Breaking News

ಮೂಕಜೀವಿಗಳ ಪ್ರಾಣ ಉಳಿಸುವ ಕರುಣಾಮಯಿ ಸರ್ಜನ್​​ಗಳು

Spread the love

ದಾವಣಗೆರೆ: ನಗರದಲ್ಲಿರುವ ಏಕೈಕ ಪಾಲಿಕ್ಲಿನಿಕ್ ಇಡೀ ರಾಜ್ಯದಲ್ಲಿ ಹೆಸರುವಾಸಿಯಾಗಿದೆ. ಪಶುಪಾಲನೆ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆಯ ಪಾಲಿಕ್ಲಿನಿಕ್ ಜಾನುವಾರುಗಳು ಹಾಗೂ ಪ್ರಾಣಿಗಳ ಜೀವ ಉಳಿಸಲು ಶ್ರಮಿಸುತ್ತಿದೆ.

ಇಲ್ಲಿ ನೂರಾರು ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿವೆ. ಸಿ ಸೆಕ್ಷನ್‌ಗೂ ಈ ಆಸ್ಪತ್ರೆ ಹೆಸರುವಾಸಿ. ಇಲ್ಲಿನ ಕರುಣಾಮಯಿ ಸರ್ಜನ್​​ಗಳು ಆಪರೇಷನ್‌ಗಳನ್ನು ಮಾಡಿ ಇಂದಿಗೂ ಸಾವಿರಾರು ಮೂಕಜೀವಿಗಳ ಪ್ರಾಣ ಉಳಿಸಲು ಟೊಂಕ ಕಟ್ಟಿ ನಿಂತಿದ್ದಾರೆ. ಅಲ್ಲದೆ, ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಿಂದ ಪ್ರಾಣಿಗಳು, ಜಾನುವಾರುಗಳನ್ನು ಹಿಡಿದು ಚಿಕಿತ್ಸೆ ಅರಸಿ ಮಾಲೀಕರು ಈ ಪಾಲಿಕ್ಲಿನಿಕ್​ಗೆ ಬರುತ್ತಾರೆ. ಇಡೀ ಜಿಲ್ಲೆಯಲ್ಲಿ ಪಶುಪಾಲನೆ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆಯ ಪಾಲಿಕ್ಲಿನಿಕ್ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುತ್ತಿದೆ.

ಆಸ್ಪತ್ರೆಯಲ್ಲಿವೆ ಸುಸಜ್ಜಿತ ಉಪಕರಣಗಳು: ನಗರದ ಅರುಣ್ ವೃತ್ತದಲ್ಲಿರುವ ಪಾಲಿಕ್ಲಿನಿಕ್ ಪ್ರಮುಖ ಶಿಫಾರಸ್ಸು ಪಶು ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿರುವ ಪಶು ಆಸ್ಪತ್ರೆಗಳಲ್ಲಿ ಸೇವೆ ಸಿಗದೆ ಇದ್ದಾಗ ಈ ಪಾಲಿಕ್ಲಿನಿಕ್​​ಗೆ ಶಿಫಾರಸು ಮಾಡಲಾಗುತ್ತದೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ