Breaking News

ವಿಪತ್ತುಗಳ ನಡುವೆ ಸತ್ಯ ಎತ್ತಿಹಿಡಿಯುವಂತೆ ಪ್ರೇರೇಪಿಸುವ ಇಮಾಮ್ ಹುಸೇನ್ –

Spread the love

ಹೈದರಾಬಾದ್: ದೇಶಾದ್ಯಂತ ಮುಸ್ಲಿಮರು ಇಂದು ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳಾದ, ಮೊಹರಂನ 10ನೇ ದಿನವಾದ ಅಶುರಾವನ್ನು ಆಚರಿಸಿದರು. ಅಶುರಾ ಎಂಬುದು ಅರೇಬಿಕ್ ಪದ ‘ಆಶ್ರಾ’ದಿಂದ ಬಂದಿದೆ. ಇದರರ್ಥ ಹತ್ತು. ಈ ದಿನ ಶಿಯಾ ಮತ್ತು ಸುನ್ನಿ ಎರಡೂ ಸಮುದಾಯಗಳಿಗೂ ಅತ್ಯಂತ ಮಹತ್ವದ್ದಾಗಿದೆ.

ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಮತ್ತು ಇಸ್ಲಾಂ ಧರ್ಮದ ಕೇಂದ್ರ ವ್ಯಕ್ತಿಯಾಗಿದ್ದ ಇಮಾಮ್ ಹುಸೇನ್ ಅವರು ಕರ್ಬಲಾ ಯುದ್ಧದಲ್ಲಿ ಕೊಲ್ಲಲ್ಪಟ್ಟ ದಿನದ ಸ್ಮರಣಾರ್ಥವಾಗಿ ಅಶುರಾ ಆಚರಿಸಲಾಗುತ್ತದೆ.

ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದು, “ಹಜರತ್ ಇಮಾಮ್ ಹುಸೇನ್ (ಎಎಸ್) ಮಾಡಿದ ತ್ಯಾಗಗಳು ಅವರ ಸದಾಚಾರದ ಬದ್ಧತೆಯನ್ನು ಒತ್ತಿ ಹೇಳುತ್ತವೆ. ಪ್ರತಿಕೂಲ ಪರಿಸ್ಥಿತಿಯಲ್ಲಿ ಸತ್ಯವನ್ನು ಎತ್ತಿಹಿಡಿಯಲು ಅವರು ಜನರನ್ನು ಪ್ರೇರೇಪಿಸುತ್ತಾರೆ” ಎಂದು ಬರೆದುಕೊಂಡಿದ್ದಾರೆ.ಪ್ರವಾದಿ ಮೊಹಮ್ಮದ್ ಅವರ ಆಜ್ಞೆಯಂತೆ ಸುನ್ನಿ ಮುಸ್ಲಿಮರು ಸ್ವಯಂಪ್ರೇರಿತ ಉಪವಾಸದ ಮೂಲಕ ಅಶುರಾ ಆಚರಿಸುತ್ತಾರೆ. ಈ ದಿನವು ಪ್ರವಾದಿ ಮೋಶೆ ಕೆಂಪು ಸಮುದ್ರವನ್ನು ವಿಭಜಿಸಿದ್ದನ್ನೂ ಸೂಚಿಸುತ್ತದೆ.


Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ