Breaking News

ಸಮಾಜ ಸೇವೆಯನ್ನು ನಮ್ಮ ಜೀವನದ ಒಂದು ಭಾಗ ಮಾಡಿಕೊಳ್ಳೋಣ :

Spread the love

ಸಮಾಜ ಸೇವೆಯನ್ನು ನಮ್ಮ ಜೀವನದ ಒಂದು ಭಾಗ ಮಾಡಿಕೊಳ್ಳೋಣ :
ಕಾಗವಾಡ ಜೈನ ಸಮಾವೇಶದಲ್ಲಿ ರಾಜ್ಯಪಾಲ ಥಾವರಚೆಂದ ಗೆಹ್ಲೊಟ್ ಕರೆ…
ವರ್ಷದೊಳಗೆ ಜೈನ ಸಮಾಜದ ಬೇಡಿಕೆಗಳು ಈಡೇರದಿದ್ದರೆ ಸಲ್ಲೇಖನ ವ್ರತ : ಗುಣಧರನಂದಿ ಸ್ವಾಮೀಜಿ
ಪ್ರಸ್ತುತ ಇಡೀ ಜಗತ್ತು ಸ್ವ-ಕಲ್ಯಾಣ, ಆಂತರಿಕ ಶಾಂತಿ ಮತ್ತು ಆಧ್ಯಾತ್ಮಿಕ ಅಭಿವೃದ್ಧಿಗಾಗಿ ಭಾರತದ ಕಡೆಗೆ ನೋಡುತ್ತಿದೆ. ಮಹಾವೀರ ಸ್ವಾಮಿಗಳ ಜೀವನ-ತತ್ವ ಮತ್ತು ಬೋಧನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ನಾವು ಸಮಾಜ ಮತ್ತು ಜಗತ್ತಿನಲ್ಲಿ ಶಾಂತಿ, ಸಾಮರಸ್ಯ ಮತ್ತು ಸಹಾನುಭೂತಿಯ ವಾತಾವರಣವನ್ನು ಸೃಷ್ಟಿಸಬಹುದು.” ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.
1008 ಭಟ್ಟಾರಕ ಶ್ರೀ ಆದಿನಾಥ ದಿಗಂಬರ ಜೈನ ಸಮಾಜ ಟ್ರಸ್ಟ್ ಆಯೋಜಿಸಿದ್ದ “ಜೈನ ಸಮ್ಮೇಳನ”ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.”ನಮ್ಮ ಸಾಂಸ್ಕೃತಿಕ ಸಂಪ್ರದಾಯವು ಬಹಳ ಪ್ರಾಚೀನವಾಗಿದೆ ಮತ್ತು ಪ್ರಾಚೀನ ಕಾಲದಿಂದಲೂ “ವಾಸುದೇವಂ ಕುಟುಂಬಕಂ” ತತ್ವಶಾಸ್ತ್ರ ಮತ್ತು ಧ್ಯಾನದ ಮೇಲೆ ಕೇಂದ್ರೀಕೃತವಾಗಿದೆ ಮತ್ತು “ಸರ್ವೇ ಭವಂತು ಸುಖಿನೋ, ಸರ್ವೇ ಸಂತು ನಿರಾಮಯ” ಎಂಬ ಮನೋಭಾವದಿಂದ ಪ್ರೇರಿತವಾಗಿದೆ ಮತ್ತು ಯಾವಾಗಲೂ ವಿಶ್ವ ಸಹೋದರತ್ವ, ವಿಶ್ವ ಶಾಂತಿ ಮತ್ತು ಸಮಾನತೆ ಮತ್ತು ಸಾಮರಸ್ಯವನ್ನು ಪ್ರೇರೇಪಿಸುತ್ತದೆ” ಎಂದರು.ಈ ಸಮ್ಮೇಳನದಿಂದ, ಹೊಸ ಆಲೋಚನೆಗಳು, ಹೊಸ ನಿರ್ಣಯಗಳು ಮತ್ತು ಹೊಸ ಪ್ರಯಾಣ ಪ್ರಾರಂಭವಾಗಲಿದೆ.
ನಾವು ಜೀವನದಲ್ಲಿ ಸತ್ಯ, ಅಹಿಂಸೆ ಮತ್ತು ಅನಿಯಂತ್ರಿತತೆಯನ್ನು ಅಳವಡಿಸಿಕೊಳ್ಳುವ. ಮಕ್ಕಳು ಮತ್ತು ಯುವಕರಿಗೆ ಧಾರ್ಮಿಕ ಶಿಕ್ಷಣವನ್ನು ನೀಡುವ. ಸಮಾಜ ಸೇವೆಯನ್ನು ನಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳುವ. ನಾವು ತೀರ್ಥಯಾತ್ರೆಯ ಸ್ಥಳಗಳನ್ನು ರಕ್ಷಿಸುವ ಮತ್ತು ನಿಯಮಿತವಾಗಿ ಸತ್ಸಂಗದಲ್ಲಿ ಭಾಗವಹಿಸುವ ನಿರ್ಣಯವನ್ನು ಒಟ್ಟಾಗಿ ತೆಗೆದುಕೊಳ್ಳೋಣ ಎಂದು ಕರೆ ನೀಡಿದರು.
ಇನ್ನು ರಾಷ್ಟ್ರಸಂಸ್ಥೆ ಗುಣಧರನಂದಿ ಸ್ವಾಮೀಜಿ ಅವರು ರಾಜ್ಯ ಸರ್ಕಾರಕ್ಕೆ ಸುಮಾರು 8 ಬೇಡಿಕೆಗಳ ಮನವಿ ನೀಡಿದ್ದೇವೆ ಅದರಲ್ಲಿ ಕೆಲ ಬೇಡಿಕೆಗಳು ಈಡೇರಿಸಿದ್ದಾರೆ ಇದರಲ್ಲಿ ಜೈನ ಸಮಾಜದ ಸ್ವತಂತ್ರ ನಿಗಮ ಮಂಡಳ ಸ್ಥಾಪನೆ ಮಾಡಬೇಕೆಂದರು. ಜೈನ್ ಸಮಾಜದ ತೀರ್ಥಕ್ಷೇತ್ರ ಶ್ರೀ ಸಂವೇದ ಶಿಖರಜಿ ದೇವರ ದರ್ಶನಕ್ಕಾಗಿ ಮಹಿಳೆಯರಿಗಾಗಿ ವಿಶೇಷ ಸೌಲಭ್ಯ ನೀಡಬೇಕು, ಸಮಾಜದ ವಿದ್ಯಾರ್ಥಿಗಳಿಗೆ ಶಿಶುವೇತನ ನೀಡಬೇಕು ಈ ಬೇಡಿಕೆಗಳು ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಹಾಗೂ ಅಲ್ಪಸಂಖ್ಯಾತರ ಇಲಾಖೆ ಸಚಿವರು ಈ ಮೊದಲು ನೀಡುತ್ತೇವೆ ಎಂದು ಘೋಷಣೆ ಮಾಡಿದ್ದು ವಿಳಂಬ ಧೋರಣೆಯನ್ನು ಅನುಸರಿಸದೇ ಕೂಡಲೇ ತಮ್ಮ ನಿರ್ಣಯ ಕೈಗೊಳ್ಳಬೇಕು. ಇಲ್ಲದಿದ್ದರೇ ಶಾಂತಿಯುತವಾಗಿ ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.
ಮಾಜಿ ಉಪಮುಖ್ಯಮಂತ್ರಿ ಅಥಣಿ ಶಾಸಕ ಲಕ್ಷ್ಮಣ್ ಸವದಿ ಮಾತನಾಡಿ ಜೈನ ಸಮಾಜದ ಈ ಬೇಡಿಕೆಗಳು ಸೂಕ್ತವಾಗಿದ್ದು ಅವುಗಳನ್ನು ಈಡೇರಿಸುವುದು ನಮ್ಮ ಪಕ್ಷದ ಜವಾಬ್ದಾರಿಯಾಗಿದೆ, ಕಾರಣ ನಮ್ಮ ಪಕ್ಷಕ್ಕೆ ಹಸ್ತದ ಚಿಹ್ನೆ ನೀಡಿದವರು ಇದೇ ಶೇಡಬಾಳ ಗ್ರಾಮದ ವಿದ್ಯಾನಂದ ಮುನಿ ಮಹಾರಾಜರು. ದೇಶ ಹಾಗೂ ರಾಜ್ಯದಲ್ಲಿ ನಮ್ಮ ಪಕ್ಷ ಹಸ್ತ ಚಿನ್ಹೆಯ ಮೇಲೆ ನಿಂತಿದೆ. ವಿಳಂಬ ಮಾಡದೇ ಇವರ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಗಮನ ಸೆಳೆಯುವುದಾಗಿ ತಿಳಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ ಮಾತನಾಡಿ ಬೆಳಗಾವಿಯಲ್ಲಿ ಇಡಿ ಬೇಡಿಕೆಗಾಗಿ ಎರಡನೇ ಅಧಿವೇಶನ ಜರುಗಿತು ಅಲ್ಲಿಗೆ ಉಪಮುಖ್ಯಮಂತ್ರಿಗಳು ಇಲ್ಲಿಗೆ ಮೂರನೇ ಸಮಾಜದ ಸಮಾವೇಶ ಹಮ್ಮಿಕೊಂಡಿದ್ದಿರಿ ಕಾಂಗ್ರೆಸ್ ಪಕ್ಷದ ಲಕ್ಷ್ಮಣ್ ಸವದಿ, ಕಾಗವಾಡ ಶಾಸಕ ರಾಜು ಕಾಗೆ, ಚಿಕ್ಕೋಡಿ ಶಾಸಕ ಗಣೇಶ್ ಹುಕ್ಕೇರಿ ಸೇರಿದಂತೆ ಎಲ್ಲ ಕಾಂಗ್ರೆಸ್ ಪಕ್ಷದ ಶಾಸಕರು ಮುಖ್ಯಮಂತ್ರಿಗಳ ಮೇಲೆ ಈ ಬೇಡಿಕೆಗಳಿಗಾಗಿ ಒತ್ತಾಯಿಸಿರಿ ನಾವು ನಿಮ್ ಬೆಂಬಲಕ್ಕೆ ಇದ್ದೇವೆ ಎಂದು ಹೇಳಿದರು.
ಕಾಗವಾಡ ಶಾಸಕ ರಾಜು ಕಾಗೆ ಅವರು ಕೂಡ ತಮ್ಮ ಅಭಿಪ್ರಾಯವನ್ನು ತಿಳಿಸಿದರು ಮಾಜಿ ಅಲ್ಪಸಂಖ್ಯಾತ ಇಲಾಖೆ ಸಚಿವರಾದ ಶ್ರೀಮಂತ ಪಾಟೀಲ್ ಅವರು ತಾವು ಸಚಿವರಾಗಿದ್ದಾಗ ಜೈನ ಸಮಾಜದ ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡಿದ್ದೇನೆ. ಶ್ರವಣಬೆಳಗೊಳದ ಅಭಿವೃದ್ಧಿಗಾಗಿ ಐವತ್ತು ಕೋಟಿ ರೂಪಾಯಿ ಅನುದಾನ ಮಂಜೂರು ಗೊಳಿಸಿದ್ದೇನೆ. ಇದಲ್ಲದೆ ಇನ್ನುಳಿದ ಜೈನ ಬಸದಿಗಳಿಗೆ ಅನುದಾನ ನೀಡಿದ್ದೇನೆ ಎಂದರು.
ಮಾಜಿ ಸಚಿವ ವೀರಕುಮಾರ ಪಾಟೀಲ, ಮಹಾರಾಷ್ಟ್ರದ ಶಿರೋಳದ ಶಾಸಕ ರಾಜೇಂದ್ರ ಯಡ್ರಾಂವಿಕರ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಬೆಳಗಾವಿ ಮಾಜಿ ಶಾಸಕ ಸಂಜಯ ಪಾಟೀಲ ತಮ್ಮ ಅನಸಿಕೆಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಉತ್ತಮ ಪಾಟೀಲ , ಮಹಾವೀರ ನೀಲಜಗಿ, ಈರಗೌಡ ಪಾಟೀಲ್, ರುದ್ರಗೌಡ ಪಾಟೀಲ್ ಅರುಣ್ ಯಲಗುದ್ರಿ ಧೂಳಗೌಡ ಪಾಟೀಲ್, ದಾದಾ ಪಾಟೀಲ, ಸುಶೀಲ್ ಬೆಳಗಲಿ, ಎನ್. ಎ ಮಗದುಮ,, ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Spread the love

About Laxminews 24x7

Check Also

ಶೋಭಾ ಕರಂದ್ಲಾಜೆ ಆಯ್ಕೆ ಅಸಿಂಧು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Spread the loveಶೋಭಾ ಕರಂದ್ಲಾಜೆ ಆಯ್ಕೆ ಅಸಿಂಧು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್ ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ