Breaking News

ಕಳ್ಳರು ರಾತ್ರೋರಾತ್ರಿ ಎಟಿಎಂ ಮಷಿನ್​ಅನ್ನೇ ಕದ್ದು, ಸಿಸಿಟಿವಿಯನ್ನು ಧ್ವಂಸಗೊಳಿಸಿ ಪರಾರಿ

Spread the love

ಬೀದರ್: ಕಳ್ಳರು ರಾತ್ರೋರಾತ್ರಿ ಎಟಿಎಂ ಮಷಿನ್​ಅನ್ನೇ ಕದ್ದು, ಸಿಸಿಟಿವಿಯನ್ನು ಧ್ವಂಸಗೊಳಿಸಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಔರಾದ್ ಪಟ್ಟಣದ ಉಪ್ಪೇ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಪೆಟ್ರೋಲ್​​ ಬಂಕ್​ ಎದುರಿನ ಇಂಡಿ ಕ್ಯಾಶ್​ ಎಟಿಎಂ ಮಷಿನ್​ ಕಳೆದ ರಾತ್ರಿ ಕಳ್ಳತನವಾಗಿದೆ. ಕಳ್ಳರು ಯಂತ್ರವನ್ನೇ ಕದ್ದೊಯ್ದಿದ್ದಾರೆ.ಕಳ್ಳರು ಇದಕ್ಕೂ ಮೊದಲು ಸಿಸಿಟಿವಿಗಳನ್ನು ಧ್ವಂಸಗೊಳಿಸಿದ್ದಾರೆ.

ದೃಶ್ಯಗಳನ್ನು ನೋಡಿದ್ರೆ ಹಗ್ಗದ ಒಂದು ಬದಿ ವಾಹನಕ್ಕೆ ಕಟ್ಟಿ ಮತ್ತೊಂದು ಬದಿ ಎಟಿಎಂ ಮಷಿನ್​ಗೆ ಕಟ್ಟಿ ಕದ್ದೊಯ್ದಿರುವ ಶಂಕೆ ಮೂಡುತ್ತಿದೆ.ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಔರಾದ್ ಪೊಲೀಸರು ಭೇಟಿ ನೀಡಿದ್ದು, ಪರಿಶಿಲನೆ ನಡೆಸಿದ್ದಾರೆ. ಇನ್ನು ಸ್ಥಳಕ್ಕೆ ಇಂಡಿ ಕ್ಯಾಶ್​ ಮ್ಯಾನೇಜ್ಮೆಂಟ್​ ಬಂದು ಎಟಿಎಂ ಮಷಿನ್​ನಲ್ಲಿ ಎಷ್ಟು ಹಣವಿತ್ತು ಎಂಬುದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಿದೆ.


Spread the love

About Laxminews 24x7

Check Also

ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು!

Spread the love ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು! ಯಮಕನಮರಡಿ ವಿಧಾನಸಭಾ ಕ್ಷೇತ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ