Breaking News

ಪಕ್ಕಾ ಸಸ್ಯಾಹಾರಿ ಮಹಿಳೆಯೊಬ್ಬರಿಗೆ ಚಿಕನ್​ ಪಿಜ್ಜಾ ಪಾರ್ಸೆಲ್​ ಕಳುಹಿಸಿ ಇದೀಗ ಒಂದು ಕೋಟಿ ರೂಪಾಯಿ ಪರಿಹಾರವನ್ನು ಪಿಜ್ಜಾ ಕಂಪೆನಿ ತಲೆ ಮೇಲೆ ಹಾಕಿಕೊಂಡಿದೆ.

Spread the love

ಗಾಜಿಯಾಬಾದ್ (ಉತ್ತರ ಪ್ರದೇಶ): ಪಕ್ಕಾ ಸಸ್ಯಾಹಾರಿ ಮಹಿಳೆಯೊಬ್ಬರಿಗೆ ಚಿಕನ್​ ಪಿಜ್ಜಾ ಪಾರ್ಸೆಲ್​ ಕಳುಹಿಸಿ ಇದೀಗ ಒಂದು ಕೋಟಿ ರೂಪಾಯಿ ಪರಿಹಾರವನ್ನು ಪಿಜ್ಜಾ ಕಂಪೆನಿ ತಲೆ ಮೇಲೆ ಹಾಕಿಕೊಂಡಿದೆ.

ಮನೆಗೆ ಬಂದ ಪಾರ್ಸೆಲ್​ ನೋಡಿ ವೆಜ್​ ಪಿಜ್ಜಾ ಬಂತೆಂದು ತಿಳಿದು ಚಿಕನ್​ ತಿಂದ ಮಹಿಳೆ ಗರಂ ಆಗಿದ್ದು, ಪಿಜ್ಜಾ ಕಂಪೆನಿ ವಿರುದ್ಧ ಒಂದು ಕೋಟಿ ರೂಪಾಯಿ ಪರಿಹಾರಕ್ಕೆ ದಾವೆ ಹೂಡಿದ್ದಾರೆ. ಅಷ್ಟೊಂದು ಪರಿಹಾರವನ್ನು ನೀಡಲು ಕೋರ್ಟ್​ ಆದೇಶ ಮಾಡದೇ ಹೋದರೂ, ಪಿಜ್ಜಾ ಕಂಪೆನಿಯ ಹಣೆಬರಹ ಸರಿಯಿಲ್ಲದಿದ್ದರೆ ಏನು ಬೇಕಾದರೂ ಆದೀತು!

ಇಂಥದ್ದೊಂದು ಘಟನೆ ನಡೆದಿರುವುದು ಗಾಜಿಯಾಬಾದ್​ನಲ್ಲಿ. ಮಹಿಳೆ ಸಂಪ್ರದಾಯಸ್ಥ ಸಸ್ಯಾಹಾರಿಯಾಗಿದ್ದರು. ಸಮೀಪದ ಮಳಿಗೆಯೊಂದರಿಂದ ಸಸ್ಯಾಹಾರಿ ಪಿಜ್ಜಾ ತರಿಸಿಕೊಂಡಿದ್ದರು. ಆದರೆ ಅರ್ಧ ತಿಂದಾದ ಮೇಲೆ ಅದು ಚಿಕನ್​ ಎನ್ನುವುದು ತಿಳಿದಿದೆ.

ಹುಟ್ಟಿನಿಂದಲೂ ಸಸ್ಯಾಹಾರಿಯಾಗಿರುವ ತನ್ನನ್ನು ಮಾಂಸಾಹಾರಿ ಮಾಡಿದ್ದಕ್ಕೆ ತೀವ್ರವಾಗಿ ಆಕ್ರೋಶಗೊಂಡ ಮಹಿಳೆ ಯರ್ ಮೂಲಕ ಗ್ರಾಹಕ ಹಿತರಕ್ಷಣಾ ಕಾಯ್ದೆಯಡಿ ಅಮೆರಿಕ ಮೂಲಕ ಪಿಜ್ಜಾ ಕಂಪೆನಿಗೆ 1 ಕೋಟಿ ರೂ. ಪರಿಹಾರ ಕೋರಿ ಪ್ರಕರಣ ದಾಖಲಿಸಿದ್ದಾರೆ.

ಮಾಂಸಾಹಾರ ಮಾಡಿದ ತಪ್ಪಿಗೆ ಪ್ರಾಯಶ್ಚಿತ ಮಾಡಬೇಕಿದೆ. ಇದಕ್ಕಾಗಿ ಕೆಲವು ಧಾರ್ಮಿಕ ಕಾರ್ಯಕ್ರಮ ನೆರವೇರಿಸಬೇಕಿದೆ. ಇದಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗಲಿದೆ. ಹೀಗಾಗಿ 1 ಕೋಟಿ ರೂ. ಪರಿಹಾರ ಒದಗಿಸಬೇಕು ಎಂದು ಆಕೆ ಅರ್ಜಿಯಲ್ಲಿ ಹೇಳಿದ್ದಾರೆ.


Spread the love

About Laxminews 24x7

Check Also

ವಿದ್ಯಾರ್ಥಿನಿಯರನ್ನು ಸ್ವಂತಖರ್ಚಲ್ಲಿ ಸಂಸತ್ ಕಲಾಪ ವೀಕ್ಷಣೆಗೆ ಕರೆದೊಯ್ಯುವ ಸಂಸದೆ

Spread the love ವಿದ್ಯಾರ್ಥಿನಿಯರನ್ನು ಸ್ವಂತಖರ್ಚಲ್ಲಿ ಸಂಸತ್ ಕಲಾಪ ವೀಕ್ಷಣೆಗೆ ಕರೆದೊಯ್ಯುವ ಸಂಸದೆ (ಬೆಳಗಾವಿ ಜಿಲ್ಲೆ): ಚಿಕ್ಕೋಡಿ ಸಂಸದೆ ಪ್ರಿಯಾಂಕಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ