಎಸ್. ಯಡಿಯೂರಪ್ಪ ಕಂದಾಯ ಸಚಿವ ಆರ್. ಅಶೋಕ್ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿಗೆ ಪಾಠ ಮಾಡಿದ ವಿಶೇಷ ಸನ್ನಿವೇಶ ನಡೆಯಿತು. ಈ ವೇಳೆ ಸಿಎಂ ಬಿಎಸ್​ವೈ ಜಾಲಿ ಮೂಡ್​​ನಲ್ಲಿದ್ದಂತೆ ಕಂಡುಬಂದರು..

ಸಿಎಂ ಬಿಎಸ್​ವೈ, ಆರ್ ಅಶೋಕ್ ಹಾಗೂ ಸವದಿ ನಡುವಿನ ಮಾತುಕತೆ ಹೀಗಿತ್ತು..
ಸಿಎಂ :- ಅಶೋಕ್ ಎಲ್ಲಿಗೆ ಹೋಗ್ತಾಯಿದ್ಯಾ?.
ಅಶೋಕ್ :- ಸಾರ್ ನಮ್ಮದೊಂದು ಕೇಸ್ ಇದೆ. ಲಾಯರ್ ಬಂದಿದ್ದಾರೆ. ಅಲ್ಲಿಗೆ ಹೋಗ್ತಾಯಿದ್ದೀನಿ.
ಸಿಎಂ :- ಯಾರದ್ದು ಕೇಸ್?
ಅಶೋಕ್ :- ಇಲ್ಲ ಸಾರ್, ಇಲ್ಲೇ ಮನೆಗೆ ಹೋಗ್ತಾಯಿದ್ದೀನಿ.
ಸಿಎಂ :- ನಿನ್ನ ಮೇಲೆ ಯಾರು ಕೇಸ್ ಹಾಕ್ತಾರೋ? ಇನ್ನು ಸವದಿ ಮೇಲೆ ಕೇಸ್ ಹಾಕ್ತಾರೆ ಅಂದ್ರೆ, ಒಪ್ಪಬಹುದು! ಅಶೋಕ್ :- ಹೌದು ಸಾರ್, ಸವದಿ ಇತ್ತೀಚೆಗೆ ದಾರಿ ತಪ್ಪುತ್ತಿದ್ದಾನೆ.
ಸಿಎಂ :- ಅದೇ ಸವದಿನ ಕಾಪಾಡೋದು ನಿನ್ನ ಕೆಲಸ ಅಲ್ವೇ? ಅವನನ್ನು ಕಾಪಾಡಬೇಕಾಗಿದ್ದು, ನಿನ್ನ ಕರ್ತವ್ಯ ಅಲ್ಲವೇ?
ಸವದಿ :- ಸಾಹೇಬ್ರೇ, ಕೇಸ್‌ಗೆ ಲಾಯರ್ ಫೀ ಯಾರು ಕೊಡಬೇಕು?
ಸಿಎಂ :- ಸವದಿನಾ ಕಾಪಾಡಪ್ಪ ಅಶೋಕ್.
ಅಶೋಕ್ :- ಆಗಲೀ ಸಾರ್.
ಹೀಗೆ ಜಾಲಿ ಮೂಡ್‌ನಲ್ಲಿ ಹೇಳಿ ನಗುತ್ತಾ ಸಿಎಂ ಯಡಿಯೂರಪ್ಪ ಮನೆ ಕಡೆ ಹೊರಟರು.


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ