Breaking News

ಬೆಂಗಳೂರು: ವರ್ಗಾವಣೆ ಆಗುವುದು ನನಗೆ ಬೇಸರವಿಲ್ಲ. ಮುಂದೆಯೂ ಇದೇ ರೀತಿ ಭ್ರಷ್ಟಾಚಾರದ ವಿರುದ್ಧ ಕೆಲಸ ನಿರ್ವಹಿಸುವೆ ಎಂದು ಐಪಿಎಸ್ ಅಧಿಕಾರಿ ಡಿ. ರೂಪಾ ಹೇಳಿದ್ದಾರೆ. ನಿರ್ಭಯಾ ಸೇಫ್ ಸಿಟಿ ಯೋಜನೆ ಟೆಂಡರ್ ಕುರಿತು ಜಟಾಪಟಿಗಿಳಿದಿದ್ದ ಐಪಿಎಸ್ ಅಧಿಕಾರಿಗಳಾದ ಡಿ.ರೂಪಾ ಹಾಗೂ ಹೇಮಂತ್ ನಿಂಬಾಳ್ಕರ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ದು, ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾವಣೆ ಮಾಡಿದೆ. ಈ ಕುರಿತಂತೆ ಮಾತನಾಡಿದ ಡಿ. ರೂಪಾ ಅವ್ರು, ‘ನಾಳೆಯಿಂದ ಹೊಸ ಹುದ್ದೆ ನಿಭಾಯಿಸಲಿದ್ದೇನೆ. ವರ್ಗಾವಣೆ ಆಗಿರೋದಕ್ಕೆ ಬೇಸರವಿಲ್ಲ. ಮುಂದೆಯೂ ಇದೇ ರೀತಿ ಭ್ರಷ್ಟಾಚಾರದ ವಿರುದ್ಧ ಕೆಲಸ ನಿರ್ವಹಿಸುವೆ. ನನ್ನ ವೃತ್ತಿ ಜೀವನದ ವರ್ಷಗಳಿಗಿಂತ ಹೆಚ್ಚು ಬಾರಿ ನಾನು ವರ್ಗಾವಣೆಯಾಗಿದ್ದೇನೆ. ತಪ್ಪು ತೋರಿಸುವುದು, ಸತ್ಯಾಂಶ ಎತ್ತಿ ಹಿಡಿಯುವುದು ಯಾವಾಗಲೂ ಅಪಾಯದಿಂದ ಕೂಡಿರುತ್ತೆ ಅನ್ನೋದು ಗೊತ್ತಿದೆ. ಆದ್ರೆ, ರಾಜಿಯಾಗದೆ ನನ್ನ ಕೆಲಸ ನಾನು ಮುಂದುವರಿಸುತ್ತೇನೆ’ ಎಂದರು.

Spread the love

ಬೆಂಗಳೂರು: ವರ್ಗಾವಣೆ ಆಗುವುದು ನನಗೆ ಬೇಸರವಿಲ್ಲ. ಮುಂದೆಯೂ ಇದೇ ರೀತಿ ಭ್ರಷ್ಟಾಚಾರದ ವಿರುದ್ಧ ಕೆಲಸ ನಿರ್ವಹಿಸುವೆ ಎಂದು ಐಪಿಎಸ್ ಅಧಿಕಾರಿ ಡಿ. ರೂಪಾ ಹೇಳಿದ್ದಾರೆ.

ನಿರ್ಭಯಾ ಸೇಫ್ ಸಿಟಿ ಯೋಜನೆ ಟೆಂಡರ್ ಕುರಿತು ಜಟಾಪಟಿಗಿಳಿದಿದ್ದ ಐಪಿಎಸ್ ಅಧಿಕಾರಿಗಳಾದ ಡಿ.ರೂಪಾ ಹಾಗೂ ಹೇಮಂತ್ ನಿಂಬಾಳ್ಕರ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ದು, ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾವಣೆ ಮಾಡಿದೆ.

ಈ ಕುರಿತಂತೆ ಮಾತನಾಡಿದ ಡಿ. ರೂಪಾ ಅವ್ರು, ‘ನಾಳೆಯಿಂದ ಹೊಸ ಹುದ್ದೆ ನಿಭಾಯಿಸಲಿದ್ದೇನೆ. ವರ್ಗಾವಣೆ ಆಗಿರೋದಕ್ಕೆ ಬೇಸರವಿಲ್ಲ. ಮುಂದೆಯೂ ಇದೇ ರೀತಿ ಭ್ರಷ್ಟಾಚಾರದ ವಿರುದ್ಧ ಕೆಲಸ ನಿರ್ವಹಿಸುವೆ. ನನ್ನ ವೃತ್ತಿ ಜೀವನದ ವರ್ಷಗಳಿಗಿಂತ ಹೆಚ್ಚು ಬಾರಿ ನಾನು ವರ್ಗಾವಣೆಯಾಗಿದ್ದೇನೆ. ತಪ್ಪು ತೋರಿಸುವುದು, ಸತ್ಯಾಂಶ ಎತ್ತಿ ಹಿಡಿಯುವುದು ಯಾವಾಗಲೂ ಅಪಾಯದಿಂದ ಕೂಡಿರುತ್ತೆ ಅನ್ನೋದು ಗೊತ್ತಿದೆ. ಆದ್ರೆ, ರಾಜಿಯಾಗದೆ ನನ್ನ ಕೆಲಸ ನಾನು ಮುಂದುವರಿಸುತ್ತೇನೆ’ ಎಂದರು.


Spread the love

About Laxminews 24x7

Check Also

ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್

Spread the love ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್ ಖಾನಾಪೂರ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ