Breaking News

ಮಹಾನಗರ ಪಾಲಿಕೆ ವಿರುದ್ಧ ಆಮ್ ಆದ್ಮಿ ಅಸಮಾಧಾನ

Spread the love

ಮಹಾನಗರ ಪಾಲಿಕೆ ವಿರುದ್ಧ ಆಮ್ ಆದ್ಮಿ ಅಸಮಾಧಾನ
ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ ಸಂಬಂಧವಿರದ ದಾಖಲಾತಿಗಳ ಬೇಡಿಕೆಗಳನ್ನ ಇಡದೇ, ಕಡಿಮೆ ದಾಖಲಾತಿಗಳನ್ನು ಪಡೆದು ಇ-ಆಸ್ತಿ ನೋಂದಣಿ ಮಾಡಿಕೊಳ್ಳಬೇಕೆಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ವಿಜಯ್ ಪಾಟೀಲ್ ಹೇಳಿದರು.
ಬೆಳಗಾವಿ ನಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಇ-ಆಸ್ತಿ ಮಹತ್ವದ ಪ್ರಕ್ರಿಯೆಯಾಗಿದೆ. ಬೆಂಗಳೂರಿನಲ್ಲಿ ಕೇವಲ 4 ದಾಖಲೆಗಳನ್ನು ಕೇಳುತ್ತಿರುವಾಗ ಬೆಳಗಾವಿಯಲ್ಲಿ ಹತ್ತಾರು ದಾಖಲೆಗಳನ್ನು ಕೇಳುತ್ತಿದ್ದಾರೆ. ಇದರಿಂದ ಜನ ಸಾಮಾನ್ಯರಿಗೆ ಕಿರಿಕಿರಿಯಾಗುತ್ತಿದೆ. ಸಿಟಿಎಸ್ ಇದ್ದವರಿಗೆ ಇ-ಆಸ್ತಿ ನೀಡಬೇಕು. ನೂರಾರು ವರ್ಷಗಳ ಕಾಲ ಹಳೆಯದಾದ ಸಾಲ ಬಾಧ್ಯತಾ ಪ್ರಮಾಣಪತ್ರ ನೀಡುವುದು ಕಷ್ಟಕರ. ಸಾಲ ಬಾಧ್ಯತಾ ಪ್ರಮಾಣಪತ್ರಕ್ಕೂ ಮತ್ತು ಇ- ಆಸ್ತಿಗೆ ಯಾವುದೇ ಸಂಬಂಧವಿಲ್ಲ ಎಂದರು.
ಇನ್ನು ಬಿ-ಖಾತಾ ನೋಂದಣಿ ಕುರಿತು ಮೊದಲೂ ಜನರಿಗೆ ಸ್ಪಷ್ಟತೆಯನ್ನು ನೀಡಬೇಕು. ಜಿಲ್ಲಾಧಿಕಾರಿಗಳು ಮತ್ತು ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರು ಈ ಕುರಿತು ಮಾಧ್ಯಮಗೋಷ್ಟಿಯನ್ನು ನಡೆಸಿ ಮಾಹಿತಿಯನ್ನು ನೀಡಬೇಕು. ಎರಡುವರೆ ಲಕ್ಷ ಆಸ್ತಿಗಳಿರುವುದಾಗಿ ಮಹಾನಗರ ಪಾಲಿಕೆಯೇ ಮಾಹಿತಿ ನೀಡುತ್ತಿರುವಾಗ, ದಾಖಲಾತಿಗಳನ್ನು ಕಡಿಮೆ ಪಡೆದು, ಇ- ಆಸ್ತಿಯ ನೋಂದಣಿ ಹೆಚ್ಚಾಗಬೇಕು. ಸಿ.ಟಿ.ಎಸ್. ಆಧಾರದ ಮೇಲೆ ಮನೆ ಮನೆಗೆ ತೆರಳಿ ಇ-ಆಸ್ತಿಯನ್ನು ನೋಂದಾಯಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯದರ್ಶಿಗಳಾದ ಪವನ್ ಕುಮಾರ್ , ಸೋನಿಯಾ ಡಿಸೋಜಾ ದಕ್ಷಿಣ ಜಿಲ್ಲಾದ್ಯಕ್ಷ ಸುದೀಪ್ ನೇಸರಕರ, ಯುವ ಘಟಕದ ಅಧ್ಯಕ್ಷರಾದ ಜುನೇದ್, ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Spread the love

About Laxminews 24x7

Check Also

ಮಣ್ಣಿನ ಆರೋಗ್ಯ ಮತ್ತುನೀರಿನ ಸಮಗ್ರ ನಿರ್ವಹಣೆ ಯೋಜನೆಗೆ ಸಿಎಂಸಿದ್ದರಾಮಯ್ಯ ಚಾಲನೆ

Spread the loveಬೆಳಗಾವಿ: ನಮ್ಮದು ರೈತ ಪರ ಸರ್ಕಾರ. ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ ನಿರ್ವಹಣೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ