Breaking News

ಕೆ.ಎಲ್.ಇ.ಜೀರಗೆ ಸಭಾಂಗಣದಲ್ಲಿ ನಡೆಯುತ್ತಿರುವ “ವಿಜನ್ ಕರ್ನಾಟಕ 2025 “

Spread the love

ಬೆಳಗಾವಿಯ ಕೆ.ಎಲ್.ಇ.ಜೀರಗೆ ಸಭಾಂಗಣದಲ್ಲಿ ನಡೆಯುತ್ತಿರುವ “ವಿಜನ್ ಕರ್ನಾಟಕ 2025 “
ಪ್ರದರ್ಶನದ ಎರಡನೇ ದಿನ ಬೆಳಗಾವಿಯ ಎಂಟು ಸಾವಿರ ಜನ ಭೇಟಿ ಕೊಟ್ಟಿದ್ದಾರೆ
ಬೆಳಗಾವಿ, ದಿ. 12 (ಪ್ರತಿನಿಧಿ) : ಸಂಸದರಾದ ಜಗದೀಶ ಶೆಟ್ಟರ ಇವರ ಪ್ರೇರಣೆ ಮತ್ತು ಮಾರ್ಗ ದರ್ಶನದಂತೆ ದಿಲ್ಲಿಯಲ್ಲಿಯ ಪ್ರಯಾಸ ಎಕ್ಸಿಬಿಷನ್ ಪರವಾಗಿ ಕೆ.ಎಲ್.ಇ. ಕನ್ವೆನ್ಸನ ಹಾಲ್ ನಲ್ಲಿ ನಡೆಯುತ್ತಿರುವ ‘ವಿಜನ್ ಕರ್ನಾಟಕ 2025’ ರ ಮಹಾಪ್ರದರ್ಶನಕ್ಕೆ ಎರಡನೇ ದಿನದಂದು ಬೆಳಗಾವಿಯ ಎಂಟು ಸಾವಿರ ಜನರು ಪ್ರದರ್ಶನವನ್ನು ವೀಕ್ಷಿಸಿದರು. ಪ್ರದರ್ಶನವು ಜೂನ್ 13 ರಂದು ಶೆಟ್ಟರ ಇವರ ಉಪಸ್ಥಿತಿಯಲ್ಲಿ ಸಮಾರೋಪಗೊಳ್ಳಲಿದೆ.
ಬೆಳಗಾವಿಯಲ್ಲಿಯ ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಈ ಪ್ರದರ್ಶನ ನೋಡಿ ಆನಂದಿಸಿದರು. ಮೊದಲನೆ ದಿನದ ಯಶಸ್ವಿ ಪ್ರತಿಕ್ರಿಯೆಯಿಂದ ಎರಡನೆ ದಿನವೂ ವಿದ್ಯಾರ್ಥಿಗಳು, ಪಾಲಕರು, ಬೆಳಗಾವಿಯಲ್ಲಿಯ ವ್ಯಾಪಾರಸ್ಥರು, ಉದ್ಯೋಜಕರು ಪ್ರದರ್ಶನಕ್ಕೆ ಭೇಟಿ ಕೊಟ್ಟು ಸಂತಸ ವ್ಯಕ್ತಪಡಿಸಿದರು. ಈ ಪ್ರಕಾರದ ಪ್ರದರ್ಶನ ಬೆಳಗಾವಿಯಲ್ಲಿ ಮೊದಲ ಬಾರಿ ಪ್ರದರ್ಶನಗೊಳ್ಳುತ್ತಿದೆ ಎಂದು ಹೇಳಿದರು.
ಮೂರು ದಿನಗಳ ಕಾಲ ನಡೆಯುವ ಈ ಪ್ರದರ್ಶನವು ಶುಕ್ರವಾರ ದಿ. 13 ರಂದು ಮಧ್ಯಾಹ್ನ 1-30 ಕ್ಕೆ ಮುಕ್ತಾಯಗೊಳ್ಳಲಿದ್ದು, ಇದರಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಉಪಸ್ಥಿತರಿರಬೇಕೆಂದು ಗ್ರಾಮೀಣ ಜಿಲ್ಲಾಧ್ಯಕ್ಷರಾದ ಸುಭಾಷ ಪಾಟೀಲ, ನಗರ ಜಿಲ್ಲಾಧ್ಯಕ್ಷರಾದ ಗೀತಾ ಸುತಾರ ಮತ್ತು ಜಿಲ್ಲಾ ಮಹಾನಗರ ಸೆಕ್ರೆಟರಿಯಾದ ನಾಗರಾಜ ಪಾಟೀಲರೊಂದಿಗೆ ಇನ್ನಿತರರು ವಿನಂತಿಸಿಕೊಂಡಿದ್ದಾರೆ.

Spread the love

About Laxminews 24x7

Check Also

ಬೆಳಗಾವಿ ಮಾರ್ಕಂಡೇಯ ನಗರದಲ್ಲಿ ಚರಂಡಿಗಳ ಸ್ವಚ್ಛತೆ

Spread the love ಬೆಳಗಾವಿ ಮಾರ್ಕಂಡೇಯ ನಗರದಲ್ಲಿ ಚರಂಡಿಗಳ ಸ್ವಚ್ಛತೆ ಬೆಳಗಾವಿಯ ಮಾರ್ಕಂಡೇಯ ನಗರದಲ್ಲಿ ಮಹಾನಗರ ಪಾಲಿಕೆಯ ವತಿಯಿಂದ ಚರಂಡಿಗಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ