Breaking News

ಸಿಎಂ-ಡಿಸಿಎಂಗೆ ಹೈಕಮಾಂಡ್ ಬುಲಾವ್,ಸತೀಶ್ ಜಾರಕಿಹೊಳಿ ಕೂಡ ದೆಹಲಿ ಪ್ರಯಾಣ

Spread the love

ಸಿಎಂ-ಡಿಸಿಎಂಗೆ ಹೈಕಮಾಂಡ್ ಬುಲಾವ್ ಬೆನ್ನಲ್ಲೆ…
ಆರ್ಸಿಬಿ ಸಂಭ್ರಮಾಚರಣೆ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಮತ್ತು 11 ಜನರ ಸಾವಿನ ಬಗ್ಗೆ ಕೇಳಲು ಹೈಕಮಾಂಡಗೆ ಹಕ್ಕಿದೆ…
ಸಚಿವ ಸತೀಶ್ ಜಾರಕಿಹೊಳಿ ಕೂಡ ದೆಹಲಿ ಪ್ರಯಾಣ…ಹಲವು ಅನುಮಾನಗಳಿಗೆ ಎಡೆ…
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿ ತಲುಪಿದ್ದಾರೆ ಮತ್ತು ನಿನ್ನೆ ಬೆಂಗಳೂರಲ್ಲಿದ್ದ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಸಹ ದೆಹಲಿಗೆ ತೆರಳಿದ್ದು, ಚರ್ಚಾಗ್ರಾಸವಾಗಿದೆ.
ದೆಹಲಿಯಲ್ಲಿ ಮಾಧ್ಯಮಗಾರರೊಂದಿಗೆ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ ಅವರು ಸಿಎಂ, ಡಿಸಿಎಂ ಭೇಟಿಯ ನಡುವೆ ಯಾವುದೇ ಸಂಬಂಧವಿಲ್ಲ. ತಾವು ದಿಢೀರನೆ ದೆಹಲಿಗೆ ಬಂದಿಲ್ಲ. ನಾವು ಬೇರೆ ಬೇರೆ ಸಚಿವರ ಭೇಟಿಗೆ ದೆಹಲಿಗೆ ಬಂದಿದ್ದು. ಇವು ಪೂರ್ವ ನಿಯೋಜಿತ ಭೇಟಿಗಳು ಎಂದರು.
ಆರ್ಸಿಬಿ ಸಂಭ್ರಮಾಚರಣೆ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಮತ್ತು 11 ಜನರ ಸಾವಿನ ಬಗ್ಗೆ ಕೇಳಲು ಹೈಕಮಾಂಡಗೆ ಹಕ್ಕಿದೆ. ಯಾವ ವಿಷಯಕ್ಕೆ ಹೈಕಮಾಂಡ್ ಕರೆದಿದ್ದಾರೆ ಗೊತ್ತಿಲ್ಲ.
ಆದರೇ, ಕಾಲ್ತುಳಿತ ದೊಡ್ಡ ಘಟನೆಯಾಗಿದ್ದ ಈ ಬಗ್ಗೆ ಚರ್ಚೆಯಾಗುವುದು ಸ್ವಾಭಾವಿಕ ಎಂದಿದ್ದಾರೆ. ಇಂಥ ಘಟನೆಗಳು ನಡೆದಾಗ ಹೈಕಮಾಂಡ್ಗೆ ಮುಖ್ಯಮಂತ್ರಿಯವರು ವಿವರಣೆ ನೀಡುತ್ತಾರೆ ಎಂದರು.

Spread the love

About Laxminews 24x7

Check Also

ಎಲ್ಲೆಡೆ ಸಮರ್ಪಕವಾಗಿ ಮಳೆ ಆಗುತ್ತಿದ್ದರಿಂದ ಮೊಸಳೆ ಗಳು ಹಳ್ಳಗಳಲ್ಲಿ

Spread the love ಎಲ್ಲೆಡೆ ಸಮರ್ಪಕವಾಗಿ ಮಳೆ ಆಗುತ್ತಿದ್ದರಿಂದ ಮೊಸಳೆ ಗಳು ಹಳ್ಳಗಳಲ್ಲಿ ಸಚರಿಸುತ್ತಿವೆ ಅದರಲ್ಲಿ ಪ್ರತ್ಯಕ್ಷ; ಗ್ರಾಮಸ್ಥರಿಂದ ಮೊಸಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ