ಅಭಿಮಾನಿಗಳಲ್ಲಿ ಹಾಗೂ ಕಾರ್ಯಕರ್ತರಲ್ಲಿ ನನ್ನದೊಂದು ವಿನಂತಿ. !!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟ್ರೋಪಿಗೆದ್ದು ತವರಿಗೆ ಆಗಮಿಸಿದ ಸಂತೋಷದ ಕ್ಷಣದಲ್ಲಿ ತಮ್ಮ ನೆಚ್ಚಿನ ಆಟಗಾರರನ್ನ ಕಣ್ತುಂಬಿಕೊಳ್ಳುವ ಸಲುವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಗೂ ವಿಧಾನಸೌಧದ ಮುಂಬಾಗದ ರಸ್ತೆಗಳಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ ಸಂದರ್ಭದಲ್ಲಿ ದುರದೃಷ್ಟವಶಾತ್ ಕಾಲ್ತುಳಿತ ಸಂಭವಿಸಿ 10 ಕ್ಕೂ ಹೆಚ್ಚು ಜನರು ಅಸುನೀಗಿದ್ದಾರೆ ಮತ್ತು 30 ಕ್ಕೂ ಹೆಚ್ಚು ಜನರು ತೀವ್ರ ಅಸ್ವಸ್ಥ ಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ನೋವಿನ ಸುದ್ದಿ ಮಾಧ್ಯಮಗಳ ಮೂಲಕ ಗೊತ್ತಾಗಿದೆ.
18 ವರ್ಷಗಳ ನಂತರ ನಮ್ಮ ತಂಡ ಟ್ರೋಫಿ ಗೆದ್ದಿದೆ ಎನ್ನುವ ಖುಷಿಯಲ್ಲಿರಬೇಕಿದ್ದ ನಾವು ಆಕಸ್ಮಿಕವಾಗಿ ನಡೆದ ದುರಂತದಿಂದ ಶೋಕಸಾಗರದಲ್ಲಿ ಮುಳುಗುವಂತಾಗಿದೆ.
ದುರಂತದಲ್ಲಿ ಸಾವನ್ನಪ್ಪಿದ ಎಲ್ಲರ ಆತ್ಮಕ್ಕೂ ಭಗವಂತ ಶಾಂತಿ ನೀಡಲಿ ಅವರ ಕುಟುಂಬಗಳಿಗೆ ದುಃಖ ಸಹಿಸಿ ಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಹುಟ್ಟುಹಬ್ಬ ಆಚರಣೆಯಿಲ್ಲ.!!
ಜೂನ್ 5 ನನ್ನ ಹುಟ್ಟಿದ ದಿನ, ಆವತ್ತು ಹುಟ್ಟುಹಬ್ಬವನ್ನು ಆಚರಿಸಲು ಅಭಿಮಾನಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ತಯಾರಿ ಮಾಡಿಕೊಂಡಿದ್ದರು.ಆದರೆ ನಾಡು ದುಃಖದಲ್ಲಿರುವಾಗ ಹುಟ್ಟುಹಬ್ಬವನ್ನು ಸಂಭ್ರಮಿಸುವುದು ಸರಿಯಲ್ಲವಾದ್ದರಿಂದ ಯಾರೂ ಕೂಡ ಕೇಕ್, ಹಾರ,ಹೂ ಗುಚ್ಚ ಮುಂತಾದವುಗಳನ್ನು ತರಬಾರದು ಮತ್ತು ನಿಮ್ಮ ಪ್ರೀತಿಯ ಹಾರೈಕೆ ಯಾವತ್ತೂ ಇರಲಿ ಎಂದು ಈ ಮೂಲಕ ವಿನಂತಿಸುತ್ತೇನೆ.
ಮಂಕಾಳ. ಎಸ್. ವೈದ್ಯ
ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು
Laxmi News 24×7