Breaking News

48 ಐಪಿಎಸ್ ಅಧಿಕಾರಿಗಳಿಗೆ ವರ್ಗಾವಣೆ ಮತ್ತು ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಬುಧವಾರ ಆದೇಶಿಸಿದೆ.

Spread the love

ಬೆಂಗಳೂರು: ಹೊಸ ವರ್ಷದ ಮುನ್ನಾದಿನವೇ ಪೊಲೀಸ್ ಇಲಾಖೆಯಲ್ಲಿ ರಾಜ್ಯ ಸರ್ಕಾರದ ಮಹತ್ವದ ಬದಲಾವಣೆ ಮಾಡಿದೆ. ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ 28 ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿದರೆ, 20 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಆದೇಶಿಸಿದೆ.

ಐಜಿಪಿಯಾಗಿ ಮುಂಬಡ್ತಿ ಪಡೆದ ಅಧಿಕಾರಿಗಳು: ಡಾ.ಎಂ.ಬಿ.ಬೋರಲಿಂಗಯ್ಯ (ದಕ್ಷಿಣ ವಲಯ), ರಾಮ್‌ನಿವಾಸ್ ಸೆಪಟ್‌ (ಹೈದರಾಬಾದ್, ರಾಷ್ಟ್ರೀಯ ಪೊಲೀಸ್ ತರಬೇತಿ ಶಾಲೆ), ಅನುಪಮಾ ಅಗರ್‌ವಾಲ್‌(ಸಿಆರ್‌ಪಿಎಫ್‌), ಅಜಯ್‌ ಹಿಲೋರಿ (ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ, ಬೆಂಗಳೂರು), ಡಾ.ರೋಹಿಣಿ ಕಟೋಚ್‌ ಸಪೆಟ್‌ (ಹೈದರಾಬಾದ್, ರಾಷ್ಟ್ರೀಯ ಪೊಲೀಸ್ ತರಬೇತಿ ಶಾಲೆ).

ಡಿಐಜಿಯಾಗಿ ಮುಂಬಡ್ತಿ: ಡಾ.ಭೀಮಾಶಂಕರ್ ಎಸ್‌.ಗುಳೇದ್ (ಸಿಐಡಿ, ಆರ್ಥಿಕ ಅಪರಾಧ ವಿಭಾಗ), ನಿಕಂ ಪ್ರಕಾಶ್‌ ಅಮ್ರಿತ್ (ಕೇಂದ್ರ ಸೇವೆ), ಜಿ.ರಾಧಿಕಾ(ಹೈದರಾಬಾದ್, ರಾಷ್ಟ್ರೀಯ ಪೊಲೀಸ್ ತರಬೇತಿ ಶಾಲೆ), ರಾಹುಲ್‌ ಕುಮಾರ್ ಶಹಪುರ್‌ವಾದ್ (ಎನ್‌ಐಎ, ದೆಹಲಿ), ಧರ್ಮೇಂದ್ರ ಕುಮಾರ್‌ ಮೀನಾ (ಕೇಂದ್ರ ಸೇವೆ), ಇಲಾಕಿಯಾ ಕರುಣಾಕರನ್‌ (ನಿಸ್ತಂತು ವಿಭಾಗ), ಡಾ.ಸಿ.ಬಿ.ವೇದಮೂರ್ತಿ (ಗುಪ್ತಚರ ವಿಭಾಗ), ಕೆ.ಎಂ.ಶಾಂತರಾಜು (ಐಎಸ್‌ಡಿ, ಬೆಂಗಳೂರು), ಹನುಮಂತರಾಯ (ಮಾನವ ಹಕ್ಕುಗಳ ಆಯೋಗ), ಡಿ.ದೇವರಾಜ್‌ (ಪೊಲೀಸ್ ತರಬೇತಿ), ಡಾ.ಡಿ.ಆರ್‌.ಸಿರಿಗೌರಿ (ಕರ್ನಾಟಕ ಲೋಕಾಯುಕ್ತ), ಡಾ.ಕೆ.ಧರಣಿದೇವಿ (ಗುಪ್ತಚರ ವಿಭಾಗ), ಎಸ್‌.ಸವಿತಾ (ಹೋಮ್‌ ಗಾರ್ಡ್‌), ಸಿ.ಕೆ.ಬಾಬಾ (ಕೆಎಸ್‌ಆರ್‌ಪಿ), ಅಬ್ದುಲ್‌ ಅಹದ್‌ (ಬಿಎಂಟಿಸಿ, ವಿಚಕ್ಷಣ ದಳ), ಎಸ್‌.ಗಿರೀಶ್‌ (ಮಾದಕ ವಸ್ತು ನಿಗ್ರಹ ಪಡೆ), ಎಂ.ಪುಟ್ಟಮಾದಯ್ಯ (ಪ್ರಾಂಶುಪಾಲರು, ಪೊಲೀಸ್ ತರಬೇತಿ ಶಾಲೆ, ಕಲಬುರಗಿ), ಟಿ.ಶ್ರೀಧರ್‌ (ಪೊಲೀಸ್ ಪ್ರಧಾನ ಕಚೇರಿ), ಎಂ.ಅಶ್ವಿನಿ (ಯುಎನ್ಎಂಐಎಸ್‌ಎಸ್‌), ಎ.ಎನ್‌.ಪ್ರಕಾಶ್‌ ಗೌಡ (ವಿಶೇಷ ಕಾರ್ಯಪಡೆ).

ಜಿನೇಂದ್ರ ಖನಗಾವಿ (ಕಾರಾಗೃಹ), ಜಿ.ಕೆ.ರಶ್ಮಿ (ರೈಲ್ವೆ ಪೊಲೀಸ್), ಟಿ.ಪಿ.ಶಿವಕುಮಾರ್‌ (ಎಸ್‌ಸಿಆರ್‌ಬಿ), ಎನ್.ವಿಷ್ಣುವರ್ಧನ (ಪೊಲೀಸ್ ಅಕಾಡೆಮಿ, ಮೈಸೂರು), ಡಾ.ಸಂಜೀವ್ ಎಂ.ಪಾಟೀಲ್ (ಪೊಲೀಸ್ ಪ್ರಧಾನ ಕಚೇರಿ), ಕೆ.ಪರಶುರಾಮ್‌ (ಸಂಚಾರ ಮತ್ತು ಸುರಕ್ಷತೆ), ಹೆಚ್‌.ಡಿ.ಆನಂದ್‌ ಕುಮಾರ್ (ಸೈಬರ್ ಕಮಾಂಡ್‌), ಕಲಾ ಕೃಷ್ಣಮೂರ್ತಿ (ಅಪರಾಧ ವಿಭಾಗ, ಪೊಲೀಸ್ ಪ್ರಧಾನ ಕಚೇರಿ).

ಮುಂಬಡ್ತಿ: ಡಾ.ಅನೂಪ್ ಶೆಟ್ಟಿ, ಹರೀಶ್‌ ಪಾಂಡೆ, ಸುಮನಾ ಡಿ.ಪನ್ನೇಕರ್‌, ದಿವ್ಯಾ ಸಾರಾ ಥಾಮಸ್‌, ಡಿಕಾ ಕಿಶೋರ್‌ ಬಾಬು, ಸಿ.ಬಿ.ರಿಷ್ಯಂತ್, ನಿಶಾ ಜೇಮ್ಸ್, ಮಧುರ ವೀಣಾ, ಎಂ.ವಿ.ಚಂದ್ರಕಾಂತ್ (ಎಸ್ಪಿ ಬೆಂ.ಗ್ರಾಮಾಂತರ).

ಎಸ್ಪಿಗಳ ವರ್ಗಾವಣೆ: ಮೊಹಮ್ಮದ್‌ ಸುಜೀತಾ (ಆಗ್ನೇಯ ವಿಭಾಗ, ಬೆಂಗಳೂರು), ಎಂ.ಮುತ್ತುರಾಜ್‌ (ಚಾಮರಾಜನಗರ), ಸಾರಾ ಫಾತೀಮಾ (ಎಸ್ಪಿ, ರೈಲ್ವೆ), ಅರುಣಾಂಗಶು ಗಿರಿ (ರಾಯಚೂರು), ಮಿಥುನ್‌ ಕುಮಾರ್‌ (ಈಶಾನ್ಯ ವಿಭಾಗ), ಎನ್‌.ಯತೀಶ್‌ (ಪಶ್ಚಿಮ ವಿಭಾಗ), ಸೈದುಲ್ಲಾ ಅಡಾವತ್ (ವೈಟ್‌ಫೀಲ್ಡ್ ವಿಭಾಗ), ಮಲ್ಲಿಕಾರ್ಜುನ್‌ ಬಾಲದಂಡಿ (ಮೈಸೂರು), ಪವನ್‌ ನಿಜ್ಜೂರು (ಬಳ್ಳಾರಿ), ಡಾ.ವಿ.ಜೆ. ಶೋಭಾರಾಣಿ (ಮಂಡ್ಯ), ಡಾ.ಬಿ.ಟಿ.ಕವಿತಾ (ಸಿಐಡಿ), ನಿಖಿಲ್‌ (ಶಿವಮೊಗ್ಗ), ಹರಿರಾಮ್‌ ಶಂಕರ್‌ (ಉಡುಪಿ), ಎ.ಶ್ರೀನಿವಾಸುಲು( ಕಲಬುರಗಿ), ರಂಜಿತ್‌ ಕುಮಾರ್ ಬಾಂದ್ರು (ಚಿತ್ರದುರ್ಗ), ಕೆ.ರಾಮರಾಜನ್ (ಬೆಳಗಾವಿ), ಕೆ.ವಿ.ಅಶೋಕ್‌ (ತುಮಕೂರು), ಕನ್ನಿಕಾ ಶಿಕಾರಿವಲ್ (ಕೋಲಾರ), ಶುಭನ್ವಿತಾ (ಹಾಸನ), ವಿಕ್ರಂ ಆಮ್ಟೆ (ಪೂರ್ವವಿಭಾಗ, ಬೆಂಗಳೂರು), ವಿ.ಜೆ.ಸಜೀತ್ (ಐಎಸ್‌ಡಿ), ಜಿತೇಂದ್ರ ಕುಮಾರ್‌ ಡಯಾಮಾ (ಚಿಕ್ಕಮಗಳೂರು), ಡಾ.ಹರ್ಷ ಪ್ರಿಯವದ (ಸಿಐಡಿ), ಶಾಲೋ(ಸಿಐಡಿ), ಬಿಂದುಮಣಿ (ಕೊಡಗು, ಮಡಿಕೇರಿ), ಸ್ಯಾಮ್‌ ವರ್ಗೀಸ್(ಸಿಐಡಿ).


Spread the love

About Laxminews 24x7

Check Also

ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ

Spread the love ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ