ಬೆಳಗಾವಿ : ಹದಗೆಟ್ಟ ರಸ್ತೆ ಸುಧಾರಣೆ ಸೇರಿದಂತೆ ವಿವಿಧ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಪಾಲಿಕೆ ಆಯುಕ್ತರಿಗೆ ಮನವಿ ಅರ್ಪಿಸಿದ ಬಸವನ ಕುಡಚಿ ಕೆಎಚ್ಬಿ ಹಾಗೂ ದೇವರಾಜ್ ಅರಸು ಕಾಲೋನಿ ನಿವಾಸಿಗಳು
ಹತ್ತು ಹಲವು ಸಮಸ್ಯೆಗಳಿಂದ ಬಳಲುತ್ತಿರುವ
ಬೆಳಗಾವಿ ಬಸವನ ಕುಡಚಿ ಕೆಎಚ್ ಬಿ ಕಾಲೋನಿ
ಮೂಲಸೌಕರ್ಯ ಕೊರತೆಯಿಂದ ಉಂಟಾದ ಸಮಸ್ಯೆ ಪರಿಹರಿಸಲು
ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ ನಿವಾಸಿಗಳು
ಹದಿಗೆಟ್ಟ ರಸ್ತೆ ಸುಧಾರಣೆ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಪರಿಹರಿಸಲು ಬೆಳಗಾವಿ ಬಸವನ ಕುಡಚಿ ಕೆಎಚ್ ಬಿ ಹಾಗೂ ದೇವರಾಜ್ ಅರಸ್ ಕಾಲೋನಿಯ ನಿವಾಸಿಗಳು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು
ಈ ಕಾಲೋನಿಯಲ್ಲಿ ನೂರಾರು ಕುಟುಂಬಗಳು ವಾಸಿಸುತ್ತಿದ್ದರೂ ಮೂಲ ಸೌಕರ್ಯ ಮಾತ್ರ ಮರಿಚಿಕೆಯಾಗಿದೆ ಬೆಳಗದ ಬೀದಿ ದೀಪಗಳು, ಹದಗೆಟ್ಟ ರಸ್ತೆಗಳು, ಹೊಲಸು ತುಂಬಿರುವ ಚರಂಡಿಗಳು, ಹತ್ತು ಹದಿನೈದು ದಿನಕ್ಕೊಮ್ಮೆಡ ಬರುವ ಕುಡಿಯುವ ನೀರು
ಹೀಗೆ ಇಲ್ಲಿ ಹಲವು ವರ್ಷಗಳಿಂದ ಸಮಸ್ಯೆಗಳು ಸಾಲುಗಟ್ಟಿವೆ
ಈ ಕುರಿತು ಇನ್ ನ್ಯೂಸ್ ನೊಂದಿಗೆ ಮಾತನಾಡಿದ ಕನ್ನಡಪರ ಹೋರಾಟಗಾರ ಮಹಾಂತೇಶ ರಣಗಟ್ಟಿಮಠ, ಬೆಳಗಾವಿ 58ನೇ ವಾರ್ಡ್ ಬಸವನಕುಡಚಿ ಕೆಎಚ್ ಬಿ ಕಾಲೋನಿಯಲ್ಲಿ ಕಳೆದ 14 ವರ್ಷಗಳಿಂದ ಇಲ್ಲಿಯ ನಿವಾಸಿಗಳು ಸಮಸ್ಯೆಗಳಿಂದ ವನವಾಸ ಅನುಭವಿಸುತ್ತಿದ್ದಾರೆ.ಮೂಲಭೂತ ಸೌಕರ್ಯ ಕೊಡುವಲ್ಲಿ ಪಾಲಿಕೆ ಹಾಗೂ ಗೃಹ ಮಂಡಳಿ ಸಂಪೂರ್ಣವಾಗಿ ವಿಫಲವಾಗಿದೆ. ಇಲ್ಲಿ ಸರಿಯಾದ ವಿದ್ಯುತ್ ಸರಬರಾಜು ಇಲ್ಲ ಗಟಾರಗಳ ಸ್ವಚ್ಛತೆ ಇಲ್ಲ ರಸ್ತೆಗಳು ತೀವ್ರವಾಗಿ ಹದಗೆಟ್ಟಿವೆ, ನಿಯಮಿತವಾಗಿ ನೀರನ್ನು ಸಹ ಬಿಡುತ್ತಿಲ್ಲ ಕಾಲೋನಿ ಹತ್ತು ಹಲವು ಸಮಸ್ಯೆಗಳ ಆಗರವಾಗಿದೆ. ಬೆಳಗಾವಿ ನಗರಕ್ಕೆ ಸಾವಿರಾರು ಕೋಟಿ ಅನುದಾನ ಬಂದರೂ ಕೆಲವೊಂದು ಬಡಾವಣೆಗಳಿಗೆ ಮಾತ್ರ ಅಭಿವೃದ್ಧಿ ಮಾಡುತ್ತಿದ್ದಾರೆ ನಮ್ಮ ಕಾಲೋನಿ ಅನಾಥವಾಗಿದೆ
ದೇವರಾಜ್ ಅರಸು ಕಾಲೋನಿ ಹಾಗೂ ಕೆಎಚ್ಬಿ ಕಾಲೋನಿ ಸಮಸ್ಯೆಗಳನ್ನು ಪಾಲಿಕೆ ಅವರು ಶೀಘ್ರ ಬಗೆ ಹರಿಸದಿದ್ದರೆ ಕರವೇ ಹಾಗೂ ಸ್ಥಳೀಯ ನಿವಾಸಿಗಳು ಸೇರಿ ವಿಮಾನ ನಿಲ್ದಾಣ ರಸ್ತೆಯನ್ನು ಬಂದ್ ಮಾಡಿ ಉಗ್ರ ಹೋರಾಟ ಮಾಡಲಾಗುವುದು ಎಂಬ ಎಚ್ಚರಿಕೆ ನೀಡಿದರು
ನಂತರ ಮಹಾನಗರ ಪಾಲಿಕೆ ಆಯುಕ್ತೆ ಬಿ ಶುಭ ಅವರಿಗೆ ಕಾಲೋನಿ ನಿವಾಸಿಗಳು ಮನವಿ ಅರ್ಪಿಸಿದರು
ಈ ಸಂದರ್ಭದಲ್ಲಿ ಸುಭಾಷಚಂದ್ರ ಮುಷ್ಟಗಿ, ಕಲ್ಯಾಣಮಠ, ಸಂಜಯ ಬಡಿಗೇರ್, ಬಸವರಾಜ್ ಮೋದಗೇಕರ ತೊರಗಲ್ಮಠ, ಉದ್ದಣ್ಣವರ ಸೇರಿದಂತೆ ಇತರರು ಉಪಸ್ಥಿತರಿದ್ದರು.