Breaking News

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವತಿಯಿಂದ ‘ನಿರುಪಮ’ (ಚೆನ್ನಮ್ಮ) ಎನ್ನುವ ಹೆಸರಿಟ್ಟು ಸಿಂಹಿಣಿಯನ್ನು ದತ್ತಕ ತೆಗೆದುಕೊಳ್ಳಲಾಯಿತು.

Spread the love

ಬೆಳಗಾವಿ: ಭಾರತೀಯ ಸ್ವಾತಂತ್ರ್ಯದ ಅಮೃತ ಮಹೋತ್ಸವ ( 75ನೆಯ ವರ್ಷಾಚರಣೆಯ) ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿ ಪ್ರಾಣಾರ್ಪಣೆ ಮಾಡಿದ ಹುತಾತ್ಮರ ಸ್ಮರಣೆಗಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವತಿಯಿಂದ ‘ನಿರುಪಮ’ (ಚೆನ್ನಮ್ಮ) ಎನ್ನುವ ಹೆಸರಿಟ್ಟು ಸಿಂಹಿಣಿಯನ್ನು ದತ್ತಕ ತೆಗೆದುಕೊಳ್ಳಲಾಯಿತು.

ಈ ಕುರಿತು ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ ಎಂ ರಾಮಚಂದ್ರಗೌಡ, ಕುಲಸಚಿವರಾದ ಪ್ರೊ. ಬಸವರಾಜ ಪದ್ಮಶಾಲಿ, ಕುಲಸಚಿವರು ಮೌಲ್ಯಮಾಪನ ರಾದ ಪ್ರೊ. ಎಸ್. ಎಂ ಹೂರಕಡ್ಲಿ ಹಣಕಾಸು ಅಧಿಕಾರಿಗಳಾದ ಪ್ರೊ. ಡಿ ಎನ್ ಪಾಟೀಲ್ ಅಲ್ಲದೆ ವಿಶ್ವವಿದ್ಯಾಲಯದ ಪ್ರಾಧಿಕಾರಗಳಾದ ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ತಿನ ಸದಸ್ಯರುಗಳ ಸಮಸ್ತರ ಸಮ್ಮುಖದಲ್ಲಿ ಅನುಶಾಶನವನ್ನು ಹೊರಡಿಸಲಾಯಿತು.

ಸ್ವಾತಂತ್ರ ದೇವಿಯ ರಕ್ಷಣೆ, ಹುತಾತ್ಮರ ಸ್ಮರಣೆ ಹಾಗೂ ಅಪೂರ್ವ ಜೀವ ಸಂಕುಲದದ ರಕ್ಷಣೆಯ ಉದ್ದೇಶದಿಂದ ಈ ದತ್ತಕವನ್ನು ತೆಗೆದುಕೊಳ್ಳಲಾಗಿದ್ದು ಸದರಿ ಸಿಂಹದ ಜೀವಿತಾವಧಿವರೆಗೂ ವಿಶ್ವವಿದ್ಯಾಲವು ಅದರ ವೆಚ್ಚವನ್ನು ಭರಿಸುತ್ತದೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ