ಬಿಡಾದಿ ದನಗಳನ್ನು ಗೋಶಾಲೆಗೆ ಕಳುಹಿಸಿ…ಶ್ರೀರಾಮಸೇನೆ ಹಿಂದೂಸ್ಥಾನ ಕಮಿಷ್ನರ್’ಗೆ ಮನವಿ
ಬೆಳಗಾವಿ ಮಹಾನಗರದಲ್ಲಿ ಹೆಚ್ಚುತ್ತಿರುವ ಬಿಡಾದಿ ದನಗಳನ್ನು ಗೋಶಾಲೆಗೆ ಕಳುಹಿಸಿ ಕೊಡಬೇಕೆಂದು ಆಗ್ರಹಿಸಿ, ಗ್ರಾಮೀಣ ಶ್ರೀರಾಮಸೇನೆ ಹಿಂದೂಸ್ಥಾನ ಆಗ್ರಹಿಸಿದೆ.
ಇಂದು ಈ ಕುರಿತಾದ ಮನವಿಯನ್ನು ಗ್ರಾಮೀಣ ಶ್ರೀರಾಮಸೇನೆ ಹಿಂದೂಸ್ಥಾನನ ಪದಾಧಿಕಾರಿಗಳು ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಅವರಿಗೆ ನೀಡಿದರು.
ಬೀದಿಯಲ್ಲಿ ದನಗಳು ರಸ್ತೆಯ ಮೇಲೆ ಕುಳಿತುಕೊಳ್ಳುತ್ತಿದ್ದು, ಇದರಿಂದಾಗಿ ಒಂದೆಡೇ ಸಂಚಾರ ದಟ್ಟಣೆಯಾದರೇ, ಇನ್ನೊಂದೆಡೇ ದನಕರುಗಳಿಗೆ ವಾಹನಗಳು ಗುದ್ದಿ ಗಾಯಗೊಳ್ಳುವ ಉದಾಹರಣೆಗಳಿವೆ.
ಬಿಡಾದಿ ದನಗಳನ್ನು ಜಿಲ್ಲಾಡಳಿತದ ವತಿಯಿಂದ ಗೋಶಾಲೆಗೆ ಕಳುಹಿಸಿ ಕೊಡಬೇಕು ಇಲ್ಲದಿದ್ದರೇ, ನಾವೇ ಅವುಗಳನ್ನು ಗೋಶಾಲೆ ಕಳುಹಿಸುತ್ತೇವೆಂದು ತಾಲೂಕಾ ಪ್ರಮುಖರಾದ ಭರತ್ ಪಾಟೀಲ್ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಶ್ರೀರಾಮಸೇನೆ ಹಿಂದೂಸ್ಥಾನ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.
Laxmi News 24×7